ಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ ಭೇಟಿ: ಪತಿಯನ್ನ ನೋಡಲು ನಟ ಧನ್ವೀರ್ ಜೊತೆ ಆಗಮಿಸಿದ ದರ್ಶನ್ ಪತ್ನಿ!

ಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ ಭೇಟಿ: ಪತಿಯನ್ನ ನೋಡಲು ನಟ ಧನ್ವೀರ್ ಜೊತೆ ಆಗಮಿಸಿದ ದರ್ಶನ್ ಪತ್ನಿ!



ಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ ಭೇಟಿ: ಪತಿಯನ್ನ ನೋಡಲು ನಟ ಧನ್ವೀರ್ ಜೊತೆ ಆಗಮಿಸಿದ ದರ್ಶನ್ ಪತ್ನಿ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಅವರು ನಿರಂತರವಾಗಿ ಬೆಂಬಲ ನೀಡುತ್ತಿದ್ದಾರೆ. ಇಂದಿನ ಜೈಲು ಭೇಟಿಯ ವೇಳೆ, ಅವರೊಂದಿಗೆ ನಟ ಧನ್ವೀರ್ ಗೌಡ ಕೂಡ ಕಾಣಿಸಿಕೊಂಡು ದರ್ಶನ್‌ಗೆ ಧೈರ್ಯ ತುಂಬಿದ್ದಾರೆ.<img><p>ದರ್ಶನ್ ಅವರು ಜೈಲು ಸೇರಿದ ದಿನದಿಂದಲೂ ಪತ್ನಿ ವಿಜಯಲಕ್ಷ್ಮಿ ಅವರು ಪತಿಯ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಕಾನೂನು ಹೋರಾಟದ ನಡುವೆಯೂ ಪ್ರತಿ ಬಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಯೋಗಕ್ಷೇಮ ವಿಚಾರಿಸುತ್ತಿರುವ ಅವರು, ಇಂದು ಕೂಡ ಚಾಚು ತಪ್ಪದೆ ಪರಪ್ಪನ ಅಗ್ರಹಾರಕ್ಕೆ ಆಗಮಿಸಿ ಪತಿಯನ್ನು ಭೇಟಿಯಾದರು.</p><img><p>ಇಂದಿನ ಭೇಟಿಯ ವಿಶೇಷವೆಂದರೆ ವಿಜಯಲಕ್ಷ್ಮಿ ಅವರ ಜೊತೆಗೆ ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ ಕೂಡ ಕಾಣಿಸಿಕೊಂಡರು. ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಧನ್ವೀರ್, ವಿಜಯಲಕ್ಷ್ಮಿ ಅವರೊಂದಿಗೆ ಜೈಲಿಗೆ ಆಗಮಿಸಿ ದರ್ಶನ್ ಅವರನ್ನು ಕಂಡು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.</p><img><p>ನಟ ದರ್ಶನ್ ಅವರಿಗೆ ಜೈಲು ವಾಸ ಹೊಸದೇನಲ್ಲ. ಈ ಹಿಂದೆ ಕೂಡ ವೈಯಕ್ತಿಕ ಕಾರಣಗಳಿಂದ ಜೈಲು ಸೇರಿದ್ದ ಅವರು, ಇದೀಗ ರೇಣುಕಾಸ್ವಾಮಿ ಕೊಲೆ ಎಂಬ ಪ್ರಕರಣದಲ್ಲಿ ಎರಡನೇ ಬಾರಿಗೆ ಪರಪ್ಪನ ಅಗ್ರಹಾರದ ಕಂಬಿ ಎಣಿಸುವಂತಾಗಿದೆ. ಚಿತ್ರರಂಗದ ‘ದಾಸ’ನಿಗೆ ಈ ಬಾರಿ ಕಾನೂನಿನ ಸಂಕಷ್ಟ ಮತ್ತಷ್ಟು ಕಠಿಣವಾಗಿದೆ.</p><img><p>ಜೈಲಿನ ಭೇಟಿಯ ವೇಳೆ ದರ್ಶನ್ ಮತ್ತು ವಿಜಯಲಕ್ಷ್ಮಿ ನಡುವೆ ಕೆಲಕಾಲ ಮಾತುಕತೆ ನಡೆದಿದೆ. ಮನೆಯ ಪರಿಸ್ಥಿತಿ, ಮಗನ ಯೋಗಕ್ಷೇಮ ಹಾಗೂ ಕೇಸ್‌ನ ಮುಂದಿನ ಬೆಳವಣಿಗೆಗಳ ಬಗ್ಗೆ ದರ್ಶನ್ ಅವರು ಪತ್ನಿಯ ಬಳಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಸಂಕಷ್ಟದ ಸಮಯದಲ್ಲಿ ಪತ್ನಿಯ ಭೇಟಿ ದರ್ಶನ್‌ಗೆ ಮಾನಸಿಕ ಸ್ಥೈರ್ಯ ನೀಡಿದೆ.</p><img><p>ದರ್ಶನ್ ಪತ್ನಿ ಮತ್ತು ನಟ ಧನ್ವೀರ್ ಜೈಲಿಗೆ ಬರುತ್ತಿದ್ದಂತೆ ಮಾಧ್ಯಮಗಳು ಮುತ್ತಿಗೆ ಹಾಕಿದವು. ಆದರೆ ಯಾವುದಕ್ಕೂ ಪ್ರತಿಕ್ರಿಯೆ ನೀಡದ ವಿಜಯಲಕ್ಷ್ಮಿ ಅವರು ನೇರವಾಗಿ ಒಳಕ್ಕೆ ತೆರಳಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿರುವ ಈ ಸಮಯದಲ್ಲಿ ದರ್ಶನ್ ಅವರ ಪ್ರತಿ ನಡೆಯೂ ಕುತೂಹಲ ಕೆರಳಿಸಿದೆ.</p>



Source link

Leave a Reply

Your email address will not be published. Required fields are marked *