Headlines

ಚಾಮರಾಜನಗರದಲ್ಲಿ ಮನಿ ಡಬ್ಲಿಂಗ್ ಶಾಕಿಂಗ್ ಕೇಸ್, ವಂಚಕರಿಗೆ ಪೊಲೀಸರಿಂದಲೇ ಸಾಥ್!?

ಚಾಮರಾಜನಗರದಲ್ಲಿ ಮನಿ ಡಬ್ಲಿಂಗ್ ಶಾಕಿಂಗ್ ಕೇಸ್, ವಂಚಕರಿಗೆ ಪೊಲೀಸರಿಂದಲೇ ಸಾಥ್!?




<p><strong>ಚಾಮರಾಜನಗರ (ಜುಲೈ.27):</strong> ಮನಿ ಡಬ್ಲಿಂಗ್ ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆಯೊಂದು ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದು, ಆಘಾತಕಾರಿಯೆಂದರೆ ಈ ವಂಚನೆಗೆ ಪೊಲೀಸರೇ ಸಾಥ್ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.</p><p>ತಮಿಳುನಾಡು ಮೂಲದ ಸಚ್ಚಿದಾನಂದಮೂರ್ತಿ ಎಂಬವರು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಅನ್ಸಾರಿ ಎಂಬಾತನು ಮನಿ ಡಬ್ಲಿಂಗ್ ಮಾಡಿಕೊಡುವುದಾಗಿ ಸಚ್ಚಿದಾನಂದಮೂರ್ತಿಯವರಿಗೆ ನಂಬಿಸಿದ್ದಾನೆ. ಈ ಮಾತಿನ ಮೇಲೆ ಭರವಸೆಯಿಟ್ಟು ಸಚ್ಚಿದಾನಂದಮೂರ್ತಿ 3 ಲಕ್ಷ ರೂಪಾಯಿಗಳನ್ನು ಅವರು ಹೇಳಿದ್ದ ಖಾಸಗಿ ಹೋಟೆಲ್‌ನ ರೂಂಗೆ ತಂದಿದ್ದಾರೆ. ಮೂರು ಲಕ್ಷ ರೂಪಾಯಿಗಳನ್ನು ಕೊಡುತ್ತಿದ್ದ ವೇಳೆ ದಿಢೀರ್ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆ ಪೊಲೀಸರು 3 ಲಕ್ಷ ರೂಪಾಯಿಗಳನ್ನು ಕಿತ್ತುಕೊಂಡು, ಮತ್ತೆ ಒಂದು ಲಕ್ಷ ರೂಪಾಯಿ ಕೊಡುವಂತೆ ಸಚ್ಚಿದಾನಂದಮೂರ್ತಿಯವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.</p><p>ಇದೇ ವೇಳೆ, ಸೈಯದ್ ಇಮ್ರಾನ್ ಎಂಬಾತನ ಖಾತೆಗೆ 70 ಸಾವಿರ ರೂಪಾಯಿಗಳನ್ನು ಗೂಗಲ್ ಪೇ ಮೂಲಕ ವರ್ಗಾಯಿಸುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರು ಈ ವಂಚನೆಯಲ್ಲಿ ಆರೋಪಿಗಳೊಂದಿಗೆ ಸೇರಿಕೊಂಡು ಪೂರ್ವನಿಯೋಜಿತವಾಗಿ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಒಟ್ಟು ಏಳು ಮಂದಿಯ ವಿರುದ್ಧ ದೂರು ದಾಖಲಾಗಿದೆ.</p><p>ಈ ಘಟನೆಯಿಂದಾಗಿ ಚಾಮರಾಜನಗರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಮನಿ ಡಬ್ಲಿಂಗ್, ವಂಚನೆ ವಿರುದ್ಧ ಕ್ರಮ ಜರುಗಿಸಬೇಕಾದ ಪೊಲೀಸರೇ ವಂಚಕರೊಂದಿಗೆ ಸೇರಿಕೊಂಡ ಅಮಾಯಕ ಜನರ ಹಣ ದೋಚುತ್ತಿರುವುದು ಇಡೀ ಪೊಲೀಸ್ ಇಲಾಖೆ ಕಳಂಕವಾಗಿದೆ.</p>



Source link

Leave a Reply

Your email address will not be published. Required fields are marked *