Chanakya Niti: ಈ 3 ವಿಷಯವನ್ನು ರಹಸ್ಯವಾಗಿಡುವುದು ಬುದ್ಧಿವಂತರ ಲಕ್ಷಣ

Chanakya Niti: ಈ  3 ವಿಷಯವನ್ನು ರಹಸ್ಯವಾಗಿಡುವುದು ಬುದ್ಧಿವಂತರ ಲಕ್ಷಣ




<p>ಎಲ್ಲವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಇಂದಿನ ಕಾಲದಲ್ಲಿ ಈ ಪಾಠವು ಇನ್ನಷ್ಟು ಮುಖ್ಯವಾಗುತ್ತದೆ. ಜಗತ್ತಿಗೆ ಎಲ್ಲವನ್ನೂ ಹೇಳದವನು ಬುದ್ಧಿವಂತ ವ್ಯಕ್ತಿ.</p><img><p>ಚಾಣಕ್ಯನ ಪ್ರಕಾರ, ಕೆಲವು ವಿಷಯಗಳನ್ನು ರಹಸ್ಯವಾಗಿ ಅಥವಾ ಸೀಕ್ರೇಟ್ ಆಗಿಡುವುದು ಬುದ್ಧಿವಂತರ ಲಕ್ಷಣ. ಒಂದು ವೇಳೆ ಈ ವಿಷಯಗಳನ್ನ ಎಲ್ಲರ ಮುಂದೆ ಹೇಳಿಕೊಂಡರೆ ಜನರ ಕಣ್ಣುಗಳು ಮತ್ತು ಹಸ್ತಕ್ಷೇಪವು ಆ ವಿಷಯವನ್ನೇ ದೊಡ್ಡದು ಮಾಡಿ ಸಮಸ್ಯೆ ತಂದೊಡ್ಡಬಹುದು.</p><img><p>ಎಲ್ಲವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಇಂದಿನ ಕಾಲದಲ್ಲಿ ಈ ಪಾಠವು ಇನ್ನಷ್ಟು ಮುಖ್ಯವಾಗುತ್ತದೆ. ಜಗತ್ತಿಗೆ ಎಲ್ಲವನ್ನೂ ಹೇಳದವನು ಬುದ್ಧಿವಂತ ವ್ಯಕ್ತಿ. ಹಾಗಾದರೆ ರಹಸ್ಯವಾಗಿಟ್ಟು ಬುದ್ಧಿವಂತನೆಂದು ಅನಿಸಿಕೊಳ್ಳುವವನು ಯಾವ ಮೂರು ವಿಷಯಗಳನ್ನು ಹೇಳಬಾರದು ಅಥವಾ ಹೇಳೋದಿಲ್ಲ ನೋಡೋಣ.</p><img><p>ನೀವು ಯಾರೊಂದಿಗಾದರೂ ಪ್ರೇಮ ಸಂಬಂಧದಲ್ಲಿದ್ದರೆ, ಅದನ್ನು ಎಲ್ಲರ ಮುಂದೆ ಹೇಳುವುದು ಅನಿವಾರ್ಯವಲ್ಲ. ಸಂಬಂಧವು ಬಲವಾಗುವವರೆಗೆ ಅದನ್ನು ರಹಸ್ಯವಾಗಿಡುವುದು ಉತ್ತಮ. ಕೆಲವೊಮ್ಮೆ ಹೇಳಿಕೊಳ್ಳುವುದು ಸಂಬಂಧದಲ್ಲಿ ಸಮಸ್ಯೆಗಳನ್ನು ತರುತ್ತವೆ. ಬುದ್ಧಿವಂತರು ತಮ್ಮ ಪ್ರೀತಿಯನ್ನು ಸಂಪೂರ್ಣವಾಗಿ ಕನ್‌ಫರ್ಮ್ ಆಗುವವರೆಗೆ ರಹಸ್ಯವಾಗಿಡುತ್ತಾರೆ.</p><img><p>ಕೆಲವೊಮ್ಮೆ ಮನೆಯಲ್ಲಿ ಜಗಳಗಳು ಅಥವಾ ಸಮಸ್ಯೆಗಳು ಉಂಟಾಗಬಹುದು. ಆದರೆ ಇವುಗಳನ್ನು ಹೊರಗಿನವರಿಗೆ ಹೇಳಬಾರದು. ನೀವು ಮನೆಯ ವಿಷಯಗಳನ್ನು ಇತರರಿಗೆ ಹೇಳಿದರೆ ಜನರು ನಿಮ್ಮನ್ನು ಗೇಲಿ ಮಾಡಬಹುದು. ಚಾಣಕ್ಯನು ಮನೆಯ ವಿಷಯಗಳನ್ನು ಮನೆಯಲ್ಲಿಯೇ ಪರಿಹರಿಸಿಕೊಳ್ಳಬೇಕೆಂದು ಹೇಳುತ್ತಿದ್ದನು.</p><img><p>ನಿಮ್ಮ ಸ್ನೇಹಿತನೊಬ್ಬ ನಿಮ್ಮೊಂದಿಗೆ ಒಂದು ರಹಸ್ಯವನ್ನು ಹಂಚಿಕೊಂಡರೆ, ನೀವು ಅದನ್ನು ಇತರರಿಗೆ ಹೇಳಬಾರದು. ಸ್ನೇಹ ಎಂದರೆ ನಂಬಿಕೆ. ನೀವು ಆ ವಿಷಯವನ್ನು ಯಾರಿಗಾದರೂ ಹೇಳಿದರೆ, ಆ ಸ್ನೇಹಿತನ ನಂಬಿಕೆ ಮುರಿಯಬಹುದು. ಬುದ್ಧಿವಂತರು ಇತರರು ಹೇಳಿದ ಮಾತುಗಳನ್ನು ತಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳುತ್ತಾರೆ.</p>



Source link

Leave a Reply

Your email address will not be published. Required fields are marked *