
ನಂದಿಗಾವೆ, ದಂಡು ಬಿಟ್ಟಹಾರ ಗ್ರಾಮಗಳು ಸಂಪರ್ಕ ಕಡಿತಗೊಂಡು ತರೀಕೆರೆ ತಾಲೂಕಿಗೆ ಹತ್ತಿರವಾದವು. ಹೊನ್ನೇಕೊಡಿಗೆಯಿಂದ ನರಸಿಂಹರಾಜಪುರ ಪಟ್ಟಣಕ್ಕಿದ್ದ ಮುಖ್ಯ ಸಂಪರ್ಕ ರಸ್ತೆ ಮುಳುಗಡೆಯಾಗಿ 6 ಗ್ರಾಮಗಳ ಹಳ್ಳಿ ಗಳಾದ ಹಂದೂರು, ಬಿಳಾಲುಕೊಪ್ಪ, ಸಾಲೂರು, ಕುಂಬಸಾಲೂರು, ಮೋರಿ ಮಠ, ಹೊನ್ನೇಕೊಡಿಗೆ, ಹಂತುವಾನಿ, ಹಂಚಿನಮನೆ, ಬಿದಿರುಮನೆ, ಕಲ್ಲು ಗಡ್ಡೆ, ವರ್ಕಾಟೆ, ಅಡ್ಡಟ್ಟೆ, ಹೊಸಗದ್ದೆ, ಕೋಡಿಗದ್ದೆ,ಬಸರಿಗಳಲೆ, ಸಾರ್ಯ, ಕೂಸಗಲ್ಲು, ಸಾರ್ಯ, ಕರ್ಕೂಟ ಸೇರಿದಂತೆ 19 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ನರಸಿಂಹರಾಜಪುರಕ್ಕೆ ಬರಲು15-20 ಕಿ.ಮೀ. ಬಳಸಿಕೊಂಡು ಬಾಳೆಹೊನ್ನೂರು ರಸ್ತೆ, ಬಿ.ಎಚ್.ಕೈಮರ ಮೂಲಕ ಬರಬೇಕಾಯಿತು. ಭದ್ರಾ ಡ್ಯಾಂಗಾಗಿ ತಮ್ಮ ಜಮೀನು ಕಳೆದುಕೊಂಡ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಲು ಇಂಧನ ಮತ್ತು ಸಮಯ ವ್ಯಯಿಸಿ ಸುತ್ತು ಹಾಕಿಕೊಂಡು ಬರುವಂತಾಗಿತ್ತು. ಹಲವು ವರ್ಷ ಹೊನ್ನೇಕೊಡಿಗೆ ಗ್ರಾಪಂ ಗ್ರಾಮಸ್ಥರು ದೋಣಿ ಮೂಲಕವೇ ಪಟ್ಟಣಕ್ಕೆ ಬರುತ್ತಿದ್ದರು.