ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಹಿನ್ನಲೆಯಲ್ಲಿ ಎಸ್ಐಟಿ ತನಿಖೆ ನಡೆಯುತ್ತಿದೆ. ಹಳೆಯ ಪ್ರಕರಣಗಳ ಸತ್ಯಾಸತ್ಯತೆ ಪತ್ತೆ ಮಾಡಲು ತಂಡ ಹೊರಟಿದೆ. ಪದ್ಮಲತಾ, ವೇದವಲ್ಲಿ, ಆನೆ ಮಾವುತ ಅವರ ಕಥೆಗಳು ಮತ್ತೆ ಚರ್ಚೆಗೆ ಬಂದಿವೆ. ಹೂತಿಟ್ಟ ಶವಗಳ ಬಗ್ಗೆ ನೀಡಲಾದ ಹೇಳಿಕೆಗಳು ರಾಜ್ಯದ ಗಮನ ಸೆಳೆದಿವೆ. ಎಷ್ಟು ಸತ್ಯ ಹೊರಬರುತ್ತದೆ ಎಂಬುದನ್ನು ಕಾಲವೇ ತೋರಿಸಲಿದೆ.