Karna Serial: ಮೂತಿ ಸೊಟ್ಟ ಮಾಡಿದ್ರೂ ಅರ್ಜುನ್​ಗೆ ಇಷ್ಟವಾಗಿಬಿಟ್ಟಳು ನಿಧಿ; ಕರ್ಣನ ಲವ್​ಸ್ಟೋರಿ ಭವಿಷ್ಯ ಏನು

Karna Serial: ಮೂತಿ ಸೊಟ್ಟ ಮಾಡಿದ್ರೂ ಅರ್ಜುನ್​ಗೆ ಇಷ್ಟವಾಗಿಬಿಟ್ಟಳು ನಿಧಿ; ಕರ್ಣನ ಲವ್​ಸ್ಟೋರಿ ಭವಿಷ್ಯ ಏನು



Karna Serial: ಮೂತಿ ಸೊಟ್ಟ ಮಾಡಿದ್ರೂ ಅರ್ಜುನ್​ಗೆ ಇಷ್ಟವಾಗಿಬಿಟ್ಟಳು ನಿಧಿ; ಕರ್ಣನ ಲವ್​ಸ್ಟೋರಿ ಭವಿಷ್ಯ ಏನು
ಕರ್ಣ ಮತ್ತು ನಿಧಿಯನ್ನು ಬೇರೆ ಮಾಡಲು ರಮೇಶ್ ಮಾಡಿದ ಪ್ಲ್ಯಾನ್ ಯಶಸ್ವಿಯಾಗಿದ್ದು, ನಿಧಿಯನ್ನು ಮದುವೆಯಾಗಲು ಬಂದ ಹ್ಯಾಂಡ್​ಸಮ್​ ಡಾಕ್ಟರ್ ಅರ್ಜುನ್, ನಿಧಿಯನ್ನು ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಕರ್ಣ ಮತ್ತು ನಿಧಿ ಸಂಕಷ್ಟಕ್ಕೆ ಸಿಲುಕಿದ್ದಾರೆ.<img><p>ಕರ್ಣ ಸೀರಿಯಲ್​ (Karna Serial) ಇದೀಗ ಕುತೂಹಲದ ಹಂತ ತಲುಪಿದೆ. ಕರ್ಣ ಮತ್ತು ನಿಧಿಯನ್ನು ದೂರ ಮಾಡಲು ರಮೇಶ್​ ಇನ್ನಿಲ್ಲದಂತೆ ಪ್ಲ್ಯಾನ್​ ಮಾಡುತ್ತಿದ್ದಾನೆ.</p><img><p>ಅದರ ಭಾಗವಾಗಿ ನಿಧಿಗೆ ಬೇರೆ ಮದುವೆ ಮಾಡಲು ಹುಡುಗನನ್ನು ನೋಡಿದ್ದಾನೆ. ಹುಡುಗ ಬಂದಾಗ ಆತನನ್ನು ಹೇಗಾದರೂ ಓಡಿಸಬಹುದು ಎಂದು ಕರ್ಣ ಮತ್ತು ನಿಧಿ ಪ್ಲ್ಯಾನ್​ ಮಾಡಿ ಇದಕ್ಕೆ ಒಪ್ಪಿದ್ದರು.</p><img><p>ಆದರೆ ಆಗಿದ್ದೇ ಬೇರೆ. ಅಲ್ಲಿ ಬಂದವ ಹ್ಯಾಂಡ್​ಸಮ್​ ಅರ್ಜುನ್​. ಅರ್ಜುನ ಒಬ್ಬ ಡಾಕ್ಟರ್​, ಹಾರ್ಟ್​ ಸರ್ಜನ್​. ಸಿಕ್ಕಾಪಟ್ಟೆಯ ಒಳ್ಳೆಯ ಯುವಕ. ಅವನು ಬಂದವನೇ ನಿಧಿಯನ್ನು ನೋಡಿದ್ದಾನೆ.</p><img><p>ಅರ್ಜುನ್ ಎಲ್ಲರಿಗೂ ಇಷ್ಟ ಆಗಿಬಿಟ್ಟಿದ್ದಾನೆ. ಅವನು ತನ್ನನ್ನು ಒಪ್ಪಿಕೊಳ್ಳಬಾರದು ಎಂದು ನಿಧಿ ಸೊಟ್ಟ ಮೂತಿ ಮಾಡಿ ಬಂದಿದ್ದಾಳೆ.</p><img><p>ಆದರೂ ಕರ್ಣ ನಿಧಿಯನ್ನು ಒಪ್ಪಿಕೊಂಡು ಬಿಟ್ಟಿದ್ದಾನೆ. ಎಲ್ಲರಿಗೂ ಖುಷಿಯೋ ಖುಷಿ. ನಿಧಿ ಮತ್ತು ಕರ್ಣ ಮಾತ್ರ ಇಂಗು ತಿಂದ ಮಂಗನಂತಾಗಿದ್ದರೆ, ತನ್ನ ಪ್ಲ್ಯಾನ್​ ಸಕ್ಸಸ್​ ಆಗಿರೋ ಖುಷಿಯಲ್ಲಿ ಇದ್ದಾನೆ ರಮೇಶ್​.</p><img><p>ಈಗೇನಿದ್ದರೂ ನಿಧಿ ಮತ್ತು ಕರ್ಣ ತಮ್ಮ ಲವ್​ಸ್ಟೋರಿಯನ್ನು ಎಲ್ಲರ ಎದುರು ಹೇಳಲೇಬೇಕಿದೆ. ಅದಕ್ಕೆ ಅವಕಾಶ ಸಿಗುತ್ತಾ ಎನ್ನುವುದು ಮುಂದಿರುವ ಪ್ರಶ್ನೆ. ಈಗ ಬಂದಿರುವ ಅರ್ಜುನ್​ನನ್ನು ನೋಡಿದರೆ, ಅವರಿಬ್ಬರೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಇಷ್ಟು ಬೇಗ ಅವಕಾಶ ಸಿಗುವುದಿಲ್ಲ ಎಂದೇ ಅನ್ನಿಸುತ್ತಿದೆ.</p>



Source link

Leave a Reply

Your email address will not be published. Required fields are marked *