ರಾಜಪಟ್ಟ ರಹಸ್ಯ. ಮತ್ತೆ ದೈವ ಶಕ್ತಿಯ ಮೊರೆ ಹೋದ ಡಿಕೆ! ನವಿಲೆ ನಾಗೇಶ್ವರ ಸನ್ನಿಧಾನದಲ್ಲಿ ಕನಕಪುರ ಶಿವ! ಕನಕಾಧಿಪತಿಗೂ ಸಿಗುತ್ತಾ ರಾಜಹುಲಿಗೆ ಸಿಕ್ಕಿದ್ದ ಪ್ರಾರ್ಥನೆ ಫಲ? ಎರಡು ಗಂಟೆ ಪೂಜೆ. ಮಹಾ ಸಂಕಲ್ಪ. ಏನದು ದೈವವಾಣಿ? ಇದೇ ಇವತ್ತಿನ ಸುವರ್ಣ ಸ್ಪೆಷಲ್ ನವಿಲೆ ನಾಗೇಶ್ವರ ಶಿವ ರಹಸ್ಯ.
ಪ್ರಯತ್ನ ಫಲ ಕೊಡದೇ ಹೋದ್ರು ಪ್ರಾರ್ಥನೆ ಫಲ ಕೊಡುತ್ತೆ. ಕನಕಾಧಿಪತಿ ಡಿ.ಕೆ.ಶಿವಕುಮಾರ್ ಇಡ್ಕೊಂಡಿರೋ ನಂಬಿಕೆಯಿದು. ಅದಕ್ಕಾಗಿಯೇ ಪ್ರಾರ್ಥನೆಯ ಪಥ ತುಳಿದಿರೋದು ಡಿಕೆ ಶಿವಕುಮಾರ್. ಇದ್ರ ಭಾಗವಾಗಿಯೇ ಅದೊಂದು ದೇಗುಲಕ್ಕೆ ಬಂಡೆ ಭೇಟಿ ಕೊಟ್ಟಾಗಿದೆ. ಬಂಡೆ ಪರವಾಗಿ ಮಹಾ ಭವಿಷ್ಯವಾಣಿಯೊಂದು ಸಹ ಆ ದೈವನೆಲದಿಂದ ಹೊರಬಿದ್ದಿದೆ