
ರಾತ್ರಿ 7-8 ಗಂಟೆಗೆ, ನೀವು ಗಸಗಸೆ ಮತ್ತು ಒಂದು ಚಿಟಿಕೆ ಜಾಯಿಕಾಯಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯಬಹುದು. ಇದು ದೇಹವನ್ನು ಶಾಂತಗೊಳಿಸುತ್ತದೆ. ನಿದ್ದೆಗೆ ಪ್ರೇರೇಪಿಸುತ್ತದೆ. ತೆಂಗಿನ ಎಣ್ಣೆಯಿಂದ ಪಾದಗಳನ್ನು ಮಸಾಜ್ ಮಾಡುವುದರಿಂದ ನರಗಳು ಶಾಂತವಾಗುತ್ತವೆ. ವಿಶ್ರಾಂತಿ ಸಿಗುತ್ತದೆ. ಮಧ್ಯರಾತ್ರಿ ಎಚ್ಚರಗೊಳ್ಳುವವರು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಬಾಳೆಹಣ್ಣು ಅಥವಾ ಪೇರಲ (ಅಥವಾ ಕೆಲವು ಬಿಸ್ಕತ್ತುಗಳು) ತಿನ್ನಬಹುದು.
ಬೆಳಗ್ಗೆ ಬೇಗ ಎಚ್ಚರಗೊಳ್ಳುವವರು, ಒತ್ತಡವನ್ನು ಕಡಿಮೆ ಮಾಡಲು 10 ಬಾರಿ ಆಳವಾದ ಉಸಿರಾಟದ ವ್ಯಾಯಾಮ ಮಾಡಬಹುದು. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ನಿದ್ದೆ ಮಾಡಿದ ನಂತರವೂ ದಣಿವಾಗುವವರು, ಸಂಜೆ ವೇಳೆ ಹಗುರ ವ್ಯಾಯಾಮ ಮಾಡುವುದು ಅಥವಾ ಬಿಸಿಲಿನಲ್ಲಿ ನಡೆಯುವುದು ಒಳ್ಳೆಯದು. ಚಯಾಪಚಯವನ್ನು ಹೆಚ್ಚಿಸಲು ನೀವು ಸಂಜೆ ಪುದೀನಾ ಚಹಾ ಅಥವಾ ತುಳಸಿ ಚಹಾ ಕುಡಿಯಬಹುದು.