
<p>ಬಟಾಣಿ, ರಾಜ್ಮಾ ಮತ್ತು ಕಡ್ಲೆ ತಿನ್ನೋದಕ್ಕೆ ತುಂಬಾ ರುಚಿಕರವಾಗಿರುತ್ತದೆ, ಆದರೆ ಕೆಲವೊಮ್ಮೆ, ಪದೇ ಪದೇ ಕುಕ್ಕರ್ ನಲ್ಲಿ ವಿಸಿಲ್ ಹೊಡೆದರೂ, ಅವು ಸರಿಯಾಗಿ ಬೆಂದಿರೋದಿಲ್ಲ, ಇದರಿಂದ ರುಚಿಯೇ ಹಾಳಾಗಿ ಹೋಗುತ್ತದೆ. ರಾಜ್ಮಾ, ಕಡ್ಲೆ, ಬಟಾಣಿಯನ್ನು ಸುಲಭವಾಗಿ ಬೇಯಿಸುವ ಟ್ರಿಕ್ಸ್ ಇಲ್ಲಿದೆ.</p><p> </p><img><p>ಹೆಚ್ಚಿನ ಜನರಿಗೆ ತಮ್ಮ ಪ್ರತಿದಿನದ ಅಡುಗೆಯಲ್ಲಿ ಕಡಲೆ, ರಾಜ್ಮಾ, ಬಟಾಣಿಯನ್ನು ಬಳಸಲು ತುಂಬಾನೆ ಇಷ್ಟ. ಅವುಗಳನ್ನು ಬಳಸಿ ಬಗೆ ಬಗೆಯ ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಖಾದ್ಯಗಳನ್ನು ಮಾಡಿ ತಿನ್ನುತ್ತೇವೆ. ಆದರೆ ಅವುಗಳನ್ನು ಸರಿಯಾಗಿ ಬೇಯಿಸದಿದ್ದರೆ, ಅವು ಅಡುಗೆಯ ರುಚಿಯೇ ಹಾಳಾಗುತ್ತದೆ ಅಲ್ವಾ?</p><img><p>ಕೆಲವೊಮ್ಮೆ, ಅವುಗಳನ್ನು ರಾತ್ರಿಯಿಡೀ ನೆನೆಸಿಟ್ಟು, ಮರುದಿನ ಕುಕ್ಕರ್ ನಲ್ಲಿ ಆರರಿಂದ ಏಳು ಬಾರಿ ವಿಸಿಲ್ ಹಾಕಿ, ಬೇಯಿಸಿದರೂ ಅವು ಬೇಯೋದಿಲ್ಲ. ಇದರಿಂದ ಮಾಡಿದ ಅಡುಗೆಯೂ ಚೆನ್ನಾಗಿರೋದಿಲ್ಲ, ಜೊತೆಗೆ ಅವುಗಳನ್ನು ತಿಂದ ನಂತರ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಹೊಟ್ಟೆಯಲ್ಲಿ ಭಾರ ಮೊದಲಾದ ಸಮಸ್ಯೆ ಕಾಡುತ್ತೆ.</p><img><p>ನಿಮಗೂ ಕೂಡ ಕಡ್ಲೆ, ಬಟಾಣಿಯನ್ನು ಬೇಯಿಸೋದೆ ಒಂದು ತಲೆಬಿಸಿ ಆಗಿದ್ಯಾ? ನೀವು ಇನ್ನು ಚಿಂತಿಸಬೇಕಾಗಿಲ್ಲ. ಯಾಕಂದ್ರೆ, ಕಡ್ಲೆ, ಬಟಾಣಿ, ರಾಜ್ಮಾ ಕಾಳನ್ನು ಕೇವಲ 1-2 ಸೀಟಿಗಳಲ್ಲಿ ಬೇಯಿಸಲು ಸಹಾಯ ಮಾಡುವ ಟ್ರಿಕ್ ಇಲ್ಲಿದೆ. ಈ ಟ್ರಿಕ್ ಇನ್’ಸ್ಟಾಗ್ರಾಂ ಪೇಜ್ ಒಂದರಲ್ಲಿ ವೈರಲ್ ಆಗಿತ್ತು. ನೀವು ಟ್ರೈ ಮಾಡಿ ನೋಡಿ, ಉಪಯೋಗಕ್ಕೆ ಬರಬಹುದು.