‘ಲೈಫ್ ವಿತೌಟ್ ವೈಫ್’ ಕ್ಲಾರಿಟಿ ಕೊಟ್ಟ ‘ರಾಪರ್ ಕಿಂಗ್’.. ಮತ್ತೆ ಮದುವೆಗೆ ರೆಡಿನಾ ಚಂದನ್ ಶೆಟ್ಟಿ? ಹುಡ್ಗಿ ಯಾರು? | Chandan Shetty Talks About His Second Marriage Plan And Life Without Wife

‘ಲೈಫ್ ವಿತೌಟ್ ವೈಫ್’ ಕ್ಲಾರಿಟಿ ಕೊಟ್ಟ ‘ರಾಪರ್ ಕಿಂಗ್’.. ಮತ್ತೆ ಮದುವೆಗೆ ರೆಡಿನಾ ಚಂದನ್ ಶೆಟ್ಟಿ? ಹುಡ್ಗಿ ಯಾರು? | Chandan Shetty Talks About His Second Marriage Plan And Life Without Wife



‘ಲೈಫ್ ವಿತೌಟ್ ವೈಫ್’ ಕ್ಲಾರಿಟಿ ಕೊಟ್ಟ ‘ರಾಪರ್ ಕಿಂಗ್’.. ಮತ್ತೆ ಮದುವೆಗೆ ರೆಡಿನಾ ಚಂದನ್ ಶೆಟ್ಟಿ? ಹುಡ್ಗಿ ಯಾರು? | Chandan Shetty Talks About His Second Marriage Plan And Life Without Wife

ಚಂದನ್ ಶೆಟ್ಟಿ ಈಗ ಕೇವಲ ಗಾಯಕನಾಗಿ ಉಳಿದಿಲ್ಲ, ಸ್ಯಾಂಡಲ್‌ವುಡ್‌ನ ಭರವಸೆಯ ನಟನಾಗಿಯೂ ಮಿಂಚಲು ಸಜ್ಜಾಗಿದ್ದಾರೆ. ಅವರು ನಾಯಕನಾಗಿ ನಟಿಸಿರುವ ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರದ ಟ್ರೇಲರ್ ಈಗ ಎಲ್ಲೆಡೆ ಸೌಂಡ್ ಮಾಡುತ್ತಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಸಿನಿಮಾ ನಮ್ಮನ್ನು 90ರ ದಶಕದ ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗಲಿದೆ. ಇದೀಗ ಮ್ಯಾರೇಜ್ ಸುದ್ದಿ ಸೌಂಡ್ ಮಾಡ್ತಿದೆ.

ಚಂದನ್ ಶೆಟ್ಟಿ ಹೊಸ ಇನ್ನಿಂಗ್ಸ್‌?

ಕನ್ನಡ ಚಿತ್ರರಂಗದ ‘ಮ್ಯೂಸಿಕ್ ಮಾಂತ್ರಿಕ’, ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿ (Chandan Shetty) ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ? ಬಿಗ್‌ಬಾಸ್ ಮನೆಯಲ್ಲಿ ಶುರುವಾದ ಚಂದನ್ ಮತ್ತು ನಿವೇದಿತಾ ಗೌಡ ಅವರ ‘ಕ್ಯೂಟ್’ ಪ್ರೇಮಕಥೆ ಮದುವೆಯ ಮಂಟಪದವರೆಗೆ ಹೋಗಿ ತಲುಪಿತ್ತು. ಆದರೆ, ವಿಧಿಯ ಆಟವೇ ಬೇರೆ ಇತ್ತು. ಪರಸ್ಪರ ಒಪ್ಪಿಗೆಯ ಮೇರೆಗೆ ಈ ಜೋಡಿ ಡಿವೋರ್ಸ್ ಪಡೆದು ದೂರಾದಾಗ ಅಭಿಮಾನಿಗಳಿಗೂ ಅತೀವ ಬೇಸರವಾಗಿತ್ತು. ಆದರೆ ಈಗ ಚಂದನ್ ಶೆಟ್ಟಿ ಆ ಎಲ್ಲಾ ನೋವುಗಳಿಂದ ಹೊರಬಂದು, ಒಂದು ಹೊಸ ಭರವಸೆಯೊಂದಿಗೆ ಕನ್ನಡಿಗರ ಮುಂದೆ ಬಂದಿದ್ದಾರೆ.

