
ಒಡಿಶಾದ ಥಿಯೋಗರ್ (ಅಡಾಸಾ-ರಾಂಪಲ್ಲಿ), ಸುಂದರ್ಗಢ, ನಬರಂಗಪುರ, ಕಿಯೋಂಜಾರ್, ಅಂಗುಲ್ ಮತ್ತು ಕೋರಾಪುಟ್ನಲ್ಲಿ ಬಂಗಾರದ ನಿಕ್ಷೇಪಗಳು ಇರುವುದು ಖಚಿತವಾಗಿದೆ. ಮಯೂರ್ಭಂಜ್, ಮಲ್ಕಾನ್ಗಿರಿ, ಸಂಬಲ್ಪುರ ಮತ್ತು ಬೌದ್ನಲ್ಲೂ ಬಂಗಾರ ಇದೆಯಾ ಅಂತ ಸಮೀಕ್ಷೆ ನಡೆಯುತ್ತಿದೆ.
ಭಾರತದಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪದಲ್ಲಿ ಗಣಿಗಾರಿಕೆ ಆರಂಭಗೊಂಡರೆ ಚಿನ್ನದ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಸವಾಗುವ ಸಾಧ್ಯತೆ ಇಲ್ಲ. ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ನಿರ್ಧಾರವಾಗುತ್ತದೆ. ಭಾರತವೇ ಚಿನ್ನವನ್ನು ಹಲವು ದೇಶಗಳಿಗೆ ರಫ್ತು ಮಾಡುವ ಹಾಗೂ ಅಂತಾರಾಷ್ಟ್ರೀಯ ಚಿನ್ನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದರೆ ಚಿನ್ನದ ಬೆಲೆಯಲ್ಲಿ ಕೆಲ ಬದಲಾವಣೆಯಾಗಬಹುದು.