Headlines

Ramachari Serial: ಪ್ರಪಂಚಕ್ಕೆ ಬರೋ ಮುಂಚೆ ರಾಮಾಚಾರಿ-ಚಾರುಲತಾ ಮಗು ಸತ್ತು ಹೋಗತ್ತಾ? | Colors Kannada Ramachari Kannada Serial Written Update 2025 Will Ramachari Charulata S Child Survive

Ramachari Serial: ಪ್ರಪಂಚಕ್ಕೆ ಬರೋ ಮುಂಚೆ ರಾಮಾಚಾರಿ-ಚಾರುಲತಾ ಮಗು ಸತ್ತು ಹೋಗತ್ತಾ? | Colors Kannada Ramachari Kannada Serial Written Update 2025 Will Ramachari Charulata S Child Survive



Ramachari Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼರಾಮಾಚಾರಿʼ ಧಾರಾವಾಹಿಯಲ್ಲಿ ಚಾರುಲತಾ-ರಾಮಾಚಾರಿ ಮಗುವಿನ ಅಳಿವು ಉಳಿವಿನ ಪ್ರಶ್ನೆ ಎದ್ದಿದೆ. ಹಾಗಾದರೆ ಮುಂದೆ ಏನಾಗುವುದು? 

ರಾಮಾಚಾರಿ ಧಾರಾವಾಹಿಯಲ್ಲಿ ನಮ್ಮ ಮನೆಗೆ ಮಗು ಬರುತ್ತದೆ ಅಂತ ರಾಮಾಚಾರಿ, ಚಾರುಲತಾ ಕಾತರದಿಂದ ಕಾದು ಕುಳಿತಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಈ ಜೋಡಿ ಈಗ ಹುಟ್ಟದೇ ಇರೋ ಮಗುವನ್ನು ಸಾಯಿಸೋ ಯೋಚನೆ ಮಾಡಿದ್ದಾರೆ. ಹಾಗಾದರೆ ರಾಮಾಚಾರಿ ಮಗು ಪ್ರಪಂಚಕ್ಕೆ ಬರೋ ಮುನ್ನವೇ ಸತ್ತು ಹೋಗತ್ತಾ?

ಚಾರುಲತಾ-ರಾಮಾಚಾರಿ ದೂರ ಆಗ್ತಾರಾ?

ಚಾರುಲತಾ ತಾಯಿ ಮಾನ್ಯತಾ ದುಷ್ಟೆ. ತನ್ನ ಮಗಳು ತನ್ನ ಜೊತೆ ಇರಬೇಕು, ರಾಮಾಚಾರಿಯಿಂದ ದೂರ ಇರಬೇಕು ಅಂತ ಅವಳು ಏನೇನೋ ಕುತಂತ್ರ ಮಾಡಿದ್ದಳು. ತನ್ನ ಉದ್ದೇಶ ಸಾಧಿಸಲು ಅವಳು ಈಗ ತನ್ನ ಗಂಡನನ್ನು ಕೂಡ ಜೈಲಿಗೆ ಕಳಿಸಿದ್ದಾಳೆ. ತಾವಿಬ್ಬರೂ ಜೊತೆಗೆ ಇರೋದಿಕ್ಕೆ ಉಳಿದವರಿಗೆ ಸಮಸ್ಯೆ ಅಂತ ಚಾರು-ರಾಮಾಚಾರಿ ದೂರ ಆಗೋಕೆ ನಿರ್ಧಾರ ಮಾಡಿದ್ದಾಳೆ.

ಮಗು ಸತ್ತು ಹೋಗತ್ತಾ?

“ನನ್ನ ಮಗಳು ಚಾರುಲತಾ, ರಾಮಾಚಾರಿ ನನ್ನ ಅಳಿಯನಲ್ಲ. ಇವರಿಬ್ಬರು ದೂರ ಆಗ್ತಿರೋದು ನಿಜಕ್ಕೂ ಖುಷಿಯ ವಿಷಯ. ಇಷ್ಟುದಿನ ಕೆಟ್ಟ ದಾರಿ ಹಿಡಿದಿದ್ದ ನನ್ನ ಮಗಳು ಈಗ ಸರಿ ದಾರಿಗೆ ಬಂದಿದ್ದಾಳೆ. ನನ್‌ ಮಗಳಿಗೆ ಬೇಡದ ಮಗು ನನಗೂ ಬೇಡ. ಇದರಲ್ಲಿ ಅವಳಿಗೆ ಬುದ್ಧಿ ಹೇಳೋದೂ ಏನೂ ಇಲ್ಲ” ಎಂದು ಡಾಕ್ಟರ್‌ ಬಳಿ ಮಾನ್ಯತಾ ಹೇಳಿದ್ದಾಳೆ. ಡಾಕ್ಟರ್‌ ಕೂಡ ಮಗು ತೆಗೆಯಲು ರೆಡಿ ಆಗಿದ್ದಾರೆ. ಹಾಗಾದರೆ ಮಗು ಸತ್ತು ಹೋಗತ್ತಾ?

ಮಗು ಆರೋಗ್ಯವಾಗಿ ಬೆಳೆಯಬೇಕು!

