ಮುಸ್ಲಿಂ ಯುವಕನ ಜಂಗಮ ದೀಕ್ಷೆ ವಿವಾದ, ಮಠ ತ್ಯಜಿಸಿ ಮರಳಿ ಊರು ಸೇರಿದ ಯುವಕ! | Muslim Youth Takes Lingayat Seer Deeksha Faces Backlash In Chamarajanagar Gow

ಮುಸ್ಲಿಂ ಯುವಕನ ಜಂಗಮ ದೀಕ್ಷೆ ವಿವಾದ, ಮಠ ತ್ಯಜಿಸಿ ಮರಳಿ ಊರು ಸೇರಿದ ಯುವಕ! | Muslim Youth Takes Lingayat Seer Deeksha Faces Backlash In Chamarajanagar Gow



ಮುಸ್ಲಿಂ ಯುವಕನ ಜಂಗಮ ದೀಕ್ಷೆ ವಿವಾದ, ಮಠ ತ್ಯಜಿಸಿ ಮರಳಿ ಊರು ಸೇರಿದ ಯುವಕ! | Muslim Youth Takes Lingayat Seer Deeksha Faces Backlash In Chamarajanagar Gow

ಯಾದಗಿರಿಯ ಮುಸ್ಲಿಂ ಯುವಕ ಮಹಮದ್ ನಿಸಾರ್ ಜಂಗಮ ದೀಕ್ಷೆ ಪಡೆದು ನಿಜಲಿಂಗಸ್ವಾಮೀಜಿಯಾಗಿ ಚೌಡಹಳ್ಳಿ ಗ್ರಾಮದ ಮಠದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಅವರ ಮೂಲ ಧರ್ಮ ಬಯಲಾದ ನಂತರ ಗ್ರಾಮಸ್ಥರ ಆಕ್ಷೇಪ ವ್ಯಕ್ತವಾಯಿತು. ಈ ವಿವಾದದ ಪರಿಣಾಮವಾಗಿ ನಿಜಲಿಂಗಸ್ವಾಮೀಜಿ ಮಠ ತ್ಯಜಿಸಿ ಊರಿಗೆ ಹಿಂತಿರುಗಿದರು.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ವಿಶೇಷ ಘಟನೆ ನಡೆದಿದೆ. ಮೂಲತಃ ಯಾದಗಿರಿ ಜಿಲ್ಲೆ ಶಹಪುರ ತಾಲ್ಲೂಕಿನ ನಿವಾಸಿಯಾಗಿರುವ ಮಹಮದ್ ನಿಸಾರ್ ಎಂಬ ಯುವಕ ಬಸವ ತತ್ವಗಳಿಂದ ಪ್ರಭಾವಿತರಾಗಿ ಜಂಗಮ ದೀಕ್ಷೆ ಪಡೆದಿದ್ದರು. ಬಸವಕಲ್ಯಾಣದ ಬಸವಪ್ರಭುಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಮಹಮದ್ ನಿಸಾರ್ ಅವರಿಗೆ ‘ನಿಜಲಿಂಗಸ್ವಾಮೀಜಿ’ ಎಂದು ಮರು ನಾಮಕರಣ ಮಾಡಲಾಗಿತ್ತು.

ಇದಾದ ನಂತರ ವಿದೇಶದಲ್ಲಿರುವ ಚೌಡಹಳ್ಳಿ ಗ್ರಾಮದ ಮೂಲದವನಾದ ಮಹದೇವಪ್ರಸಾದ್ ಎಂಬುವವರು ತನ್ನ ಊರಿನಲ್ಲಿ ಗುರುಮಲ್ಲೇಶ್ವರ ವಿರಕ್ತ ಮಠವನ್ನು ನಿರ್ಮಿಸಿದ್ದರು. ಮಠಕ್ಕೆ ಪ್ರಧಾನ ಮಠಾಧೀಶರಾಗಿ ನಿಜಲಿಂಗಸ್ವಾಮೀಜಿಯನ್ನು ಕರೆತಂದಿದ್ದರು. ಕಳೆದ ಒಂದೂವರೆ ತಿಂಗಳಿಂದ ನಿಜಲಿಂಗಸ್ವಾಮೀಜಿ ಮಠದಲ್ಲಿ ಪೂಜಾ ಕರ್ಮಗಳನ್ನು ನಿಭಾಯಿಸುತ್ತಿದ್ದರು. ಬಸವ ತತ್ವದ ಪ್ರಚಾರಕರಾಗಿ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಇತ್ತೀಚೆಗೆ ಗ್ರಾಮದಲ್ಲಿ ಕೆಲವರು ನಿಜಲಿಂಗಸ್ವಾಮೀಜಿಯ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ಪಡೆದು ಅವರ ಮೂಲ ಧರ್ಮವು ಇಸ್ಲಾಂ ಎಂಬುದನ್ನು ಖಚಿತಪಡಿಸಿಕೊಂಡರು. ಇದರಿಂದ ಗ್ರಾಮದಲ್ಲಿ ಭಾರೀ ಆಕ್ಷೇಪಗಳು ವ್ಯಕ್ತವಾಯಿತು. ನಿಜಲಿಂಗಸ್ವಾಮೀಜಿಯ ಪರವಾಗಿ ಹಾಗೂ ವಿರುದ್ಧವಾಗಿ ಅಭಿಪ್ರಾಯ ಹುಟ್ಟಿಕೊಂಡವು.

ಗ್ರಾಮದ ಕೆಲವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು, ಮುಸ್ಲಿಂ ಸಮುದಾಯದವರನ್ನು ಮಠಾಧೀಶರನ್ನಾಗಿ ಮಾಡಲು ವಿರೋಧ ವ್ಯಕ್ತಪಡಿಸಿದರು. ಈ ಕುರಿತು ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ ನಿಜಲಿಂಗಸ್ವಾಮೀಜಿ ತಾವು ಇಚ್ಛಿಸುತ್ತಿಲ್ಲದಿದ್ದರೆ ಮಠದ ಪೀಠವನ್ನು ತ್ಯಜಿಸಲು ಸಿದ್ಧ ಎಂದು ತಿಳಿಸಿದರು. ಕೊನೆಗೆ, ಅವರು ತಮ್ಮ ಊರಾದ ಯಾದಗಿರಿಗೆ ಹಿಂತಿರುಗಿದರು. ಮೂಲತಃ ಯಾದಗಿರಿ ಜಿಲ್ಲೆ ಶಹಪುರದ ನಿವಾಸಿ ಮಹಮದ್ ನಿಸಾರ್. ಈ ಘಟನೆ ಇದೀಗ ಗ್ರಾಮದಲ್ಲಿ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಧರ್ಮ, ತತ್ವ ಮತ್ತು ಗುರುಪೀಠದ ಮೇಲಿನ ಜನಮತವನ್ನು ಮತ್ತೊಮ್ಮೆ ಚಿಂತನೆಗೆ ಒತ್ತಿಸಿದೆ.



Source link

Leave a Reply

Your email address will not be published. Required fields are marked *