
ದಾವಣಗೆರೆ, (ಏಪ್ರಿಲ್ 13): ಪಂಚಮಸಾಲಿ ಮಠದಲ್ಲಿ ಲೆಕ್ಕ ಕೊಡಿ ಅಭಿಯಾನ ಮುಂದುವರೆದಿದೆ. ಈ ಸಂಬಂಧ ಇದೀಗ ಪೀಠದಿಂದ ವಚನಾನಂದ ಸ್ವಾಮೀಜಿಗಳನ್ನ (ವಚನಾನಂದ ಸ್ವಾಮೀಜಿ) ಉಚ್ಛಾಟನೆ ಮಾಡಲಾಗಿದೆ. ಇದರಿಂದ ದಾವಣಗೆರೆ (ದಾವಣಗೆರೆ) ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠ ಈಗ ಅಕ್ಷರಶಃ ರಣಾಂಗಣವಾಗಿದೆ. ಮಠದ ಟ್ರಸ್ಟಿಗಳಿಗೆ ‘ಲೆಕ್ಕ ಕೊಡಿ ಭಕ್ತರು ನಡೆಸುತ್ತಿರುವ ಅಭಿಯಾನ ತೀವ್ರ ಸ್ವರೂಪದಲ್ಲಿದ್ದು, ಟ್ರಸ್ಟಿಗಳಿಗೆ ಚಪ್ಪಲಿ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಠದ ತಳ್ಳಾಟ, ನೂಕಾ ಶುರುವಾಗಿದ್ದು, ಈ ಸಂದರ್ಭದಲ್ಲಿ ವಚನಾನಂದ ಸ್ವಾಮೀಜಿ ಕೈಗೆ ಗಾಯವಾಗಿದೆ. ಇದರಿಂದ ಕೇರಳ ಸ್ವಾಮೀಜಿ ಪೊಲೀಸರ ಜತೆ ವಾಗ್ದಾದಕ್ಕಿಳಿದಿದ್ದಾರೆ.