ಚಿಕನ್​ ಪ್ರಿಯರಿಗೆ ಮರ್ಮಾಘಾತ: ಎಂಪೈರ್​ ರೆಸ್ಟೋರೆಂಟ್​ ಕಬಾಬ್​ ತಿಂದೋರಿಗೆ ಶಾಕ್ ಕೊಟ್ಟ ಆಹಾರ ಇಲಾಖೆ | Bengalurus Empire Kababs Flagged Unsafe By Food Safety Body Suc

ಚಿಕನ್​ ಪ್ರಿಯರಿಗೆ ಮರ್ಮಾಘಾತ: ಎಂಪೈರ್​ ರೆಸ್ಟೋರೆಂಟ್​ ಕಬಾಬ್​ ತಿಂದೋರಿಗೆ ಶಾಕ್ ಕೊಟ್ಟ ಆಹಾರ ಇಲಾಖೆ | Bengalurus Empire Kababs Flagged Unsafe By Food Safety Body Suc



ಬೆಂಗಳೂರಿನ ಎಂಪೈರ್ ರೆಸ್ಟೋರೆಂಟ್​ ಒಂದರಲ್ಲಿ ಬಳಲಾಗ್ತಿರೋ ಚಿಕನ್​ ಕಬಾಬ್​ ಅಸುಕ್ಷಿತವಾಗಿರುವುದಾಗಿ ರಾಜ್ಯ ಆಹಾರ ಇಲಾಖೆ ನೋಟಿಸ್​ ಜಾರಿ ಮಾಡಿದೆ. ವರದಿಯಲ್ಲಿ ಕಂಡು ಬಂದ ಸತ್ಯವೇನು? 

ಮಟನ್​ ಮತ್ತು ಚಿಕನ್​ ಬಗ್ಗೆ ಆಗಾಗ್ಗೆ ಆಘಾತಕಾರಿ ವಿಷಯಗಳು ಬಹಿರಂಗಗೊಳ್ಳುತ್ತಲೇ ಇರುತ್ತವೆ. ಇದಾಗಲೇ ಕ್ಯಾನ್ಸರ್​ನಂಥ ಮಹಾಮಾರಿಯನ್ನು ತರಬಲ್ಲ ರುಚಿಕರ ವಿಷಕಾರಿ ಬಣ್ಣಗಳನ್ನು ಬಳಸುವ ಮೂಲಕ ಆಹಾರ ನೀಡ್ತಿರೋ ಹಲವರಿಗೆ ಇದಾಗಲೇ ಆರೋಗ್ಯ ಇಲಾಖೆ ಬಿಸಿ ಮುಟ್ಟಿಸಿದೆ. ಗೋಬಿ ಮಂಚೂರಿಯಿಂದ ಹಿಡಿದು ವಿವಿಧ ರೀತಿಯ ರುಚಿಕರ, ಘಮ್​ ಎನ್ನುವ ಆಹಾರಗಳು ವಿಷಕಾರಿ ಎನ್ನುವುದು ತಿಳಿದ ಬೆನ್ನಲ್ಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹೆಚ್ಚುತ್ತಿರುವ ಕ್ಯಾನ್ಸರ್​ನಂಥ ಮಾರಣಾಂತಿಕ ಕಾಯಿಲೆಗಳಲ್ಲಿ ಇದರ ಕೊಡುಗೆ ಅಪಾರವಾಗಿದೆ ಎಂದು ಇದಾಗಲೇ ವೈದ್ಯರು ಕೂಡ ಹೇಳಿಯಾಗಿದೆ.

ಇದೀಗ ಮಾಂಸಕ್ಕಾಗಿಯೇ ಜನಪ್ರಿಯವಾಗಿರುವ ಎಂಪೈರ್​ ರೆಸ್ಟೋರೆಂಟ್​ನ ಚಿಕನ್ ಕಬಾಬ್ ತಿಂದೋರಿಗೆ ಆರೋಗ್ಯ ಇಲಾಖೆ ಶಾಕಿಂಗ್​ ನ್ಯೂಸ್​ ಕೊಟ್ಟಿದೆ. ರಾಜ್ಯ ಆಹಾರ ಪ್ರಯೋಗಾಲಯ, ಸಾರ್ವಜನಿಕ ಆರೋಗ್ಯ ಸಂಸ್ಥೆಯ ಪ್ರಯೋಗಾಲಯದ ವರದಿಯು ಬೆಂಗಳೂರಿನ ಗಾಂಧಿನಗರದ ಔಟ್‌ಲೆಟ್‌ನಲ್ಲಿ ನೀಡಲಾಗುವ ಚಿಕನ್ ಕಬಾಬ್‌ಗಳು ಮಾನವ ಬಳಕೆಗೆ ಸುರಕ್ಷಿತವಲ್ಲ ಎಂದು ಘೋಷಿಸಿ ಈ ಬಗ್ಗೆ ನೋಟಿಸ್​ ನೀಡಿದೆ.

