
ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ಇರುವ ಜಾಗ ಪತ್ತೆಹಚ್ಚಲು ದಿಯಾ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾಳೆ. ಶಕುನಿ ಮಾಮಾನನ್ನು ಬಳಸಿಕೊಂಡು ಜಿಪಿಎಸ್ ಮೂಲಕ ಎಲ್ಲರನ್ನೂ ಟ್ರ್ಯಾಕ್ ಮಾಡುತ್ತಿದ್ದಾಳೆ. ದಿಯಾಳ ಈ ಕುತಂತ್ರದಿಂದ ಪತಿ ಜೈದೇವ್ ಕೂಡ ಅಚ್ಚರಿಗೊಂಡಿದ್ದಾನೆ.<img><p>ಅಮೃತಧಾರೆಯಲ್ಲಿ ಸದ್ಯ ಜೈದೇವನ ಪತ್ನಿ ದಿಯಾ ಖತರ್ನಾಕ್ ಪ್ಲ್ಯಾನ್ ಮಾಡಿದ್ದಾಳೆ. ಇವಳ ಹಿಂದಿರೋ ಉದ್ದೇಶ ತಿಳಿದು ವೀಕ್ಷಕರಷ್ಟೇ ಅಲ್ಲದೇ ಜೈದೇವನೂ ಸುಸ್ತಾಗಿ ಹೋಗಿದ್ದಾನೆ. ಅಷ್ಟಕ್ಕೂ ಮಲ್ಲಿ, ಸುನಿಲ್ ಹನಿಮೂನ್ಗೆ ಹೋಗಿದ್ದಾರೆ. ಅವರ ಜೊತೆ ಗೌತಮ್-ಭೂಮಿಕಾ, ಆನಂದ್-ಅಪರ್ಣಾ ಅಷ್ಟೇ ಅಲ್ಲದೇ ಶಕುನಿ ಮಾಮಾ ಕೂಡ ಟೂರ್ಗೆ ಹೋಗಿದ್ದಾರೆ.</p><img><p>ಶಕುನಿ ಮಾಮಾ ಗೌತಮ್ ಪರವಾಗಿ ಕೆಲಸ ಮಾಡ್ತಿರೋದು ಗೊತ್ತಾಗಿ, ಅವನನ್ನು ಕಿಡ್ನ್ಯಾಪ್ ಮಾಡಿಸಿದ್ದ ಜೈದೇವ. ಆದರೆ ದಿಯಾ ಬಂದು ಆತನನ್ನು ಬಿಡಿಸಿದ್ದಾಳೆ. ಜೈದೇವ್ ಕೆಟ್ಟವನು, ನಾನು ನಿಮ್ಮ ಪರ ಎಂದೆಲ್ಲಾ ನಂಬಿಸಿದ್ದಾಳೆ.</p><img><p>ಆದರೆ, ಆಕೆ ಮಾಡಿದ್ದ ಪ್ಲ್ಯಾನೇ ಬೇರೆ. ಶಕುನಿ ಮಾಮಾನ್ನು ಬಿಟ್ಟರೆ, ಅವನು ನೇರವಾಗಿ ಗೌತಮ್ ಬಳಿ ಹೋಗ್ತಾನೆ ಎನ್ನುವುದು ತಿಳಿದಿದ್ದರಿಂದಲೇ ಮೊಬೈಲ್ಗೆ ಜಿಪಿಎಸ್ ಹಾಕಿ ಕಳುಹಿಸಿದ್ದಾಳೆ.</p><img><p>ತನ್ನ ಪ್ಲ್ಯಾನ್ ಅನ್ನು ಜೈದೇವ್ಗೆ ಹೇಳಿದ್ದಾಳೆ ದಿಯಾ. ಎಲ್ಲರೂ ಎಲ್ಲಿಗೆ ಕಣ್ಣು ತಪ್ಪಿಸಿ ಹೋದರು ಎಂದು ಅರಿಯದ ಜೈದೇವ್ ಚಿಂತಾಕ್ರಾಂತನಾಗಿ ಕುಳಿತಿದ್ದ. ಆದರೆ ದಿಯಾ ಬಂದು ತಮ್ಮಪ್ಲ್ಯಾನ್ ಹೇಳಿದ್ದಾಳೆ.</p><img><p>ಕೊನೆಗೆ ಶಕುನಿ ಮಾಮಾಗೆ ಕಾಲ್ ಮಾಡಿ ಎಲ್ಲಿದ್ದೀರಿ ಎಂದು ಕೇಳಿ ಎಲ್ಲಾ ವಿಷಯ ತಿಳಿದುಕೊಂಡಿದ್ದಾಳೆ. ಶಕುನಿ ಮಾಮಾಗೆ ದಿಯಾಳ ಕುತಂತ್ರ ಗೊತ್ತಾಯ್ತಾ, ಇಲ್ವಾ, ಅವನು ನಿಜ ಹೇಳಿದ್ನಾ ಅಥ್ವಾ ದಿಯಾಳ ಕುತಂತ್ರ ತಿಳಿದು ಸುಳ್ಳು ಹೇಳಿದ್ನಾ ಎನ್ನೋದು ಈಗಿರುವ ಕುತೂಹಲ.</p><img><p>ಆದರೂ ಸದ್ಯಕ್ಕಂತೂ ದಿಯಾ ಶಕುನಿ ಮಾಮಾಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ, ಕೇಡಿ ಜೆಡಿಯ ಪತ್ನಿಯಾಗಿ ಅವನನ್ನೂ ಮೀರಿಸಿದ್ದಾಳೆ. </p>
Source link
Amruthadhaare: ಅಲೆಲೆ… ಶಕುನಿ ಮಾಮಾನ್ನೇ ಯಾಮಾರಿಸಿದ್ಲು ಲೇಡಿ ಕೇಡಿ- ಜೈದೇವ್ನನ್ನೇ ಮೀರಿಸಿದ ದಿಯಾ!