ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೆ ಕುತ್ತು? ಹೊಸ ಕ್ಯಾಪ್ಟನ್‌ಗಾಗಿ ಬಿಸಿಸಿಐ ಹುಡುಕಾಟ! | Suryakumar Yadav Captaincy Under Threat Bcci Eyes New T20 Leader Ahead Of 2028 Kvn

ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೆ ಕುತ್ತು? ಹೊಸ ಕ್ಯಾಪ್ಟನ್‌ಗಾಗಿ ಬಿಸಿಸಿಐ ಹುಡುಕಾಟ! | Suryakumar Yadav Captaincy Under Threat Bcci Eyes New T20 Leader Ahead Of 2028 Kvn



ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ ಯಾದವ್ ನಾಯಕತ್ವಕ್ಕೆ ಕುತ್ತು? ಹೊಸ ಕ್ಯಾಪ್ಟನ್‌ಗಾಗಿ ಬಿಸಿಸಿಐ ಹುಡುಕಾಟ! | Suryakumar Yadav Captaincy Under Threat Bcci Eyes New T20 Leader Ahead Of 2028 Kvn

ಟಿ20 ವಿಶ್ವಕಪ್ ಗೆದ್ದರೂ, ನಾಯಕ ಸೂರ್ಯಕುಮಾರ್ ಯಾದವ್ ಅವರ ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದಾಗಿ ಅವರ ನಾಯಕತ್ವದ ಸ್ಥಾನ ಅಲುಗಾಡುತ್ತಿದೆ. 2028ರ ಒಲಿಂಪಿಕ್ಸ್ ಮತ್ತು ವಿಶ್ವಕಪ್ ದೃಷ್ಟಿಯಿಂದ ಬಿಸಿಸಿಐ ಹೊಸ ನಾಯಕನ ಹುಡುಕಾಟದಲ್ಲಿದ್ದು, ಮುಂಬರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳು ಸೂರ್ಯಕುಮಾರ್ ಅವರ ಭವಿಷ್ಯವನ್ನು ನಿರ್ಧರಿಸಲಿವೆ.

ಮುಂಬೈ: ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಕಿರೀಟ ತಂದುಕೊಟ್ಟರೂ, ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಥಾನ ಅಲುಗಾಡುತ್ತಿದೆ ಎಂದು ವರದಿಯಾಗಿದೆ. ಸೂರ್ಯ ಅವರ ಬ್ಯಾಟಿಂಗ್ ಫಾರ್ಮ್‌ನಲ್ಲಿನ ಕುಸಿತವೇ ಬಿಸಿಸಿಐ ಮತ್ತು ಆಯ್ಕೆ ಸಮಿತಿಯನ್ನು ಮರುಚಿಂತನೆಗೆ ದೂಡಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು 2028ರ ವಿಶ್ವಕಪ್‌ ಅನ್ನು ಗುರಿಯಾಗಿಸಿಕೊಂಡು ತಂಡವನ್ನು ಕಟ್ಟಲು ಬಿಸಿಸಿಐ ಸಿದ್ಧವಾಗುತ್ತಿದ್ದು, ಸೂರ್ಯಕುಮಾರ್ ಅವರ ಸ್ಥಾನ ಈಗ ಪ್ರಶ್ನಾರ್ಥಕವಾಗಿದೆ.

ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶೂನ್ಯಕ್ಕೆ ಔಟಾಗಿದ್ದು ಮತ್ತು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 11 ರನ್ ಗಳಿಸಿದ್ದು ಸೂರ್ಯಕುಮಾರ್‌ಗೆ ದೊಡ್ಡ ಹಿನ್ನಡೆಯಾಗಿದೆ. ಅಮೆರಿಕ ವಿರುದ್ಧದ ಮೊದಲ ಗುಂಪು ಪಂದ್ಯವನ್ನು ಬಿಟ್ಟರೆ, 35 ವರ್ಷದ ಸೂರ್ಯ ಟೂರ್ನಿಯ ಯಾವುದೇ ಪ್ರಮುಖ ಪಂದ್ಯಗಳಲ್ಲಿ ಮಿಂಚಲಿಲ್ಲ. 2028ರ ಒಲಿಂಪಿಕ್ಸ್ ಮತ್ತು ವಿಶ್ವಕಪ್ ಬರುವಷ್ಟರಲ್ಲಿ ಸೂರ್ಯಕುಮಾರ್‌ಗೆ 37 ವರ್ಷ ವಯಸ್ಸಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಹೊಸ ನಾಯಕನನ್ನು ಹುಡುಕುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಒಂದು ವೇಳೆ ಸೂರ್ಯಕುಮಾರ್ ಅವರನ್ನು ಬದಲಿಸಿದರೆ, ಸಂಜು ಸ್ಯಾಮ್ಸನ್ ಅವರನ್ನೂ ನಾಯಕತ್ವಕ್ಕೆ ಪರಿಗಣಿಸುವ ಸಾಧ್ಯತೆಯಿದೆ. ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ ಬಿಸಿಸಿಐ ಮೊದಲ ಆದ್ಯತೆ ನೀಡಿದರೂ, ಟಿ20ಯಲ್ಲಿ ಅವರು ಉತ್ತಮ ಪ್ರದರ್ಶನ ನೀಡದಿರುವುದು ಅವರಿಗೆ ಹಿನ್ನಡೆಯಾಗಿದೆ.