ಆಹಾರ ಸುರಕ್ಷತಾ ಅಧಿಕಾರಿ ಅಂಬರೀಷ್ ಗೌಡ ಅವರು ಆನಂದ್ ರಾವ್ ವೃತ್ತದ ಬಳಿಯ ಎಂಪೈರ್‌ನ ಔಟ್‌ಲೆಟ್‌ನಿಂದ 2 ಕಿಲೋಗ್ರಾಂಗಳಷ್ಟು ಚಿಕನ್ ಕಬಾಬ್ ಮಾದರಿಗಳನ್ನು (ತಲಾ 500 ಗ್ರಾಂನ ನಾಲ್ಕು ಪ್ಯಾಕೆಟ್‌ಗಳು) ಸಂಗ್ರಹಿಸಿದ ನಂತರ ಆಹಾರ ಸುರಕ್ಷತಾ ಎಚ್ಚರಿಕೆ ನೀಡಲಾಗಿದೆ. ನಂತರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಯಿತು. ಜುಲೈ 11 ರಂದು ನಡೆದ ಪರೀಕ್ಷಾ ಫಲಿತಾಂಶಗಳು, ಚಿಕನ್ ಕಬಾಬ್‌ಗಳು ಆಹಾರ ಉತ್ಪನ್ನ ಮಾನದಂಡಗಳು ಮತ್ತು ಆಹಾರ ಸೇರ್ಪಡೆಗಳ ನಿಯಮಗಳು, 2011 ರ ಅಡಿಯಲ್ಲಿ ವಿವರಿಸಲಾದ ಅಗತ್ಯ ಸುರಕ್ಷತಾ ಮಾನದಂಡಗಳನ್ನು ಪೂರೈಸಲಿಲ್ಲ ಎಂದು ಬಹಿರಂಗಪಡಿಸಿವೆ. ನಂತರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ರ ಅಡಿಯಲ್ಲಿ ಆಹಾರವನ್ನು ಅಸುರಕ್ಷಿತ ಎಂದು ಘೋಷಿಸಲಾಯಿತು.

ಇದಕ್ಕೆ ಪ್ರತಿಕ್ರಿಯೆಯಾಗಿ, ಬಿಬಿಎಂಪಿಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಉತ್ತರ ವಲಯ) ರೆಸ್ಟೋರೆಂಟ್‌ಗೆ ಔಪಚಾರಿಕ ನೋಟಿಸ್ ನೀಡಿದ್ದು, ಪ್ರತಿಕ್ರಿಯಿಸಲು 30 ದಿನಗಳ ಕಾಲಾವಕಾಶ ನೀಡಿದೆ. ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಆಹಾರ ಮಾದರಿಯ ಎರಡನೇ ಭಾಗವನ್ನು ಮರುಪರೀಕ್ಷೆಗೆ ಒಳಪಡಿಸಬಹುದು ಎಂದು ರೆಸ್ಟೋರೆಂಟ್‌ಗೆ ತಿಳಿಸಲಾಗಿದೆ, ಆದರೆ ಅದು ಅವರ ಸ್ವಂತ ಖರ್ಚಿನಲ್ಲಿ ಮಾತ್ರ. “ನಮಗೆ ಎಫ್‌ಎಸ್‌ಎಸ್‌ಎಐ ನೀಡಿದ ಸೂಚನೆ ಬಂದಿದೆ. ಈ ಸಮಸ್ಯೆಯ ವಿವರಗಳ ಕುರಿತು ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ನಮ್ಮ ಕಬಾಬ್‌ಗಳಲ್ಲಿ ಆಹಾರ ಬಣ್ಣ ಬಳಸುವುದನ್ನು ನಾವು ಈಗ ನಿಲ್ಲಿಸಿದ್ದೇವೆ ಎಂದು ನಾನು ದೃಢೀಕರಿಸಬಲ್ಲೆ” ಎಂದು ಎಂಪೈರ್ ಸರಪಳಿ ರೆಸ್ಟೋರೆಂಟ್‌ಗಳ ಸಿಇಒ ಶಕೀರ್ ಅವರನ್ನು ಎನ್‌ಡಿಟಿವಿಗೆ ತಿಳಿಸಿರುವುದಾಗಿ ಅದು ವರದಿ ಮಾಡಿದೆ.

 



Source link

Leave a Reply

Your email address will not be published. Required fields are marked *