ಕೋಲಾರದಲ್ಲಿ ಪಿಂಚಣಿ ಹಣಕ್ಕೂ ಪರದಾಟ: ನಿತ್ಯ ಅಲೆದು ಅಲೆದು ಕಂಗಾಲಾದ ವೃದ್ಧರು, ಅಂಗವಿಕಲ ಪಿಂಚಣಿದಾರರು

ಕೋಲಾರದಲ್ಲಿ ಪಿಂಚಣಿ ಹಣಕ್ಕೂ ಪರದಾಟ: ನಿತ್ಯ ಅಲೆದು ಅಲೆದು ಕಂಗಾಲಾದ ವೃದ್ಧರು, ಅಂಗವಿಕಲ ಪಿಂಚಣಿದಾರರು


ಕೋಲಾರದಲ್ಲಿ ಪಿಂಚಣಿ ಹಣಕ್ಕೂ ಪರದಾಟ: ನಿತ್ಯ ಅಲೆದು ಅಲೆದು ಕಂಗಾಲಾದ ವೃದ್ಧರು, ಅಂಗವಿಕಲ ಪಿಂಚಣಿದಾರರು

ಕೋಲಾರ, ಏಪ್ರಿಲ್ 08: ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ (ಪಿಂಚಣಿ) ಇವೆಲ್ಲವೂ ಸರ್ಕಾರ ಮನೆ ಬಾಗಿಲಿಗೆ ತಲುಪಬೇಕಾದ ಯೋಜನೆಗಳು. ಆ ಹಣವನ್ನು ನಂಬಿ ಹಿರಿಯ ಜೀವಗಳು ಬದುಕುತ್ತಿವೆ. ಆದರೆ ತಮ್ಮ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಡುಬಿಸಿಲಿನಲ್ಲಿ ಅಂಚೆ ಕಚೇರಿ ಬಳಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೆ ಕಮಿಷನ್ ಕೊಟ್ಟರು ಹಣ ಮಾತ್ರ ಸರಿಯಾದ ಸಮಯಕ್ಕೆ ಸಿಗದಿರುವುದು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದೆ.

ಎಲ್ಲಾ ರೀತಿಯ ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಪಿಂಚಣಿ ಹಣವನ್ನು ತಲುಪಿಸಲು ಸಾಧ್ಯವಾಗಲಿಲ್ಲ, ಜೊತೆಗೆ ಗ್ಯಾರಂಟಿಗಳ ಮೂಲಕ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇಲ್ಲಿ ತಮ್ಮ ಖಾತೆಯಲ್ಲಿರುವ ಹಣಕ್ಕಾಗಿ ದಿನಗಟ್ಟಲೇ ಕಾದು ವಾಪಸ್ ಹೋಗಬೇಕಿದೆ. ಕೋಲಾರ ಹೊರ ವಲಯದಲ್ಲಿರುವ ಆರೋಗ್ಯಾಧಿಕಾರಿ ಕಚೇರಿಯ ಅಂಚೆ ಕಚೇರಿ ಶಾಖೆ ಇದೆ. ಇಲ್ಲಿ ರಮೇಶ್ ಎಂಬ ಪೋಸ್ಟ್ ಮಾಸ್ಟರ್ ಜೊತೆಗೆ ಒಂದಷ್ಟು ಜನ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: ಅನ್ನ, ನೀರು ಸಿಗದೇ ವಾನರ ಸೇನೆ ಪರದಾಟ: ಕಂಡಕಂಡವರ ಮೇಲೆ ದಾಳಿ; 15ಕ್ಕೂ ಹೆಚ್ಚು ಜನ್ರರಿಗೆ ಗಾಯ

ಕೋಲಾರ ತಾಲೂಕಿನ ವಿನೋಭ ನಗರ, ದೊಡ್ಡ ಹಸಾಳ, ಚಿಕ್ಕ ಹಸಾಳ, ಗಾಜದಿನ್ನೆ, ಪಾಕರಹಳ್ಳಿ, ಈಕಂಬಳ್ಳಿ ಸೇರಿ ಒಂದಷ್ಟು ಗ್ರಾಮಗಳ ಜನರು ಅಂಚೆ ಕಚೇರಿಗೆ ಬರಬೇಕು. ಆದರೆ ಇಲ್ಲಿ ಕೆಲಸ ಮಾಡುವವರು ಸರಿಯಾದ ಸಮಯಕ್ಕೆ ವೃದ್ಧರು, ಅಂಗವಿಕಲರು, ಮಹಿಳೆಯರಿಗೆ ಪಿಂಚಣಿ ಹಣ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ದಿನಗಟ್ಟಲೇ ಕಾದು ಕುಳಿತರೂ ಹಣ ಇಲ್ಲ ಎಂದು ವಾಪಸ್ ಕಳುಹಿಸುತ್ತಾರೆ.

ಪಿಂಚಣಿದಾರರು ಹೇಳುವುದೇನು?

ಇದು ಪ್ರತಿ ತಿಂಗಳು ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಇಂತಹ ಪ್ರತಿನಿತ್ಯ ಇಳಿ ವಯಸ್ಸಿನ ಜೀವಗಳು ಕಚೇರಿಗೆ ಬರುವುದು, ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ತಮಗೆ ಬರುವ ಒಂದು ಸಾವಿರ ರೂ. ಪಿಂಚಣಿ ಹಣ ಪಡೆಯಲು ನಿತ್ಯ ಪರದಾಟ ಮಾಡಬೇಕಿದೆ ಎಂಬುವುದು ನಂಜಪ್ಪ ಅವರ ಮಾತು.

ಪ್ರತಿ ತಿಂಗಳು ವಿವಿಧ ಪಿಂಚಣಿದಾರರ ಖಾತೆಗಳಿಗೆ ಸರ್ಕಾರದಿಂದ ಹಣ ಹಾಕದಿದ್ದರೆ. ಹೀಗೆ ಖಾತೆಗಳಿಗೆ ಹಣವನ್ನು ಹಾಕಲು ಅಂಚೆ ಕಚೇರಿಗೆ ಪಿಂಚಣಿದಾರರಿಗೆ ಬರುವ ಅಂಚೆ ಕಚೇರಿಯ ಸಿಬ್ಬಂದಿಗೆ ಹಣ ಇಲ್ಲ, ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸಬೂಬು ಹೇಳಿ ಕಳಿಸುತ್ತಾರೆ. ಇಳಿವಯಸ್ಸಿನ ವೃದ್ದರು ಅಂಗವಿಕಲರು ತಮ್ಮ ಹಣಕ್ಕಾಗಿ ಅಂಚೆ ಕಚೇರಿಗೆ ಅಲೆದಾಡಬೇಕು. ಒಮ್ಮೊಮ್ಮೆ ಅವರು ಅಂಚೆ ಕಚೇರಿಯಲ್ಲಿ ಇಲ್ಲ ಅಂದರೆ ಅವರು ಬರುವವರೆಗೂ ಕಾಯಬೇಕು. ಅಂಚೆ ಕಚೇರಿಯ ಸುತ್ತಮುತ್ತ ಇರುವ ಮರಗಳ ಕೆಳಗೆ, ಹೀಗೆ ಎಲ್ಲೆಂದರಲ್ಲಿ ಚಾತಕ ಪಕ್ಷಿಗಳಂತೆ ಕಾದು ಕುಳಿತುಕೊಳ್ಳಬೇಕು.

30 ರಿಂದ 50 ರೂ ಕಮಿಷನ್

ಸರ್ಕಾರ ನಿಜವಾಗಿಯೂ ಹಣವನ್ನು ಪಡೆಯಲು ಹಿರಿಯ ಜೀವಗಳು ಪರದಾಡುವ ಸ್ಥಿತಿಯನ್ನು ಕಂಡರೆ ಅಯ್ಯೋ ಎನ್ನಿಸುತ್ತದೆ. ನಮಗೆ ಇಲ್ಲಿ ಬಂದು ಕಾಯೋದು ಕಷ್ಟವಾಗುತ್ತಿದೆ. ಇಲ್ಲಿ ಕುಡಿಯೋದಕ್ಕೆ ಕನಿಷ್ಠ ನೀರು ಇಲ್ಲ. ನಮ್ಮ ಗ್ರಾಮಗಳಿಗೆ ಬಂದು ಹಣ ಕೊಟ್ಟರೆ ಅನುಕೂಲವಾಗುತ್ತೆ. ಆದರೆ ಅಂಚೆ ಕಚೇರಿ ಬಳಿಗೆ ಬಂದರೆ 1200 ಪಿಂಚಣಿಗೆ 30 ರೂ ಕಮಿಷನ್ ಹಾಗೂ ಗ್ರಾಮಗಳಿಗೆ ಅವರೇ ಬಂದು ಕೊಟ್ಟರೆ 50 ರೂ ಕಮಿಷನ್ ಕೊಡಬೇಕಿದೆ. ನಿತ್ಯ ಅಂಚೆ ಕಚೇರಿಗೆ ಬೆಳ್ಳಿಗ್ಗೆ 9 ಗಂಟೆಗೆ ಬಂದು ಕುಳಿತರೆ ಅಂಚೆ ಕಚೇರಿ ಸಿಬ್ಬಂದಿ 12 ಗಂಟೆಗೆ ಹಣ ಇಲ್ಲ ಎಂದು ನೆಪ ಹೇಳುತ್ತಾರೆ. ಹಣ ಸಿಗದೆ ಪಿಂಚಣಿದಾರರು ನಿರಾಸೆಯಿಂದ ವಾಪಸ್ ತೆರಳುತ್ತಾರೆ.

ಇದನ್ನೂ ಓದಿ: ಬೆಸ್ಕಾಂ ವಿದ್ಯುತ್ ಕಡಿತ: ಮಾರ್ಚ್ 22 ರಿಂದ 25 ರ ವರೆಗೆ ಬೆಸ್ಕಾಂ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ಕಡಿತ, ವಿವರ ಇಲ್ಲಿದೆ

ಪ್ರತಿ ತಿಂಗಳು ಸರ್ಕಾರ ಕೊಡುವ ಸಾವಿರ ರೂಪಾಯಿ ಸಣ್ಣ ಮೊತ್ತವಾಗಿದ್ದರೂ ಅದನ್ನೇ ನಂಬಿಕೊಂಡು ಗಂಜಿ ಕುಡಿಯುವ ಜೀವಕ್ಕೆ ಅದು ದೊಡ್ಡ ಮೊತ್ತ. ಇಂತಹ, ಅಂಗವಿಕಲರನ್ನ ಅಲೆದಾಡಿಸುವ ಅಂಚೆ ಕಚೇರಿಗಳು, ಪೋಸ್ಟ್ ಮಾಸ್ಟರ್ಗಳ ವಿರುದ್ಧ ಕ್ರಮಕೈಗೊಂಡು ಹಿರಿಯರು ಆತಂಕವನ್ನು ನಿವಾರಿಸಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *