ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ 90 ಲಕ್ಷ ರೂ. ಸಂಬಳ ಬಂದರೂ ಸಾಕಾಗ್ತಿಲ್ಲ, ತಜ್ಞರ ಮಾಹಿತಿ ಇಲ್ಲಿದೆ ನೋಡಿ | Despite 90 Lakh Rs Earnings Bengaluru Man Says Hes Financially Trapped

ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ 90 ಲಕ್ಷ ರೂ. ಸಂಬಳ ಬಂದರೂ ಸಾಕಾಗ್ತಿಲ್ಲ, ತಜ್ಞರ ಮಾಹಿತಿ ಇಲ್ಲಿದೆ ನೋಡಿ | Despite 90 Lakh Rs Earnings Bengaluru Man Says Hes Financially Trapped


ತಜ್ಞರ ಪ್ರಕಾರ, ಹಣದುಬ್ಬರ ಮತ್ತು ತೆರಿಗೆಗಳಿಂದಾಗಿ ಹೆಚ್ಚಿನ ಆದಾಯ ಪಡೆಯುವ ಜನರು ಕೂಡ ಆರ್ಥಿಕ ಒತ್ತಡದಲ್ಲಿ ಸಿಲುಕಿದ್ದಾರೆ. 

ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ವಾರ್ಷಿಕ ಕೋಟ್ಯಂತರ ರೂಪಾಯಿ ಗಳಿಸುವ ಕುಟುಂಬಗಳಿಗೂ ಸಹ ಆರ್ಥಿಕ ಬಿಕ್ಕಟ್ಟು ಎದುರಾಗುತ್ತಿರುವ ವಾಸ್ತವ ಈಗ ಬೆಳಕಿಗೆ ಬರುತ್ತಿದೆ. ಬೆಂಗಳೂರು, ಗುರುಗ್ರಾಮ್‌ನಂತಹ ಮೆಟ್ರೋ ನಗರಗಳಲ್ಲಿ ಜನರು ತಿಂಗಳಿಗೆ ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಆದರೆ ಮನೆಯ ಖರ್ಚುಗಳನ್ನು ಪೂರೈಸುವುದು ಒಂದು ಸವಾಲಾಗಿದೆ. ತಜ್ಞರು ಮತ್ತು ಸಾಮಾನ್ಯ ಜನರ ಪ್ರಕಾರ, ಹಣದುಬ್ಬರ ಮತ್ತು ತೆರಿಗೆಗಳಿಂದಾಗಿ ಹೆಚ್ಚಿನ ಆದಾಯ ಪಡೆಯುವ ಜನರು ಕೂಡ ಆರ್ಥಿಕ ಒತ್ತಡದಲ್ಲಿ ಸಿಲುಕಿದ್ದಾರೆ. 

ಮೇಲ್ಮಧ್ಯಮ ವರ್ಗದ ತಿಂಗಳ ಖರ್ಚೆಷ್ಟು?
ಭಾರತದ ಮೇಲ್ಮಧ್ಯಮ ವರ್ಗವು ಈಗ ಸುಲಭವಾಗಿ ಹೊರಬರಲು ಸಾಧ್ಯವಾಗದ ಒಂದು ಬಲೆಗೆ ಸಿಲುಕಿದೆ ಎಂದು ಪ್ರಸಿದ್ಧ ಹಣಕಾಸು ಸಲಹೆಗಾರ್ತಿ ಚಂದ್ರಲೇಖಾ ಎಂಆರ್ ನಂಬುತ್ತಾರೆ. ಈ ಬಗ್ಗೆ ಅವರು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಅವರು ಗುರುಗ್ರಾಮ್‌ನ ಸ್ಟಾರ್ಟ್‌ಅಪ್ ಸಂಸ್ಥಾಪಕರ ಉದಾಹರಣೆಯನ್ನು ನೀಡಿದ್ದಾರೆ. ಆ ವ್ಯಕ್ತಿಯ ಬಜೆಟ್ ಎಷ್ಟು ಎಂದು ಸಹ ರಿವೀಲ್ ಮಾಡಿದ್ದಾರೆ. ವ್ಯಕ್ತಿಯು ಮನೆ ಮತ್ತು ಕಾರಿನ ಇಎಂಐಗೆ 2.68 ಲಕ್ಷ ರೂ.ಪಾವತಿಸಬೇಕಾಗುತ್ತದೆ. ಮಕ್ಕಳ ಶಾಲಾ ಶುಲ್ಕ 65,000 ರೂ. ಸಿಬ್ಬಂದಿಗೆ 30,000 ರೂ. ಪಾವತಿಸಬೇಕಾಗುತ್ತದೆ. ರಜಾದಿನಗಳಿಗೆ ಅವರು 30,000 ರೂ., ಇದರ ಜೊತೆಗೆ ಬಟ್ಟೆ, ಉಡುಗೊರೆಗಳು ಮತ್ತು ಮನೆ ನಿರ್ವಹಣೆಗೂ ಖರ್ಚು ಇರುತ್ತದೆ. ಈ ರೀತಿಯಾಗಿ, ಅವರ ಒಟ್ಟು ಖರ್ಚು ತಿಂಗಳಿಗೆ 5 ಲಕ್ಷ ರೂ. ಆಗುತ್ತದೆ. ತೆರಿಗೆ ಪಾವತಿಸಿದ ನಂತರ ಇಷ್ಟು ಹಣವನ್ನು ಉಳಿಸಲು, ಅವರು ಪ್ರತಿ ತಿಂಗಳು 7.5 ಲಕ್ಷ ರೂ. ಅಂದರೆ, ವರ್ಷಕ್ಕೆ 90 ಲಕ್ಷ ರೂ. ಗಳಿಸಬೇಕಾಗುತ್ತದೆ. ಈ ಖರ್ಚು ನಿರ್ವಹಣೆಯಲ್ಲಿ, ವ್ಯಕ್ತಿಯು ಸ್ವತಃ ಸಿಕ್ಕಿಹಾಕಿಕೊಳ್ಳುತ್ತಾನೆ. ಅವನ ಬಲೆಯನ್ನು ಅವನೇ ಸೃಷ್ಟಿಸಿಕೊಂಡಿದ್ದಾನೆ.

ಇಷ್ಟೆಲ್ಲಾ ಖರ್ಚು ತುಂಬಾ ಅಗತ್ಯ ಅಂತಲ್ಲ. ಸಂಸ್ಥಾಪಕರು ತಮ್ಮದೇ ಆದ ಬಲೆಯನ್ನು ಮಾಡಿಕೊಂಡಿದ್ದಾರೆ ಮತ್ತು ಈಗ ಅವರು ಅದರಲ್ಲಿ ಉಸಿರಾಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ಚಂದ್ರಲೇಖಾ ಬರೆದಿದ್ದಾರೆ. ಹಾಗೆಯೇ ‘ಜನರು ಇದು ಐಷಾರಾಮಿ ಎಂದು ಹೇಳುತ್ತಾರೆ. ಇದು ನಿಜ. ಆದರೆ ಇದು ಐಷಾರಾಮಿಯಂತೆ ಕಾಣುವುದು ಕೂಡ ಕಳವಳಕಾರಿ ವಿಷಯವಾಗಿದೆ.’ ಎಂದು ತಿಳಿಸಿದ್ದಾರೆ.

ಬಿಕ್ಕಟ್ಟನ್ನು ಹೆಚ್ಚಿಸುತ್ತಿರುವ ಹಣದುಬ್ಬರ, ತೆರಿಗೆ ಒತ್ತಡ
ಹೆಚ್ಚಿನ ಸಂಬಳ ಇದ್ದರೂ ಆರ್ಥಿಕ ಸಮಸ್ಯೆಗಳಿಗೆ ಪ್ರಮುಖ ಕಾರಣ ಹೆಚ್ಚುತ್ತಿರುವ ಹಣದುಬ್ಬರ ಎಂದು ತಜ್ಞರು ಹೇಳುತ್ತಾರೆ. ಆಸ್ತಿ ಬೆಲೆ ಪ್ರತಿ ವರ್ಷ ಸರಾಸರಿ 6-8% ರಷ್ಟು ಏರುತ್ತಿವೆ. ಇದು ಸಾಮಾನ್ಯ ಹಣದುಬ್ಬರಕ್ಕಿಂತ ಹೆಚ್ಚಾಗಿದೆ. ಇದಲ್ಲದೆ, ಹೆಚ್ಚಿನ ಆದಾಯ ಪಡೆಯುತ್ತಿರುವ ಗುಂಪು ಸುಮಾರು 39% ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಈ ಸಮಯದಲ್ಲಿ, ದೊಡ್ಡ ನಗರಗಳಲ್ಲಿ ಸರಾಸರಿ ವೇತನವು ತಿಂಗಳಿಗೆ ಕೇವಲ 35,000 ರೂ.ಗಳಷ್ಟಿದ್ದು, ಇದು ವೆಚ್ಚಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ. ಈ ಅಸಮತೋಲನವು ಮೇಲ್ಮಧ್ಯಮ ವರ್ಗವನ್ನು ಆರ್ಥಿಕ ಬಲೆಗೆ ತಳ್ಳಿದೆ, ಇಲ್ಲಿ ಐಷಾರಾಮಿ ಆಕಾಂಕ್ಷೆ ಮತ್ತು ನಿಜವಾದ ಖರ್ಚನ್ನು ಬ್ಯಾಲೆನ್ಸ್ ಮಾಡುವುದು ಕಷ್ಟಕರವಾಗುತ್ತಿದೆ.

ಐಷಾರಾಮಿ ಜೀವನದ ಹಿಂದಿನ ವಾಸ್ತವತೆ
ಹೆಚ್ಚಿನ ಜನರು ಇದೆಲ್ಲವೂ ಐಷಾರಾಮಿ ಎಂದು ಭಾವಿಸುತ್ತಾರೆ. ವಾಸ್ತವದಲ್ಲಿ ಅದು ಹಾಗೆಯೇ. ಆದರೆ ಈ ಐಷಾರಾಮಿ ವೆಚ್ಚವನ್ನು ಭರಿಸುವುದು ದೊಡ್ಡ ಜವಬ್ದಾರಿಯಾಗಿದೆ ಎಂದು ಚಂದ್ರಲೇಖಾ ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ, 3 ಕೋಟಿ ರೂ.ಗೆ ಮನೆ ಖರೀದಿಸುವುದು ದೊಡ್ಡ ವಿಷಯವಲ್ಲ. ದುಡಿಯುವವರು ಕುಟುಂಬಕ್ಕೆ, ಸೇವಕಿ, ದಾದಿ, ಅಡುಗೆಯವರು, ಚಾಲಕರಂತಹ ಸೌಲಭ್ಯಗಳಿಗೆ ಹೊಂದಿಸಬೇಕಾಗುತ್ತದೆ. ಇದು ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತದೆ.



Source link

Leave a Reply

Your email address will not be published. Required fields are marked *