ಲಂಡನ್‌ ಇಸ್ಕಾನ್‌ ಒಳಗೆ ಮಾಂಸಾಹಾರ ಸೇವನೆ : ಆಫ್ರಿಕಾ ಮೂಲದ ಬ್ರಿಟನ್‌ ವ್ಯಕ್ತಿ ಉದ್ಧಟತನ | Meat Consumption Inside London Iskcon British Man Sparks Outrage

ಲಂಡನ್‌ ಇಸ್ಕಾನ್‌ ಒಳಗೆ ಮಾಂಸಾಹಾರ ಸೇವನೆ : ಆಫ್ರಿಕಾ ಮೂಲದ ಬ್ರಿಟನ್‌ ವ್ಯಕ್ತಿ ಉದ್ಧಟತನ | Meat Consumption Inside London Iskcon British Man Sparks Outrage



ಆಫ್ರಿಕಾ ಮೂಲದ ಬ್ರಿಟನ್‌ ವ್ಯಕ್ತಿಯೊಬ್ಬ ಇಸ್ಕಾನ್‌ನ ಸಾತ್ವಿಕ ಆಹಾರದ ರೆಸ್ಟೋರೆಂಟ್‌ನಲ್ಲಿ ಮಾಂಸಾಹಾರ ಸೇವಿಸಿದ ಘಟನೆ ಲಂಡನ್‌ನಲ್ಲಿ ನಡೆದಿದೆ. ಈ ಉದ್ಧಟತನದ ವಿಡಿಯೋ ವೈರಲ್‌ ಅಗುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಲಂಡನ್‌: ಆಫ್ರಿಕಾ ಮೂಲದ ಬ್ರಿಟನ್‌ ವ್ಯಕ್ತಿಯೊಬ್ಬ ಇಸ್ಕಾನ್‌ನ ಸಾತ್ವಿಕ ಆಹಾರದ ರೆಸ್ಟೋರೆಂಟ್‌ನಲ್ಲಿ ಮಾಂಸಾಹಾರ ಸೇವಿಸಿದ ಘಟನೆ ಲಂಡನ್‌ನಲ್ಲಿ ನಡೆದಿದೆ. ಈ ಉದ್ಧಟತನದ ವಿಡಿಯೋ ವೈರಲ್‌ ಅಗುತ್ತಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಮೊದಲಿಗೆ ರೆಸ್ಟೋರೆಂಟ್‌ ಒಳಹೊಕ್ಕ ವ್ಯಕ್ತಿ, ‘ಇಲ್ಲಿ ಮಾಂಸಾಹಾರ ಸಿಗುವುದಿಲ್ಲವೇ?’ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಅಲ್ಲಿದ್ದ ಸಿಬ್ಬಂದಿ, ‘ಇಲ್ಲಿ ಮಾಂಸ, ಈರುಳ್ಳಿ, ಬೆಳ್ಳುಳ್ಳಿ ಇರುವ ಆಹಾರ ಸಿಗುವುದಿಲ್ಲ’ ಎಂದು ವಿವರಿಸಿದ್ದಾರೆ. ಕೂಡಲೇ ಆತ ತನ್ನೊಂದಿಗೆ ತಂದಿದ್ದ ಡಬ್ಬಿ ತೆರೆದು, ಚಿಕನ್‌ ತಿನ್ನಲು ಆರಂಭಿಸಿದ್ದಾನೆ. ಸಾಲದ್ದಕ್ಕೆ, ಅಲ್ಲಿದ್ದವರಿಗೂ ಕೊಡಲು ಮುಂದಾಗಿದ್ದಾನೆ. ಎಚ್ಚರಿಕೆಗಳ ಹೊರತಾಗಿಯೂ ಆತ ಮನಸೋಇಚ್ಛೆ ವರ್ತಿಸತೊಡಗಿದಾಗ, ಭದ್ರತಾ ಸಿಬ್ಬಂದಿ ಬಂದು ಅವನನ್ನು ಹೊರದಬ್ಬಿದ್ದಾರೆ.

