
ಬಾಲಿವುಡ್ ಸೂಪರ್ಸ್ಟಾರ್, ಖಿಲಾಡಿ ಅಕ್ಷಯ್ ಕುಮಾರ್ ‘ವೀಲ್ ಆಫ್ ಫಾರ್ಚೂನ್’ ಶೋನ ಲೈವ್ ಎಪಿಸೋಡ್ನಲ್ಲಿ ತಮ್ಮ ಬಾಲ್ಯದ ಗೆಳೆಯನನ್ನು ಪರಿಚಯಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದರು.
ಒಂದು ಶೋನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಬಾಲ್ಯದ ಗೆಳೆಯನನ್ನು ಪರಿಚಯಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಶಾಲೆಯಲ್ಲಿ ಫೇಲ್ ಆಗಿದ್ದ ಕಥೆ, ತಮ್ಮ ಹಳೆಯ ಸ್ನೇಹ ಮತ್ತು ಕಷ್ಟಗಳಿಂದ ಸೂಪರ್ಸ್ಟಾರ್ ಆದ ತಮ್ಮ ಸ್ಪೂರ್ತಿದಾಯಕ ಪಯಣದ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಬಾಲಿವುಡ್ ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ‘ವೀಲ್ ಆಫ್ ಫಾರ್ಚೂನ್’ ಶೋನ ಲೈವ್ ಎಪಿಸೋಡ್ನಲ್ಲಿ ತಮ್ಮ ಬಾಲ್ಯದ ಗೆಳೆಯನನ್ನು ಪರಿಚಯಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದರು.
ಈ ಮೂಲಕ ತಮ್ಮ ಶಾಲಾ ದಿನಗಳ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡ ಅಕ್ಷಯ್, ತಾನು ಎಂದಿಗೂ ಟಾಪ್ ವಿದ್ಯಾರ್ಥಿಯಾಗಿರಲಿಲ್ಲ ಎಂದು ಒಪ್ಪಿಕೊಂಡರು. ತಾನು ಒಬ್ಬ ಬ್ಯಾಕ್ಬೆಂಚರ್ ಆಗಿದ್ದೆ ಮತ್ತು ಶಾಲಾ ದಿನಗಳಲ್ಲಿ ಹಲವು ಬಾರಿ ಫೇಲ್ ಆಗಿದ್ದೆ ಎಂದು ಬಹಿರಂಗಪಡಿಸಿದರು. ಅವರ ಈ ಪ್ರಾಮಾಣಿಕ ಮಾತು, ಯಶಸ್ಸಿಗೆ ಒಳ್ಳೆಯ ಅಂಕಗಳೇ ಮುಖ್ಯವಲ್ಲ ಎಂಬುದನ್ನು ಸಾಬೀತುಪಡಿಸಿತು.
ಅಕ್ಷಯ್ ಪ್ರೇಕ್ಷಕರಲ್ಲಿದ್ದ ತಮ್ಮ ಗೆಳೆಯ ಜಿನೇಶ್ನನ್ನು ಪರಿಚಯಿಸಿದರು. ಕಿಂಡರ್ಗಾರ್ಟನ್ನಿಂದಲೂ ಇಬ್ಬರೂ ಒಟ್ಟಿಗೆ ಇದ್ದೇವೆ ಎಂದು ಹೇಳಿದರು. ತಮಾಷೆಗಾಗಿ, ತಮ್ಮ ಫೇಲ್ಯೂರ್ಗೆ ಅಕ್ಷಯ್ ಕಾರಣ ಎಂದು ಜಿನೇಶ್ ಹೇಳಿದ್ದು, ದಶಕಗಳ ನಂತರವೂ ಅವರ ಸ್ನೇಹ ಗಟ್ಟಿಯಾಗಿದೆ ಎಂಬುದನ್ನು ತೋರಿಸಿತು. ಮುಂಬೈನಲ್ಲಿ ಬೆಳೆದು, ಥಾಯ್ಲೆಂಡ್ನಲ್ಲಿ ಕೆಲಸ ಮಾಡಿ, ಕೊನೆಗೆ ಸೂಪರ್ಸ್ಟಾರ್ ಆದ ತಮ್ಮ ಸ್ಪೂರ್ತಿದಾಯಕ ಪಯಣವನ್ನು ನಟ ನೆನಪಿಸಿಕೊಂಡರು. ಹಳೆಯ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವ ಅಕ್ಷಯ್ ಅವರ ಕಥೆಯು, ಕಠಿಣ ಪರಿಶ್ರಮ, ನಿಷ್ಠೆ ಮತ್ತು ಕನಸುಗಳನ್ನು ಬೆನ್ನಟ್ಟುವ ಮಹತ್ವವನ್ನು ನೆನಪಿಸುತ್ತದೆ.
ಕಮ್ಬ್ಯಾಕ್ ಮಾಡಲು ಹೊಸ ಸಿನಿಮಾ
ಇನ್ನು ಬಾಲಿವುಡ್ನ ಖಿಲಾಡಿ ಅಕ್ಷಯ್ ಕುಮಾರ್ ಸದ್ಯ ಒಂದು ದೊಡ್ಡ ಸಕ್ಸಸ್ಗಾಗಿ ಕಾಯುತ್ತಿದ್ದಾರೆ. ಒಂದ್ಕಾಲದಲ್ಲಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದ್ದ ಅಕ್ಕಿಗೆ, ಇತ್ತೀಚೆಗೆ ಸಾಲು ಸಾಲು ಸೋಲುಗಳು ಕಾಡಿವೆ. ಕೆಲವು ಸಿನಿಮಾಗಳು ಓಕೆ ಎನಿಸಿದ್ರೆ, ಇನ್ನು ಕೆಲವು ಹಾಕಿದ ಬಂಡವಾಳವನ್ನೂ ವಾಪಸ್ ತಂದುಕೊಟ್ಟಿಲ್ಲ. ಈ ಸೋಲುಗಳಿಂದ ಕಮ್ಬ್ಯಾಕ್ ಮಾಡಲು ಅಕ್ಷಯ್ ಕುಮಾರ್ ಈಗ ಹೊಸ ಸಿನಿಮಾ ಜೊತೆ ಬರ್ತಿದ್ದಾರೆ. ‘ಭೂತ್ ಬಂಗ್ಲಾ’ ಅನ್ನೋ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.