
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಧರ್ಮಸ್ಥಳ ಕ್ಷೇತ್ರಕ್ಕೆ ಹೊಸ ಮಾದರಿಯ BE6 ಕಾರನ್ನು ಉಡುಗೊರೆಯಾಗಿ ನೀಡಿದೆ. ವೀರೇಂದ್ರ ಹೆಗ್ಗಡೆ ಅವರಿಗೆ ಕಾರಿನ ಕೀಲಿಯನ್ನು ಹಸ್ತಾಂತರಿಸಲಾಯಿತು. ಈ ಕಾರನ್ನು ಗ್ರಾಮಾಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು.<img><p>ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಕ್ಷೇತ್ರಕ್ಕೆ ತನ್ನ ಹೊಸ ಮಾದರಿಯ BE6 ಕಾರ್ನ್ನು (Mahindra BE 6E) ಮಹೀಂದ್ರ ಆಂಡ್ ಮಹೀಂದ್ರ ಕಂಪನಿ (Mahindra and Mahindra Ltd ) ಉಡುಗೊರೆಯಾಗಿ ನೀಡಿದೆ.</p><img><p>ಖಾನೋಲ್ಕರ್ ಭಾನುವಾರ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸಂಸದರೂ ಆಗಿರುವ ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ನ್ಯೂ BE6 ಕೀ ನೀಡುವ ಮೂಲಕ ಕಾರ್ನ್ನು ವೀರೇಂದ್ರ ಹೆಗ್ಗಡೆ ಅವರಿಗೆ ಹಸ್ತಾಂತರಿಸಿದ್ದಾರೆ.</p><img><p>ಕಾರ್ ಹಸ್ತಾಂತರಿಸಿದ ಬಳಿಕ ವಿನಯ್ ಖಾನೋಲ್ಕರ್ (Vinay Khanolka) ಮಾತನಾಡಿದರು. ಮಹೀಂದ್ರ ಆಂಡ್ ಮಹೀಂದ್ರ ಕಂಪನಿ ತಯಾರದ ಹೊಸ ಮಾದರಿಯ ಕಾರ್ ಧರ್ಮಸ್ಥಳಕ್ಕೆ ನೀಡುವುದು ಸಂಪ್ರದಾಯ. ಇದರಿಂದ ಕಂಪನಿ ಪ್ರಗತಿ ಸಾಧಿಸಿದೆ. ಈಗಲೂ ಈ ಸಂಪ್ರದಾಯ ಮುಂದುವರಿಸಿಕೊಂಡು ಹೋಗಲಾಗ್ತಿದೆ ಎಂದು ಹೇಳಿದರು.</p><img><p>ಈ ವೇಳೆ ಮಾತನಾಡಿದ ಖಾವಂದರು, ಧರ್ಮಸ್ಥಳ ಕ್ಷೇತ್ರಕ್ಕೆ ಮಹೀಂದ್ರ ಆಂಡ್ ಮಹೀಂದ್ರ ಕಂಪನಿ ಅರ್ಪಿಸುತ್ತಿರುವ ಮೂರನೇ ಕಾರ್ ಇದಾಗಿದೆ. ಕಂಪನಿ ನೀಡಿರುವ ಕಾರ್ನ್ನು ಗ್ರಾಮಾಭಿವೃದ್ದಿ ಯೋಜನೆ ಕಾರ್ಯಗಳಿಗೆ ಬಳಸಲಾಗುವುದು ಎಂದು ಹೇಳಿದರು.</p><img><p>ನಂತರ ವಿನಯ್ ಖೋಲ್ಕರ್ ಅವರ ಕೀ ಹಸ್ತಾಂತರಿಸಿದ ಬಳಿಕ ವೀರೆಂದ್ರ ಹೆಗ್ಗಡೆ ಅವರೇ ಕಾರ್ ಚಾಲನೆ ಮಾಡುವ ಮೂಲಕ ಶುಭ ಹಾರೈಸಿದರು. Mahindra BE 6E ಕಾರ್ ಬೆಲೆ 18 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ.</p>
Source link
ಧರ್ಮಸ್ಥಳಕ್ಕೆ ಹೊಸ ಮಾದರಿಯ BE6 ಕಾರ್ ಉಡುಗೊರೆಯಾಗಿ ನೀಡಿದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