Headlines

ಗಳೆ ಹೊಡೆಯಲು ಎತ್ತುಗಳಿಲ್ಲದ ಕಲಘಟಗಿಯ ವೃದ್ಧ ದಂಪತಿ ತಾವೇ ಪಶುಗಳ ಹಾಗೆ ಕೆಲಸಕ್ಕೆ ಮುಂದಾಗುತ್ತಾರೆ!

ಗಳೆ ಹೊಡೆಯಲು ಎತ್ತುಗಳಿಲ್ಲದ ಕಲಘಟಗಿಯ ವೃದ್ಧ ದಂಪತಿ ತಾವೇ ಪಶುಗಳ ಹಾಗೆ ಕೆಲಸಕ್ಕೆ ಮುಂದಾಗುತ್ತಾರೆ!


ಗಳೆ ಹೊಡೆಯಲು ಎತ್ತುಗಳಿಲ್ಲದ ಕಲಘಟಗಿಯ ವೃದ್ಧ ದಂಪತಿ ತಾವೇ ಪಶುಗಳ ಹಾಗೆ ಕೆಲಸಕ್ಕೆ ಮುಂದಾಗುತ್ತಾರೆ!

ಧಾರವಾಡ, ಜೂನ್ 25: ಈ ದೃಶ್ಯಗಳನ್ನು ನೋಡಿದ ಬಳಿಕ ನಮ್ಮ ರಾಜಕಾರಣಿಗಳಿಗೆ ಏನೂ ಅನಿಸುತ್ತಿಲ್ಲವಾದರೆ ಅವರಲ್ಲಿ ಮಾನವೀಯತೆ ಸತ್ತಿದೆ ಅಂತಲೇ ಅರ್ಥ. ಎತ್ತುಗಳ ಹಾಗೆ ಗಳೆ ಹೊಡೆಯುತ್ತಿರುವ ಜಂಬುಲಿಂಗ ಬಸವಣ್ಣೆಪ್ಪ ಅಂಗಡಿಯವರಿಗೆ ಈಗ 62 ರ ಇಳಿಪ್ರಾಯ. ಆದರೂ ತಮ್ಮ ಪತ್ನಿಯೊಂದಿಗೆ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ದುಡಿಯುವುದು ತಪ್ಪಿಲ್ಲ. ಗಳೆ ಹೊಡೆಯಲು ಅವರಲ್ಲಿ ಎತ್ತುಗಳಿಲ್ಲ ಮತ್ತು ಅವುಗಳನ್ನು ಬಾಡಿಗೆ ಪಡೆಯಲು ಅಥವಾ ಕೊಳ್ಳಲು ಹಣವಿಲ್ಲ. ತಮ್ಮನ್ನು ಸಲುಹಿರಿ ಅಂತ ಈ ಸ್ವಾಭಿಮಾನಿ ಹಿರಿಯ ದಂಪತಿ ಯಾರನ್ನೂ ಅಂಗಲಾಚುತ್ತಿಲ್ಲ, ಬದಲಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಮ್ಮವರೆಗೆ ಮುಟ್ಟಿಸಿ ಅಂತ ವಿನಂತಿಸಿಕೊಳ್ಳುತ್ತಿದ್ದಾರೆ. ಧಾರವಾಡದ ಕಲಘಟಗಿಯಲ್ಲಿ ಸಾಕಷ್ಟು ಬ್ಯಾಂಕುಗಳಿವೆ, ಜಂಬುಲಿಂಗ ಅವರಿಗೆ ಕೃಷಿ ಸಾಲ ಕೊಡಿಸಿದರೆ ಎತ್ತುಗಳನ್ನು ಕೊಂಡು ತಮ್ಮ ಬದುಕಿನಲ್ಲಿ ಕೊಂಚ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ಕ್ಷೇತ್ರದ ಶಾಸಕ ಮತ್ತು ಮಂತ್ರಿಯೂ ಅಗಿರುವ ಸಂತೋಷ್ ಲಾಡ್ ಕೇಳಿಸಿಕೊಳ್ಳುತ್ತಿದ್ದಾರೆಯೇ?

ಇದನ್ನೂ ಓದಿ:   Karnataka Assembly Session: ಉತ್ತರ ಕರ್ನಾಟಕದಲ್ಲಿ ಕೇವಲ ಕೃಷಿ ಕ್ರಾಂತಿ ಆದರೆ ಸಾಲದು, ಔದ್ಯೋಗಿಕ ಕ್ರಾಂತಿಯೂ ಅಗಬೇಕು: ಲಕ್ಷ್ಮಣ ಸವದಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *