ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ! | Karnataka Itbt Minister Priyank Kharge Controversial Statement Against Bjp

ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ! | Karnataka Itbt Minister Priyank Kharge Controversial Statement Against Bjp



ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ! | Karnataka Itbt Minister Priyank Kharge Controversial Statement Against Bjp

ಬಿಜೆಪಿ ಸರ್ಕಾರವನ್ನು ‘ನೇಮ್ ಚೇಂಜಿಂಗ್ ಸರ್ಕಾರ’ ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ, ಕಲಬುರಗಿ ಗುತ್ತಿಗೆದಾರ ಸಾವು, ಮೆಟ್ರೋ ಯೋಜನೆಗಳ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು (ಆ.7): ನೇಮ್ ಚೇಂಜಿಂಗ್ ಸರ್ಕಾರ ಇದು, ಗೇಮ್ ಚೇಂಜಿಂಗ್ ಏನೂ ಇಲ್ಲ. ಯಾರ ಮನೆಯಲ್ಲಿ ಗಂಡು ಮಕ್ಕಳು ಹುಟ್ಟಿದರೂ ಬಿಜೆಪಿಯವರು ಅದರ ಕ್ರೆಡಿಟ್ ಪಡೆಯಲು ಮುಂದಾಗುತ್ತಾರೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದರು.

ಕಲಬುರಗಿಯಲ್ಲಿ ಗುತ್ತಿಗೆದಾರರೊಬ್ಬರ ಸಾವಿನ ಘಟನೆಯ ಕುರಿತು ಮಾತನಾಡಿದ ಖರ್ಗೆ,  ಆ ಪ್ರಕರಣದಲ್ಲಿ ನನ್ನ ಹೆಸರು ಇರದಿದ್ದರೂ ನನ್ನನ್ನು ಅಪರಾಧಿಯಂತೆ ಬಿಜೆಪಿಯವರು ಆರೋಪಿಸಿದರು.  ಆರ್. ಅಶೋಕ್, ಚಲವಾದಿ ನಾರಾಯಣ ಸ್ವಾಮಿ, ಮತ್ತು ವಿಜಯೇಂದ್ರ ಅವರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು, ಜಿಲ್ಲೆಯನ್ನು ‘ರಿಪಬ್ಲಿಕ್ ಆಫ್ ಕಲಬುರಗಿ’ ಎಂದು ಟೀಕಿಸಿದ್ದರು. ಅವರು ಅಧಿಕಾರದಲ್ಲಿದ್ದಾಗ ಕಲಬುರಗಿಯ ರೈತರಿಗಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಆದರೆ ವಿಪಕ್ಷದಲ್ಲಿದ್ದಾಗ ಬಂದು ಟೀಕೆ ಮಾಡಿದರು. ಬಾಬು ಕುಟುಂಬಕ್ಕೆ ಸಂತಾಪ ಸೂಚಿಸಿರುವ ಖರ್ಗೆ, ಈ ಘಟನೆಯ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ಬೆಂಗಳೂರಿನ ಎಲ್ಲೋ ಲೈನ್ ಮೆಟ್ರೋ ಯೋಜನೆಯ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕೇವಲ 37% ಧನಸಹಾಯ ನೀಡಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನೂ ನಾವೇ ಮಾಡಬೇಕು, ಹಾಗಾದರೆ ಬಿಜೆಪಿಯ ಕೊಡುಗೆ ಏನು? ಎಂದು ಪ್ರಶ್ನಿಸಿದ ಖರ್ಗೆ, ಈ ಯೋಜನೆಯ ಕ್ರೆಡಿಟ್ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕೆಂದು ಬಿಜೆಪಿಯವರು ನೋಡುತ್ತಿದ್ದಾರೆ ಅಲ್ಲದೆ, ಜಲಜೀವನ ಮಿಷನ್‌ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಬಳಕೆಗೆ ಬಿಜೆಪಿಯವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಬಿಟ್ಟಿ ಪ್ರಚಾರಕ್ಕೆ ಬಿಜೆಪಿಯವರನ್ನು ನೋಡಿ ಕಲಿಯಬೇಕು ಎಂದು ವ್ಯಂಗ್ಯವಾಡಿದರು.



Source link

Leave a Reply

Your email address will not be published. Required fields are marked *