ಆಟೋ ಮೇಲಿನ ಸಾಲು ಚಿತ್ರದ ಕತೆಗೆ ಪ್ರೇರಣೆಯಾಯಿತು: ರಾಜವರ್ಧನ್‌

ಆಟೋ ಮೇಲಿನ ಸಾಲು ಚಿತ್ರದ ಕತೆಗೆ ಪ್ರೇರಣೆಯಾಯಿತು: ರಾಜವರ್ಧನ್‌



ಆಟೋ ಮೇಲಿನ ಸಾಲು ಚಿತ್ರದ ಕತೆಗೆ ಪ್ರೇರಣೆಯಾಯಿತು: ರಾಜವರ್ಧನ್‌
<p>ನಾನು ಆಟೋ ಮೇಲೆ ನೋಡಿದ ಒಂದು ಸಾಲು ಈ ಚಿತ್ರಕ್ಕೆ ಪ್ರೇರಣೆ ಆಗಿದೆ. ನಿರ್ಮಾಣ ಹಾಗೂ ಕ್ರಿಯೇಟಿವ್‌ ಹೆಡ್‌ ಆಗಿ ನನಗೆ ಇದು ಹೊಸ ಅನುಭವ ಎಂದರು ರಾಜವರ್ಧನ್‌.</p><img><p>ಸಚಿನ್ ಚಲುವರಾಯ ಸ್ವಾಮಿ, ಸಂಗೀತ ಭಟ್‌ ಜೋಡಿಯಾಗಿ ನಟಿಸಿರುವ ‘ಕಮಲ್‌ ಶ್ರೀದೇವಿ’ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಮರ್ಡರ್ ಮಿಸ್ಟ್ರಿ ಕತೆ ಇದಾಗಿದ್ದು, ವಿಎ ಸುನೀಲ್‌ ನಿರ್ದೇಶನ ಮಾಡಿದ್ದಾರೆ.</p><img><p>ರಾಜವರ್ಧನ್‌ ಸಹ ನಿರ್ಮಾಣದ ಜತೆಗೆ ಕ್ರಿಯೇಟಿವ್‌ ಹೆಡ್‌ ಆಗಿದ್ದಾರೆ. ಸೆ.19ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಸಚಿನ್ ಚಲುವರಾಯ ಸ್ವಾಮಿ, ‘ಹಾಡಿನ ಹಿನ್ನೆಲೆಯಲ್ಲಿ ಟೀಸರ್‌ ಮಾಡಿದ್ದೇವೆ.</p><img><p>ಹೊಸ ರೀತಿಯ ಪ್ರಯತ್ನದಿಂದ ಮೂಡಿ ಬರುತ್ತಿರುವ ಸಿನಿಮಾ. ಈ ಚಿತ್ರ ಒಳಗೊಂಡಿರುವ ಕತೆ ಪ್ರಸ್ತುತ ಘಟನೆಗಳನ್ನು ನೆನಪಿಸುತ್ತದೆ. ತುಂಬಾ ರಿಯಲಿಸ್ಟಿಕ್‌ ಆಗಿ ಮೂಡಿ ಬಂದಿದೆ. ನಾನು ಈ ಚಿತ್ರದಲ್ಲಿ ಫಿಲಂ ಡೈರೆಕ್ಟರ್ ಪಾತ್ರ ಮಾಡಿದ್ದೇನೆ’ ಎಂದರು.</p><img><p>ರಾಜವರ್ಧನ್‌, ‘ನಾನು ಆಟೋ ಮೇಲೆ ನೋಡಿದ ಒಂದು ಸಾಲು ಈ ಚಿತ್ರಕ್ಕೆ ಪ್ರೇರಣೆ ಆಗಿದೆ. ನಿರ್ಮಾಣ ಹಾಗೂ ಕ್ರಿಯೇಟಿವ್‌ ಹೆಡ್‌ ಆಗಿ ನನಗೆ ಇದು ಹೊಸ ಅನುಭವ’ ಎಂದರು. ನಿರ್ದೇಶಕ ಸುನೀಲ್‌, ದುನಿಯಾ ಕಿಶೋರ್‌, ನಾಯಕಿ ಸಂಗೀತಾ ಭಟ್‌, ಹಿರಿಯ ನಟ ಎಂಎಸ್‌ ಉಮೇಶ್‌ ಹಾಜರಿದ್ದರು.</p><img><p>ಟೀಸರ್ ನೋಡಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದು ನಟ ಸಚಿನ್ ಚೆಲುವರಾಯಸ್ವಾಮಿ ಮತ್ತು ಪ್ರತಿಭಾವಂತ ನಟಿ ಸಂಗೀತಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಲುಕ್ ಮತ್ತು ಸಚಿನ್ ಅವರ ನಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.</p>



Source link

Leave a Reply

Your email address will not be published. Required fields are marked *