ಸೂರ್ಯ ಪಾಲಿಗೆ ಇಂಗ್ಲೆಂಡ್-ಐರ್ಲೆಂಡ್ ಪ್ರವಾಸ ನಿರ್ಣಾಯಕ

ಮುಂಬರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳು ಸೂರ್ಯಕುಮಾರ್ ಪಾಲಿಗೆ ನಿರ್ಣಾಯಕವಾಗಿವೆ. ಈ ಸರಣಿಗಳಲ್ಲಿನ ಅವರ ಪ್ರದರ್ಶನವನ್ನು ಆಧರಿಸಿ, 2028ರವರೆಗೆ ಸೂರ್ಯ ಅವರನ್ನೇ ನಾಯಕನಾಗಿ ಮುಂದುವರಿಸಬೇಕೇ ಬೇಡವೇ ಎಂದು ಬಿಸಿಸಿಐ ನಿರ್ಧರಿಸಲಿದೆ. ಸೂರ್ಯಕುಮಾರ್ ಬದಲು ಯುವ ಆಟಗಾರರನ್ನು ಬೆಳೆಸಬೇಕೆಂಬ ಅಭಿಪ್ರಾಯ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯಲ್ಲಿದೆ.

ಆದರೆ ಕೋಚ್ ಗೌತಮ್ ಗಂಭೀರ್, ಸೂರ್ಯಕುಮಾರ್ ಯಾದವ್ ಬೆನ್ನಿಗೆ ನಿಂತಿದ್ದಾರೆ. 2028ರವರೆಗೆ ತಮ್ಮ ಕೋಚಿಂಗ್ ಒಪ್ಪಂದವನ್ನು ವಿಸ್ತರಿಸುವಂತೆ ಗಂಭೀರ್ ಬಿಸಿಸಿಐಗೆ ಕೇಳಿಕೊಂಡಿದ್ದು, ನಾಯಕನಾಗಿ ಸೂರ್ಯಕುಮಾರ್ ಅವರನ್ನೇ ಮುಂದುವರಿಸಲು ಬಯಸಿದ್ದಾರೆ ಎಂದು ವರದಿಯಾಗಿದೆ. ಸೂರ್ಯ ಅವರ ಉತ್ತರಾಧಿಕಾರಿಯಾಗಿ ಗಿಲ್ ಅವರನ್ನು ಪರಿಗಣಿಸದಿದ್ದರೆ, ಮುಂದಿನ ಆಯ್ಕೆ ಹಾರ್ದಿಕ್ ಪಾಂಡ್ಯ. ಆದರೆ, ಗಂಭೀರ್‌ಗೆ ಹಾರ್ದಿಕ್ ನಾಯಕತ್ವದ ಬಗ್ಗೆ ಅಷ್ಟು ಒಲವಿಲ್ಲ. ಇನ್ನು ಜಸ್ಪ್ರೀತ್ ಬುಮ್ರಾ ಅವರಿಗೆ ಗಾಯದ ಸಮಸ್ಯೆ ಇದೆ. ಈ ಸನ್ನಿವೇಶದಲ್ಲಿ, ಸೂರ್ಯಕುಮಾರ್ ಅವರನ್ನು ಬದಲಿಸಲು ನಿರ್ಧರಿಸಿದರೆ, ಗಂಭೀರ್ ಜೊತೆ ಉತ್ತಮ ಸಂಬಂಧ ಹೊಂದಿರುವ ಸಂಜು ಸ್ಯಾಮ್ಸನ್ ಅವರನ್ನೂ ಪರಿಗಣಿಸುವ ಸಾಧ್ಯತೆ ಇದೆ. ಆದರೆ, ಸದ್ಯಕ್ಕೆ ಯಾವುದೇ ಐಪಿಎಲ್ ತಂಡದ ನಾಯಕರಲ್ಲದಿರುವುದು ಸಂಜುಗೆ ಹಿನ್ನಡೆಯಾಗಬಹುದು.

ಇಂಗ್ಲೆಂಡ್-ಐರ್ಲೆಂಡ್ ಪ್ರವಾಸದಲ್ಲಿ ಮೇಜರ್‌ ಚೇಂಜ್!

ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳು ಭಾರತೀಯ ತಂಡದಲ್ಲಿ ದೊಡ್ಡ ಬದಲಾವಣೆಗಳಿಗೆ ಕಾರಣವಾಗಬಹುದು. ಜಿಂಬಾಬ್ವೆ ಪ್ರವಾಸ ಅಥವಾ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ, 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಭಾರತದ ಹಿರಿಯರ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ವರದಿಗಳು ತಿಳಿಸಿವೆ.

ಒಟ್ಟಿನಲ್ಲಿ ಐರ್ಲೆಂಡ್ ಎದುರಿನ ಸರಣಿಯು ಸೂರ್ಯಕುಮಾರ್ ಯಾದವ್ ಅವರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಭವಿಷ್ಯ ನಿರ್ಧರಿಸುವ ಸಾಧ್ಯತೆಯಿದೆ. ಸೂರ್ಯಕುಮಾರ್ ಯಾದವ್ ಅವರೇ ಭಾರತ ಟಿ20 ತಂಡದ ನಾಯಕರಾಗಿ ಮುಂದುವರೆಯುತ್ತಾರೋ ಅಥವಾ ಬೇರೆ ಯಾರಾದರೂ ಆ ಪಟ್ಟವನ್ನು ಅಲಂಕರಿಸುತ್ತಾರೋ ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *