
ಕಾನ್ಪುರ, ಏ. 8: ಉತ್ತರ ಪ್ರದೇಶದ ಕಾನ್ಪುರದ ಮುಬಾರಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಘಟನೆಯಲ್ಲಿ ಲಿಫ್ಟ್ ಕೇಬಲ್ ತುಂಡಾಗಿ ಬಿದ್ದ ಪರಿಣಾಮ ವರನ ಸಹೋದರ ಗಂಭೀರ ಗಾಯಗೊಂಡಿದ್ದಾರೆ. ಗ್ಯಾಸ್ ಕೊರತೆಯಿಂದಾಗಿ ಅಡುಗೆಗೆ ತರಲು ಹೋದಾಗ ಈ ಅನಾಹುತ ಸಂಭವಿಸಿದೆ. ಮದುವೆ ಸಮಾರಂಭದ ವೇಳೆ ಅಡುಗೆಗೆ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿತ್ತು. ಈ ಫ್ಟ್ಗಾಗಿನ ಸಹೋದರ ಕೆಳಮಹಡಿಯಿಂದ ಕಟ್ಟಿಗೆಯನ್ನು ಲಿ ಮೂಲಕ ತರಲು ಪ್ರಯತ್ನಿಸಿದರು. ಲಿಫ್ಟ್ನಲ್ಲಿ ಕಟ್ಟಿಗೆಯನ್ನು ತುಂಬಿಸಿ ಕೆಳಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಲಿಫ್ಟ್ನ ಕೇಬಲ್ ತುಂಡಾಗಿದೆ. ಕೇಬಲ್ ಕಟ್ ಆದ ತಕ್ಷಣ ಲಿಫ್ಟ್ ವೇಗವಾಗಿ ನೆಲಕ್ಕೆ ಅಪ್ಪಳಿಸಿದೆ. ಲಿಫ್ಟ್ ನೆಲಕ್ಕೆ ಅಪ್ಪಳಿಸಿದ ತೀವ್ರತೆಗೆ ಅದರಲ್ಲಿದ್ದ ವರನ ಸಹೋದರನಿಗೆ ಗಂಭೀರವಾದ ಪೆಟ್ಟು ಬಿದ್ದಿದೆ. ತಕ್ಷಣವೇ ಅಲ್ಲಿದ್ದವರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸೂಚಿಸಲಾಗಿದೆ. ಈ ಕಲ್ಯಾಣ ಮಂಟಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯ, ನೋಡುಗರ ಎದೆಯ ಝಲ್ಲೆನಿಸುವಂತಿದೆ. ಕಲ್ಯಾಣ ಮಂಟಪದ ಲಿಫ್ಟ್ ಸರಿಯಾದ ನಿರ್ವಹಣೆ ಇಲ್ಲದಿರುವುದೇ ಈ ಘಟನೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾಗ, ಕಲ್ಯಾಣ ಮಂಟಪದ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