
<p>ಮುಂಬೈ: ಇಂಗ್ಲೆಂಡ್ ವಿರುದ್ಧದ ಓವಲ್ ಟೆಸ್ಟ್ನಲ್ಲಿ ಆರು ರನ್ಗಳ ರೋಚಕ ಜಯದೊಂದಿಗೆ ಭಾರತ ಟೆಸ್ಟ್ ಸರಣಿಯನ್ನು ಸಮಬಲಗೊಳಿಸಿದ ನಂತರ, ಐಸಿಸಿ ಅಧ್ಯಕ್ಷ ಜಯ್ ಶಾ ಭಾರತ ತಂಡವನ್ನು ಅಭಿನಂದಿಸಿದ್ದಾರೆ. ಓವಲ್ ಟೆಸ್ಟ್ನಲ್ಲಿ ಅದ್ಭುತ ಬೌಲಿಂಗ್ನೊಂದಿಗೆ ಒಂಬತ್ತು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಮತ್ತು ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಈ ಬಾರಿ ಜಯ್ ಶಾ ಶ್ಲಾಘಿಸುವುದನ್ನು ಮರೆತಿಲ್ಲ ಎಂಬುದು ಗಮನಾರ್ಹ. ಎಜ್ಬಾಸ್ಟನ್ ಟೆಸ್ಟ್ನಲ್ಲಿ ಭಾರತ ಇಂಗ್ಲೆಂಡ್ ಅನ್ನು ಸೋಲಿಸಿದಾಗ ಏಳು ವಿಕೆಟ್ ಕಬಳಿಸಿ ಮಿಂಚಿದ್ದ ಸಿರಾಜ್ರನ್ನು ಶ್ಲಾಘಿಸದಿದ್ದಕ್ಕಾಗಿ ಜಯ್ ಶಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.</p><p>ಭಾರತದ ನಾಯಕ ಶುಭಮನ್ ಗಿಲ್, ಕೆ ಎಲ್ ರಾಹುಲ್, ರವೀಂದ್ರ ಜಡೇಜಾ ಅವರನ್ನು ಹೆಸರಿಸಿ ಶ್ಲಾಘಿಸಿದ ಜಯ್ ಶಾ, ಇಂಗ್ಲೆಂಡ್ ಆಟಗಾರರಾದ ಜೋ ರೂಟ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಅವರನ್ನು ಎಕ್ಸ್ ಪೋಸ್ಟ್ನಲ್ಲಿ ಶ್ಲಾಘಿಸಿದರು.</p><p>What the world witnessed today was pure Test cricket magic. The Oval delivered one of the most gripping contests in the history of the sport. Salute to both @BCCI (India) and @englandcricket for this masterpiece. pic.twitter.com/1VgkJY83Ee</p><p>— Jay Shah (@JayShah) August 4, 2025</p><p> </p><p>Hats off to @mdsirajofficial for putting his body on the line every time, he has risen to the occasion and seems immune to pain and fatigue. Congratulations to the young @ybj_19 for shining bright with twin centuries on his maiden away England Test tour.</p><p>— Jay Shah (@JayShah) August 4, 2025</p><p> </p><p>ಸರಣಿಯಲ್ಲಿ ದಾಖಲೆಯ ರನ್ ಗಳಿಸಿದ ಶುಭಮನ್ ಗಿಲ್, ಎರಡು ಶತಕಗಳೊಂದಿಗೆ ತಲೆಮಾರುಗಳಿಗೆ ಸ್ಫೂರ್ತಿ ನೀಡುವ ಪ್ರದರ್ಶನ ನೀಡಿದ ರಾಹುಲ್, ಆಲ್ರೌಂಡ್ ಪ್ರದರ್ಶನದೊಂದಿಗೆ 500ಕ್ಕೂ ಹೆಚ್ಚು ರನ್ ಗಳಿಸಿದ ಜಡೇಜಾ ಮತ್ತು ಮೊದಲ ಮತ್ತು ಕೊನೆಯ ಟೆಸ್ಟ್ಗಳಲ್ಲಿ ಶತಕ ಗಳಿಸಿದ ಯಶಸ್ವಿ ಜೈಸ್ವಾಲ್ ಅವರನ್ನು ಜಯ್ ಶಾ ಎಕ್ಸ್ ಪೋಸ್ಟ್ನಲ್ಲಿ ಹೆಸರಿಸಿ ಶ್ಲಾಘಿಸಿದರು.</p><p>And for England, @root66’s elegance and consistency continue to define the modern Test batter. @benstokes38, yet again, showed why he is one of the most complete leaders of this generation. What a series. A spectacle for the ages.