ನಮಗೆ ಏನಾದರೂ ಓಕೆ, ನಮ್ಮ ಮಗು ಚೆನ್ನಾಗಿರಬೇಕು, ಮಗುಗೆ ದೇವರ ಹಾರೈಕೆ ಇದ್ದರೆ ಸಾಕು ಅಂತ ಈ ಜೋಡಿ ಸಾವಿರಾರು ಕನಸು ಕಂಡಿತ್ತು. ಈ ಕನಸೆಲ್ಲವೂ ಈಗ ನುಚ್ಚು ನೂರಾಗುವ ಸಮಯ ಬಂದಿದೆ. “ರಾಮಾಚಾರಿ ನನ್ನ ಜೊತೆಗೆ ಇದ್ದರೆ, ರಾಮಾಚಾರಿ ಮನೆಯವರು ನನ್ನ ಜೊತೆಗೆ ಇದ್ದರೆ ಅಷ್ಟೇ ಸಾಕು, ಅದೇ ನನಗೆ ಆಸ್ತಿ” ಎಂದು ಚಾರು ಸದಾ ಹೇಳುತ್ತಿದ್ದಳು. ತನ್ನ ಮಗು ಚೆನ್ನಾಗಿರಬೇಕು, ತನ್ನ ಮಗುಗೆ ಖುಷಿ, ಸಂತೋಷ ಇರಬೇಕು, ಒಳ್ಳೆಯ ಗುಣಗಳು ಬೆಳೆಯಬೇಕು ಎಂದು ಚಾರುಗೆ ರಾಮಾಚಾರಿ ನಿತ್ಯವೂ ರಾಮಾಯಣ, ಮಹಾಭಾರತದ ಕಥೆ ಹೇಳುತ್ತಿದ್ದನು.

ರಾಮಾಚಾರಿಗೆ ಗೀತೋಪದೇಶ ಮಾಡಿದ ಮಗು!

ಕೊನೆಗೂ ರಾಮಾಚಾರಿಗೆ ತನ್ನ ಮಗು ಬೇಕು ಅಂತ ಅನಿಸಿದೆ. ನನ್ನ ಮಗು ನಮ್ಮಿಬ್ಬರ ಪ್ರೀತಿಯ ಸಂಕೇತ, ನನ್ನ ಮಗು ಸಾಯಬಾರದು ಅಂತ ಕೊನೆಗೂ ರಾಮಾಚಾರಿ ಗರ್ಭಪಾತ ಮಾಡಿಸೋದನ್ನು ನಿಲ್ಲಿಸಿದ್ದಾನೆ. ಚಾರುಲತಾ ಕಾಲು ಹಿಡಿದು ರಾಮಾಚಾರಿ ಕ್ಷಮೆ ಕೇಳಿದ್ದಾನೆ. ನಾನೇ ದುಡುಕಿ ನಿರ್ಧಾರ ತಗೊಂಡೆ, ಕ್ಷಮಿಸಿ ಅಂತ ರಾಮಾಚಾರಿ ತನ್ನ ತಪ್ಪನ್ನು ತಿದ್ದುಕೊಂಡಿದ್ದಾನೆ. “ಶ್ರೀಕೃಷ್ಣನ ಬಳಿ ಅರ್ಜುನ ಕೂಡ ಯುದ್ಧ ಬೇಡ ಅಂತ ಹೇಳಿದ್ದಾನೆ, ನಮ್ಮ ಜೀವನದಲ್ಲಿ ನಮ್ಮ ಮಗು ಗೀತೋಪದೇಶ ಮಾಡಿದೆ. ನಾವು ನಮ್ಮ ಮಾವನನ್ನು ಬಿಡಿಸಬೇಕು, ಅವರಿಗಾದ ಅನ್ಯಾಯಕ್ಕೆ ಉತ್ತರ ಕೊಡಬೇಕು, ಅದೇ ನಮ್ಮ ಗುರಿಯಾಗಬೇಕು” ಎಂದು ರಾಮಾಚಾರಿ ಫಿಕ್ಸ್‌ ಆಗಿದ್ದಾನೆ.

ಕಥೆ ಏನು?

ರಾಮಾಚಾರಿ ಪೌರೋಹಿತ್ಯ ಮಾಡುತ್ತಾನೆ. ಜೊತೆಗೆ ಕಂಪೆನಿಯೊಂದರಲ್ಲಿ ಕೆಲಸ ಕೂಡ ಮಾಡುತ್ತಾನೆ. ಇವನಿಗೆ ಚಾರುಲತಾ ಎನ್ನುವ ಹಣದ ಮೋಹ ಇರೋ ದುರಹಂಕಾರಿ ಹುಡುಗಿ ಪರಿಚಯ ಆಗುವುದು. ಇವರಿಬ್ಬರು ಆರಂಭದಲ್ಲಿ ದ್ವೇಷಿಸುತ್ತಾರೆ, ಆಮೇಲೆ ಚಾರುಗೆ ರಾಮಾಚಾರಿ ಮೇಲೆ ಲವ್‌ ಆಗುವುದು. ಈ ಪ್ರೀತಿ ಇಟ್ಟುಕೊಂಡು ಚಾರು, ರಾಮಾಚಾರಿಯನ್ನು ಮದುವೆ ಆಗ್ತಾನೆ. ಆಮೇಲೆ ಇವರಿಬ್ಬರು ಪರಸ್ಪರ ಪ್ರೀತಿಯಲ್ಲಿ ಬೀಳ್ತಾರೆ.

ಪಾತ್ರಧಾರಿಗಳು

ರಾಮಾಚಾರಿ- ರಿತ್ವಿಕ್‌ ಕೃಪಾಕರ್‌

ಚಾರುಲತಾ-ಮೌನ ಗುಡ್ಡೇಮನೆ

ಮಾನ್ಯತಾ- ಝಾನ್ಸಿ ಕಾವೇರಪ್ಪ

 



Source link

Leave a Reply

Your email address will not be published. Required fields are marked *