
ಕನ್ನಡ ಸೀರಿಯಲ್ಗಳಲ್ಲಿ ಪ್ರೇಮ ನಿವೇದನೆ ಮಾಡಲು ನಾಯಕಿಯರಿಗೆ ಮದ್ಯ ಕುಡಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಅಮೃತಧಾರೆ ಸೀರಿಯಲ್ನಲ್ಲಿ ಭೂಮಿಕಾಗೆ ಕುಡಿಸಿದ ಪ್ರಸಂಗವು ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದ್ದು, ಇಂತಹ ಕಥಾಹಂದರಕ್ಕೆ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.<img><p>ಪ್ರೇಮ ನಿವೇದನೆ ಮಾಡಿಕೊಳ್ಳಲು, ನೇರಾನೇರವಾಗಿ ಹೇಳುವ ಧೈರ್ಯ ಗಂಡ-ಹೆಂಡತಿಗೇ ಇಲ್ಲ ಎನ್ನುವುದು ಬಹುತೇಕ ಸೀರಿಯಲ್ಗಳ ತಿರುಳು. ಮದುವೆಯಾದರೂ ದಾಂಪತ್ಯ ಜೀವನ ನಡೆಸದೇ ಕೊನೆಗೆ ಪ್ರೀತಿ ಆಗಿದೆ ಎಂದು ಹೇಳಲು ಇಬ್ಬರಲ್ಲಿ ಒಬ್ಬರಿಗೆ ಕುಡಿಸುವುದು ಮಾಮೂಲಾಗಿಬಿಟ್ಟಿದೆ.</p><img><p>ಈ ಮೊದಲು ಎಲ್ಲಾ ಭಾಷೆಗಳ ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ ಅಕ್ರಮ ಸಂಬಂಧಗಳೇ ರಾರಾಜಿಸುತ್ತಿದ್ದವು. ಈಗಲೂ ಅದು ಇಲ್ಲ ಎಂದೇನಲ್ಲ. ಒಂದೇ ರೀತಿಯ ಕಥೆಗಳನ್ನೇ ತಿರುವು ಮುರುವು ಮಾಡುವುದು ಮಾಮೂಲು. ಆದರೆ ಇದೀಗ ಹೆಂಗಸರನ್ನು ಕುಡುಕನ್ನಾಗಿ ಮಾಡುವುದು ಹೆಚ್ಚಾಗ್ತಿವೆ. ಈ ಹಿಂದೆ ಅಮೃತಧಾರೆ, ಬ್ರಹ್ಮಗಂಟು ಸೇರಿದಂತೆ ವಿವಿಧ ಸೀರಿಯಲ್ಗಳಲ್ಲಿ ಇದೇ ಥಿಯರಿ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅಮೃತಧಾರೆಯಲ್ಲಿ ಪುನಃ ಭೂಮಿಕಾಗೆ ಕುಡಿಸಲಾಗಿದೆ.</p><img><p>ಮಲ್ಲಿ ಮತ್ತು ಸುನಿಲ್ ಹನಿಮೂನ್ಗೆ ಹೋಗಿದ್ದು, ಅದಲ್ಲಿ ಭೂಮಿಕಾ-ಗೌತಮ್ ಮತ್ತು ಆನಂದ್-ಅಪರ್ಣಾ ಜೋಡಿಯೂ ಹೋಗಿದೆ. ಆಗ ಭೂಮಿಕಾ ತಮ್ಮ ಮನಸ್ಸಿನಲ್ಲಿ ಇರೋದನ್ನೆಲ್ಲಾ ಹೇಳಿಕೊಳ್ಳಬೇಕಲ್ಲ, ಅದಕ್ಕಾಗಿ ಅವಳಿಗೆ ಆನಂದ್ ಕೂಲ್ ಡ್ರಿಂಕ್ಸ್ನಲ್ಲಿ ಮದ್ಯ ಸೇರಿಸಿ ಕೊಟ್ಟಿದ್ದಾನೆ.</p><img><p>ಇದರಿಂದ ಗೌತಮ್ ದಿವಾನ್ ಭೂಮಿಕಾಗೆ ಮೋಸ ಮಾಡಿದ್ದಾರೆ ಎಂದು ಹೇಳಿರೋ ಭೂಮಿಕಾ ನನಗೆ ನ್ಯಾಯ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾಳೆ.</p><img><p>ಇದು ನೋಡಲು ಮಜಾ ಎನ್ನಿಸಬಹುದು, ವೀಕ್ಷಕರು ಇದನ್ನು ತಮಾಷೆಯಾಗಿಯೂ ತೆಗೆದುಕೊಳ್ಳಬಹುದು. ಆದರೆ ಪದೇ ಪದೇ ಈ ರೀತಿ ಹೆಂಗಸರಿಗೂ ಕುಡಿಸುವುದಕ್ಕೆ ಕೆಲವು ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p><img><p>ಒಂದೇ ಸಿದ್ಧಾಂತವನ್ನು ಪದೇ ಪದೇ ತೋರಿಸಿದರೆ ಅದು ಜೋಕ್ ಎನ್ನಿಸುವುದಿಲ್ಲ. ಸೀರಿಯಲ್ ನೋಡಿ ಅದರಿಂದ ಪ್ರಭಾವಿತರಾಗುವವರು ಅದೆಷ್ಟೋ ಮಂದಿ ಇದ್ದಾರೆ. ಇಂಥ ಅಹಸ್ಯ ನಿಲ್ಲಿಸಿ ಎಂದು ಕಿಡಿ ಕಾರುತ್ತಿದ್ದಾರೆ.</p>
Source link
Amruthadhaare: ಅಕ್ರಮ ಸಂಬಂಧ ಸಾಕು, ಹೆಂಗಸ್ರೆಲ್ಲಾ ಕುಡುಕರಾಗಿ ಎಂದು ಸಾರುತಿವೆ ಸೀರಿಯಲ್ಗಳು?