Headlines

ಕೇರಳ ಚುನಾವಣೆ ಹಿನ್ನೆಲೆ ಹೆಚ್ಚಿದ ಅಕ್ರಮ, ಮಂಗಳಾ ಎಕ್ಸ್‌ಪ್ರೆಸ್‌ನಲ್ಲಿದ್ದ ಆ ಬ್ಯಾಗ್ ತೆರೆದಾಗ ಅಧಿಕಾರಿಗಳೇ ಶಾಕ್! | Excise Raid On Mangaluru Lakshadweep Express Illegal Liquor Seized Ahead Of Kerala Elections Gdp

ಕೇರಳ ಚುನಾವಣೆ ಹಿನ್ನೆಲೆ ಹೆಚ್ಚಿದ ಅಕ್ರಮ, ಮಂಗಳಾ ಎಕ್ಸ್‌ಪ್ರೆಸ್‌ನಲ್ಲಿದ್ದ ಆ ಬ್ಯಾಗ್ ತೆರೆದಾಗ ಅಧಿಕಾರಿಗಳೇ ಶಾಕ್! | Excise Raid On Mangaluru Lakshadweep Express Illegal Liquor Seized Ahead Of Kerala Elections Gdp



ಕೇರಳ ಚುನಾವಣೆ ಹಿನ್ನೆಲೆ ಹೆಚ್ಚಿದ ಅಕ್ರಮ, ಮಂಗಳಾ ಎಕ್ಸ್‌ಪ್ರೆಸ್‌ನಲ್ಲಿದ್ದ ಆ ಬ್ಯಾಗ್ ತೆರೆದಾಗ ಅಧಿಕಾರಿಗಳೇ ಶಾಕ್! | Excise Raid On Mangaluru Lakshadweep Express Illegal Liquor Seized Ahead Of Kerala Elections Gdp

ಕೇರಳ ಚುನಾವಣೆಯ ಹಿನ್ನೆಲೆಯಲ್ಲಿ, ಅಬಕಾರಿ ಇಲಾಖೆಯು ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿನಲ್ಲಿ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಜನರಲ್ ಬೋಗಿಯಲ್ಲಿದ್ದ ಅನುಮಾನಾಸ್ಪದ ಬ್ಯಾಗ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬಿಯರ್ ಕ್ಯಾನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯು ಅಕ್ರಮ ಮದ್ಯ ಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ನಡೆದಿದೆ.

ಕೇರಳ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆ ಅಕ್ರಮ ಮದ್ಯ ಸಾಗಾಟಕ್ಕೆ ತಡೆಹಿಡಿಯಲು ಅಬಕಾರಿ ಇಲಾಖೆ ಕಟ್ಟೆಚ್ಚರ ವಹಿಸಿದೆ. ಇದರ ಭಾಗವಾಗಿ ಗೋವಾದ ಮಡಗಾಂವ್‌ನಿಂದ ಕಾರವಾರ ಮಾರ್ಗವಾಗಿ ಕೇರಳದತ್ತ ಸಾಗುತ್ತಿದ್ದ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿನ ಮೇಲೆ ಅಬಕಾರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಚುನಾವಣಾ ಹಿನ್ನೆಲೆ ನೆರೆ ರಾಜ್ಯಗಳ ಗಡಿಭಾಗಗಳು ಹಾಗೂ ರೈಲು ಮಾರ್ಗಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರಂದು ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು ಮಡಗಾಂವ್‌ನಿಂದ ಕುಮಟಾವರೆಗೆ ರೈಲಿನಲ್ಲಿ ಪ್ರಯಾಣಿಸಿ, ಬೋಗಿಗಳಲ್ಲಿ ಸುದೀರ್ಘ ತಪಾಸಣೆ ನಡೆಸಿತು.

ಅನುಮಾನಾಸ್ಪದ ಬ್ಯಾಗ್‌ನಲ್ಲಿ ಮದ್ಯ ಪತ್ತೆ

ರೈಲಿನ ಜನರಲ್ ಬೋಗಿಗಳ ಪರಿಶೀಲನೆಯ ವೇಳೆ, ಒಂದು ಬೋಗಿಯಲ್ಲಿ ಅನುಮಾನಾಸ್ಪದವಾಗಿ ಬಿಟ್ಟುಹೋಗಿದ್ದ ಬ್ಯಾಗ್‌ ಪತ್ತೆಯಾಯಿತು. ಬ್ಯಾಗ್‌ ತೆರೆಯುತ್ತಿದ್ದಂತೆ ಅದರೊಳಗೆ ತಲಾ 500 ಮಿಲಿ ಸಾಮರ್ಥ್ಯದ 24 ಕಿಂಗ್‌ಫಿಶರ್ ಪ್ರೀಮಿಯಂ ಬಿಯರ್ ಕ್ಯಾನ್‌ಗಳು ಅಡಗಿಸಿಟ್ಟಿರುವುದು ಕಂಡುಬಂದಿದೆ.

ಆರೋಪಿಯ ಸುಳಿವು ಇಲ್ಲ

ಬ್ಯಾಗ್‌ ಯಾರದ್ದು ಎಂಬುದು ಪತ್ತೆಯಾಗದೆ, ಯಾವುದೇ ಪ್ರಯಾಣಿಕರು ಅದರ ಮಾಲೀಕತ್ವವನ್ನು ಒಪ್ಪಿಕೊಳ್ಳದ ಕಾರಣ, ಅಬಕಾರಿ ಅಧಿಕಾರಿಗಳು ಮದ್ಯವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಂಟಿ ಕಾರ್ಯಾಚರಣೆ

ಈ ಕಾರ್ಯಾಚರಣೆಯನ್ನು ಕಾರವಾರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ, ಅಂಕೋಲಾ ಮತ್ತು ಕಾರವಾರ ವಲಯದ ಅಬಕಾರಿ ನಿರೀಕ್ಷಕರು ಹಾಗೂ ಜಿಲ್ಲಾ ತಂಡದ ಸಿಬ್ಬಂದಿ ಸಂಯುಕ್ತವಾಗಿ ನಡೆಸಿದರು.

ಕಟ್ಟೆಚ್ಚರ ಮುಂದುವರಿಕೆ

ಕೇರಳ ಚುನಾವಣೆಯ ಹಿನ್ನೆಲೆ ಅಕ್ರಮ ಮದ್ಯ ಸಾಗಾಟವನ್ನು ತಡೆಗಟ್ಟಲು ಇಂತಹ ತಪಾಸಣೆಗಳನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಮಾರ್ಗಗಳಲ್ಲಿಯೂ ತೀವ್ರ ನಿಗಾವಹಿಸಲಾಗಿದ್ದು, ಸಂಶಯಾಸ್ಪದ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.



Source link

Leave a Reply

Your email address will not be published. Required fields are marked *