
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 17, ಶುಕ್ರವಾರದ ದ್ವಾದಶ ರಾಶಿಗಳ ಫಲಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷದ ಅಮವಾಸ್ಯೆ ತಿಥಿಯಾಗಿದೆ. ಶುಕ್ರವಾರದಂದು ಬಂದಿರುವ ಅಮಾವಾಸ್ಯೆಯು ಮಹಾಲಕ್ಷ್ಮಿ ಪೂಜೆಗೆ ಪ್ರಾಶಸ್ತ್ಯವಾದ ದಿನವಾಗಿದೆ. ನಾಳೆಯಿಂದ ವೈಶಾಖ ಮಾಸ ಪ್ರಾರಂಭವಾಗುವುದರಿಂದ ಇದನ್ನು ವೈಶಾಖ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ.
ರೇವತಿ ನಕ್ಷತ್ರ, ವೈದೃತಿ ಯೋಗ ಮತ್ತು ಚತುಷ್ಪಾತ್ಕರಣ ಇರತಕ್ಕಂತ ಈ ದಿನ ಮೀನರಾಶಿಯಲ್ಲಿ ಚಂದ್ರ ಸಂಚಾರ ಮಾಡುವುದು, ಮೇಷ ರಾಶಿಯಲ್ಲಿ ರವಿ ಸಂಚಾರ ಮಾಡುವುದು. ಇಂದು ಗಜಕೇಸರಿ ಯೋಗ ಕೂಡ ಇರಲಿದೆ. ಡಾ. ಬಸವರಾಜ ಗುರೂಜಿ ಅವರ ಪ್ರತಿ ರಾಶಿಗಳ ಗ್ರಹಗಳ ಶುಭ ಫಲ, ಧನ ಯೋಗ, ಆರೋಗ್ಯ, ವ್ಯವಹಾರ, ಅದೃಷ್ಟ ಸಂಖ್ಯೆ, ಬಣ್ಣ ಮತ್ತು ದಿಕ್ಕಿನ ಬಗ್ಗೆ ವಿವರಿಸಲಾಗಿದೆ.