</p><p>— Jay Shah (@JayShah) August 4, 2025</p><p> </p><p>ಇದಲ್ಲದೆ, ಇಂಗ್ಲೆಂಡ್ ವಿರುದ್ಧದ ಮಾಂಚೆಸ್ಟರ್ ಟೆಸ್ಟ್ನಲ್ಲಿ ಕಾಲಿಗೆ ಗಾಯವಾದರೂ ಕ್ರೀಸ್ಗೆ ಇಳಿದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮತ್ತು ಓವಲ್ ಟೆಸ್ಟ್ನಲ್ಲಿ ಗಾಯಗೊಂಡ ಒಂದೇ ಕೈಯಿಂದ ಒಂದು ಕೈಯಲ್ಲಿ ಬ್ಯಾಟ್ ಹಿಡಿದು ಕೊನೆಯ ಬ್ಯಾಟ್ಸ್ಮನ್ ಆಗಿ ಕ್ರೀಸ್ಗೆ ಬಂದ ಇಂಗ್ಲೆಂಡ್ ವೇಗದ ಬೌಲರ್ ಕ್ರಿಸ್ ವೋಕ್ಸ್ ಅವರನ್ನೂ ಜಯ್ ಶಾ ಶ್ಲಾಘಿಸಿದ್ದಾರೆ.</p><p>No praise is enough for @RishabhPant17 and Chris Woakes, the warriors from @BCCI and @englandcricket. They’ve defied the notion of human limitation, redefined grit and courage and laid down a marker for future generations of cricketers. This is the legacy Test cricket deserves. pic.twitter.com/pPJu7AYDlf</p><p>— Jay Shah (@JayShah) August 4, 2025</p><p> </p><p>ಸೋಮವಾರ ಓವಲ್ ಟೆಸ್ಟ್ನ ಗೆಲುವಿನ ನಂತರ ಡಿಎಸ್ಪಿ ಆಗಿರುವ ಮೊಹಮ್ಮದ್ ಸಿರಾಜ್ರನ್ನು ತೆಲಂಗಾಣ ಪೊಲೀಸರು ಟ್ವೀಟ್ ಮಾಡಿ ಅಭಿನಂದಿಸಿದ್ದರು. ತೆಲಂಗಾಣ ಪೊಲೀಸರ ಟ್ವೀಟ್ಗೆ ಅನೇಕ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಡಿಎಸ್ಪಿ ಸಿರಾಜ್ರನ್ನು ಎಸ್ಪಿ ಆಗಿ ಬಡ್ತಿ ನೀಡಬೇಕೆಂದು ಹೆಚ್ಚಿನವರು ಒತ್ತಾಯಿಸಿದ್ದಾರೆ. ಕ್ರೀಡಾ ಕೋಟಾದಲ್ಲಿ ತೆಲಂಗಾಣ ಪೊಲೀಸರು ಸಿರಾಜ್ರನ್ನು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ನೇಮಿಸಿದ್ದಾರೆ. ಇದರ ನಂತರ ಅಭಿಮಾನಿಗಳು ಸಿರಾಜ್ರನ್ನು ಡಿಎಸ್ಪಿ ಸಿರಾಜ್ ಎಂದು ಕರೆಯುತ್ತಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 23 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಹೈದರಬಾದ್ ಮೂಲದ ವೇಗಿ ಮೊದಲ ಸ್ಥಾನ ಪಡೆದರು. ಇದಷ್ಟೇ ಅಲ್ಲದೇ ಓವಲ್ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಸಿರಾಜ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.</p><p>ಓವಲ್ ಟೆಸ್ಟ್ ಪಂದ್ಯದ ಕೊನೆಯ ದಿನಕ್ಕೂ ಮೊದಲು ಎರಡು ವಿಕೆಟ್ ಕಬಳಿಸಿದ್ದ ವೇಗಿ ಮೊಹಮ್ಮದ್ ಸಿರಾಜ್, ಕೊನೆಯ ದಿನ ಇಂಗ್ಲೆಂಡ್ ಬ್ಯಾಟರ್ಗಳನ್ನು ಕಾಡುವಲ್ಲಿ ಯಶಸ್ವಿಯಾಗಿದ್ದರು. 5ನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್ಗೆ ಕೊನೆಯ ದಿನ ಕೇವಲ 35 ರನ್ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಕಾಡದಂತೆ ನೋಡಿಕೊಂಡ ಬುಮ್ರಾ, ಕೊನೆಯ ದಿನ ಇಂಗ್ಲೆಂಡ್ನ ಮೂರು ವಿಕೆಟ್ ಕಬಳಿಸುವ ಮೂಲಕ ಭಾರತ ತಂಡವು 6 ರನ್ ಅಂತರದ ರೋಚಕ ಗೆಲುವು ಸಾಧಿಸುವಲ್ಲಿ ಪ್ರಮುಖ ವಹಿಸಿದರು. </p><p> </p>
Source link
ಓವಲ್ನಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ; ಕೊನೆಗೂ ಸಿರಾಜ್ಗೆ ಅಭಿನಂದನೆ ಸಲ್ಲಿಸಲು ಮರೆಯದ ಜಯ್ ಶಾ!