</p><img><p>ಇದು ತುಂಬಾ ಸರಳ ಮತ್ತು ಅಗ್ಗದ ವಿಧಾನ. ಇದಕ್ಕೆ ಹೆಚ್ಚಿನ ಶ್ರಮ ಅಗತ್ಯವಿಲ್ಲ. ನಿಮಗೆ ಬೇಕಾಗಿರುವುದು ಶುಂಠಿ ಅಷ್ಟೇ. ಕಡ್ಲೆ, ಬಟಾಣಿಯನ್ನು ಬೇಯಿಸಲು ನೀರನ್ನು ಕುದಿಸುವಾಗ ಒಂದು ಸಣ್ಣ ತುಂಡು ಶುಂಠಿಯನ್ನು ಆ ನೀರಿಗೆ ಸೇರಿಸಿ. ಈ ಹಳೆಯ ಮನೆಮದ್ದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಶುಂಠಿ ಧಾನ್ಯಗಳು ಬೇಗನೆ ಬೇಯುವಂತೆ ಮಾಡುತ್ತದೆ.</p><img><p>ಶುಂಠಿ ಹಾಕೋದರಿಂದ ಧಾನ್ಯಗಳು ಬೇಗನೆ ಬೇಯುವ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಕಡ್ಲೆ, ಬೀನ್ಸ್, ರಾಜ್ಮಾ, ಬಟಾಣಿ ಕಾಳುಗಳಲ್ಲಿ ಆಲಿಗೋಸ್ಯಾಕರೈಡ್ ಎಂಬ ಸಂಕೀರ್ಣ ಸಕ್ಕರೆ ಇರುತ್ತವೆ, ಇವುಗಳನ್ನು ನಮ್ಮ ಜೀರ್ಣಾಂಗ ವ್ಯವಸ್ಥೆಯು ಸುಲಭವಾಗಿ ಒಡೆಯಲು ಸಾಧ್ಯವಿಲ್ಲ. ಈ ಸಕ್ಕರೆಗಳು ಕರುಳಿನಲ್ಲಿ ಹುದುಗುವಿಕೆಗೆ ಕಾರಣವಾಗುತ್ತವೆ, ಇದು ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತದೆ. ಶುಂಠಿಯಲ್ಲಿರುವ ಜಿಂಜರಾಲ್ ಈ ಸಂಕೀರ್ಣ ಸಕ್ಕರೆಗಳನ್ನು ವೇಗವಾಗಿ ಒಡೆಯಲು ಸಹಾಯ ಮಾಡುತ್ತದೆ. ಇದರಿಂದ ದ್ವಿದಳ ಧಾನ್ಯಗಳು ಬೇಗನೆ ಮೃದುವಾಗುತ್ತವೆ, ಹೊಟ್ಟೆಯಲ್ಲಿ ಅನಿಲ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.</p><img><p>ಕಡ್ಲೆ, ರಾಜ್ಮಾವನ್ನು ಚೆನ್ನಾಗಿ ತೊಳೆದು 6-8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೀರಲ್ಲಿ ನೆನೆಸಿಡಿ. ನೆನೆಸಿದ ಕಡಲೆ/ರಾಜ್ಮಾವನ್ನು ಕುಕ್ಕರ್ಗೆ ಸೇರಿಸಿ. 1 ಇಂಚಿನ ಶುಂಠಿಯನ್ನು ಸೇರಿಸಿ. ನೀವು ಅದನ್ನು ಜಜ್ಜಿ ಕೂಡ ಹಾಕಬಹುದು. ಈಗ ಅದಕ್ಕೆ ಉಪ್ಪು, ಅರಿಶಿನ ಮತ್ತು ಸ್ವಲ್ಪ ನೀರು ಸೇರಿಸಿ. ಕುಕ್ಕರ್ 4-5 ಬಾರಿ ಸೀಟಿ ಹೊಡೆಯಲು ಬಿಡಿ. ಧಾನ್ಯಗಳು ನಿಮಿಷದಲ್ಲಿ ಬೆಂದಿರುತ್ತೆ ನೀವೆ ನೋಡಿ.</p>
Source link
6-7 ಸೀಟಿ ಹೊಡೆದ್ರೂ ಕಡ್ಲೆ, ಬಟಾಣಿ ಬೇಯೋದಿಲ್ವಾ? ಕುಕ್ಕರ್ ಗೆ ಈ ವಸ್ತು ಹಾಕಿ ನೋಡಿ