‘ಆತ ಧಾರ್ಮಿಕ ಭಾವನೆಗಳನ್ನು ಅವಮಾನಿಸಲು ಹೀಗೆ ಮಾಡಿದ್ದಾನೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಅವನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.

ಜಗನ್ನಾಥ ರಥಯಾತ್ರೆಗಾಗಿ ಸುಖೋಯ್ ಫೈಟರ್ ಜೆಟ್‌ಗಳಿಗೆ ತಯಾರಿಸಿದ ವಿಶೇಷ ಟೈರ್‌

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಇಸ್ಕಾನ್ (ISKCON) ದೇವಸ್ಥಾನವು ತನ್ನ ಪ್ರಸಿದ್ಧ ಜಗನ್ನಾಥ ರಥಯಾತ್ರೆಗಾಗಿ ಸುಖೋಯ್ ಫೈಟರ್ ಜೆಟ್‌ಗಳಿಗೆ ತಯಾರಿಸಿದ ವಿಶೇಷ ಟೈರ್‌ಗಳನ್ನು ರಥದ ಚಕ್ರಗಳಿಗೆ ಅಳವಡಿಸಿದೆ. ಸುಮಾರು ಇಪ್ಪತ್ತು ವರ್ಷಗಳ ಹುಡುಕಾಟದ ನಂತರ ಈ ನವೀನ ಬದಲಾವಣೆಯನ್ನು ಮಾಡಲಾಗಿದೆ.

20 ವರ್ಷಗಳ ನಿರಂತರ ಹುಡುಕಾಟ:

ಸುಮಾರು ಇಪ್ಪತ್ತು ವರ್ಷಗಳಿಂದ, ಇಸ್ಕಾನ್ ಕೋಲ್ಕತ್ತಾ ಜಗನ್ನಾಥ ರಥದ ಚಕ್ರಗಳನ್ನು ಸುಧಾರಿಸಲು ಸೂಕ್ತವಾದ ಪರ್ಯಾಯ ಮಾರ್ಗವನ್ನು ಹುಡುಕುತ್ತಿತ್ತು. ಇದಕ್ಕೂ ಮೊದಲು, ಬೋಯಿಂಗ್ 747 ವಿಮಾನಗಳಿಂದ ಪಡೆದ ಚಕ್ರಗಳನ್ನು ಬಳಸಲಾಗುತ್ತಿತ್ತು. ಆದರೆ, ಈ ಚಕ್ರಗಳು ನಿರಂತರ ನಿರ್ವಹಣೆ ಅಗತ್ಯವಿರುವ ಮತ್ತು ಆಗಾಗ್ಗೆ ರಿಪೇರಿ ಬೇಕಾಗುವಂತಿದ್ದವು.

 ಸುಖೋಯ್ ಟೈರ್‌ಗಳ ವಿಶೇಷತೆ:

ಹೊಸದಾಗಿ ಅಳವಡಿಸಲಾಗಿರುವ ಟೈರ್‌ಗಳು, ಸುಖೋಯ್ ಫೈಟರ್ ಜೆಟ್‌ಗಳಿಗಾಗಿ MRF ಕಂಪನಿ ತಯಾರಿಸಿದ ಉತ್ತಮ ದರ್ಜೆಯ ಟೈರ್‌ಗಳಾಗಿವೆ. ಈ ಟೈರ್‌ಗಳು ರಥದ ಭಾರೀ ತೂಕ ಮತ್ತು ಲಕ್ಷಾಂತರ ಭಕ್ತರ ಗುಂಪನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ರಥಯಾತ್ರೆ ಸುಗಮವಾಗಿ ಮತ್ತು ಸುರಕ್ಷಿತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಇಸ್ಕಾನ್ ಆಡಳಿತ ಮಂಡಳಿ ನಂಬಿದೆ.



Source link

Leave a Reply

Your email address will not be published. Required fields are marked *