“ಒಂಟಿತನ ಅನ್ನೋದು ಶಾಪವಾಗಬಾರದು!” – ಮದುವೆ ಬಗ್ಗೆ ಚಂದನ್ ಮನದಾಳದ ಮಾತು

ಇತ್ತೀಚಿನ ಸಂದರ್ಶನವೊಂದರಲ್ಲಿ ಚಂದನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಳ ಖಡಕ್ ಆಗಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಎರಡನೇ ಮದುವೆಯ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳಿಗೂ ಅವರು ಉತ್ತರ ನೀಡಿದ್ದಾರೆ. “ಜೀವನದಲ್ಲಿ ಬಾಳಸಂಗಾತಿ ಅನ್ನೋದು ಬಹಳ ಮುಖ್ಯ. ಈಗ ನಮಗೆ ವಯಸ್ಸಿದೆ, ಕೆಲಸವಿದೆ, ಸುತ್ತಲೂ ಜನರಿದ್ದಾರೆ. ಆದರೆ ವಯಸ್ಸಾದ ಮೇಲೆ ಕಾಡುವ ಆ ಒಂಟಿತನ ಇದೆಯಲ್ಲ, ಅದು ತುಂಬಾ ಭಯಾನಕ. ಆ ಸಮಯದಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳುವ ಒಬ್ಬರು ಜೊತೆಗಿರಬೇಕು” ಎನ್ನುವ ಮೂಲಕ ಜೀವನದಲ್ಲಿ ಮದುವೆಯ ಮಹತ್ವವನ್ನು ಸಾರಿದ್ದಾರೆ. ಆದರೆ, ಈ ಬಾರಿ ಅವರು ಆತುರದ ನಿರ್ಧಾರ ಮಾಡುವುದಿಲ್ಲವಂತೆ. “ಈಗಾಗಲೇ ಒಂದು ಪರೀಕ್ಷೆ ಎದುರಿಸಿದ್ದೇನೆ, ಮುಂದಿನ ಜೀವನದ ಬಗ್ಗೆ ಸರಿಯಾಗಿ ಯೋಚಿಸಿ, ಸಮಯ ತಗೊಂಡು ಹೆಜ್ಜೆ ಇಡುತ್ತೇನೆ” ಎನ್ನುವುದು ಅವರ ಪ್ಲಾನ್.

“ಗಾಯ ಮಾಯಲು ಸಮಯ ಬೇಕು… ನಾನಂತೂ ಡಿಪ್ರೆಶನ್‌ನಲ್ಲಿ ಇಲ್ಲ!”

ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಮಾತನಾಡುತ್ತಾ ಚಂದನ್ ಒಂದು ಸುಂದರ ಉದಾಹರಣೆ ನೀಡಿದ್ದಾರೆ. “ನಾವು ಕೆಳಗೆ ಬಿದ್ದಾಗ ಗಾಯ ಆಗುವುದು ಸಹಜ, ಆ ಗಾಯ ಮಾಯಲು ಸ್ವಲ್ಪ ಸಮಯ ಹಿಡಿಯುತ್ತದೆ. ನನ್ನ ಜೀವನದಲ್ಲೂ ಅದೇ ಆಗಿದೆ. ಈಗ ಆ ಗಾಯ ಸಂಪೂರ್ಣವಾಗಿ ವಾಸಿಯಾಗಿದೆ. ನಾನು ಆರಾಮವಾಗಿದ್ದೇನೆ, ಖಂಡಿತವಾಗಿಯೂ ಡಿಪ್ರೆಶನ್‌ನಲ್ಲಿ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ನೋವನ್ನೆಲ್ಲ ನುಂಗಿ ಈಗ ಚಂದನ್ ಕಣ್ಣು ಪೂರ್ತಿ ತಮ್ಮ ವೃತ್ತಿಜೀವನದ ಮೇಲಿದೆ.

ರೆಟ್ರೋ ಸ್ಟೈಲ್‌ನಲ್ಲಿ ‘ಎಲ್ರ ಕಾಲೆಳಿಯತ್ತೆ ಕಾಲ’!

ಚಂದನ್ ಶೆಟ್ಟಿ ಈಗ ಕೇವಲ ಗಾಯಕನಾಗಿ ಉಳಿದಿಲ್ಲ, ಸ್ಯಾಂಡಲ್‌ವುಡ್‌ನ ಭರವಸೆಯ ನಟನಾಗಿಯೂ ಮಿಂಚಲು ಸಜ್ಜಾಗಿದ್ದಾರೆ. ಅವರು ನಾಯಕನಾಗಿ ನಟಿಸಿರುವ ‘ಎಲ್ರ ಕಾಲೆಳಿಯತ್ತೆ ಕಾಲ’ ಚಿತ್ರದ ಟ್ರೇಲರ್ ಈಗ ಎಲ್ಲೆಡೆ ಸೌಂಡ್ ಮಾಡುತ್ತಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಸಿನಿಮಾ ನಮ್ಮನ್ನು 90ರ ದಶಕದ ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗಲಿದೆ.

ಏಪ್ರಿಲ್ 17ರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿ ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ಕಾಣಿಸಿಕೊಂಡರೆ, ಮಂಜು ಪಾವಗಡ, ತಾರಾ ಮತ್ತು ಸುಜಯ್ ಶಾಸ್ತ್ರಿ ಅವರ ಕಾಮಿಡಿ ಪಂಚ್ ಕೂಡ ಇರಲಿದೆ. ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿರುವ ಈ ಸಿನಿಮಾ ಚಂದನ್ ಶೆಟ್ಟಿ ಅವರ ಕೆರಿಯರ್‌ಗೆ ಒಂದು ದೊಡ್ಡ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಒಟ್ಟಿನಲ್ಲಿ, ವೈಯಕ್ತಿಕ ಬದುಕಿನ ಏರಿಳಿತಗಳನ್ನು ಮೆಟ್ಟಿ ನಿಂತಿರುವ ಚಂದನ್ ಶೆಟ್ಟಿ, ಈಗ ಹೊಸ ಹುರುಪಿನೊಂದಿಗೆ ಕೆಮರಾ ಮುಂದೆ ನಿಂತಿದ್ದಾರೆ. ಅವರ ಈ ಸೆಕೆಂಡ್ ಇನ್ನಿಂಗ್ಸ್‌ಗೆ ಆಲ್ ದಿ ಬೆಸ್ಟ್ ಹೇಳೋಣ ಅಲ್ವಾ?



Source link

Leave a Reply

Your email address will not be published. Required fields are marked *