Headlines

BCCI Selection Committee Reaches Consensus on India’s Asia Cup 2025 Squad | ಏಷ್ಯಾಕಪ್‌ಗೆ ಭಾರತ ತಂಡ; 13 ಆಟಗಾರರು ಫೈನಲ್, 2 ಸ್ಥಾನಕ್ಕೆ ಐವರ ನಡುವೆ ಪೈಪೋಟಿ! | India Asia Cup 2025 Squad Selection Final Two Spots Under Debate Kvn

BCCI Selection Committee Reaches Consensus on India’s Asia Cup 2025 Squad | ಏಷ್ಯಾಕಪ್‌ಗೆ ಭಾರತ ತಂಡ; 13 ಆಟಗಾರರು ಫೈನಲ್, 2 ಸ್ಥಾನಕ್ಕೆ ಐವರ ನಡುವೆ ಪೈಪೋಟಿ! | India Asia Cup 2025 Squad Selection Final Two Spots Under Debate Kvn



BCCI Selection Committee Reaches Consensus on India’s Asia Cup 2025 Squad | ಏಷ್ಯಾಕಪ್‌ಗೆ ಭಾರತ ತಂಡ; 13 ಆಟಗಾರರು ಫೈನಲ್, 2 ಸ್ಥಾನಕ್ಕೆ ಐವರ ನಡುವೆ ಪೈಪೋಟಿ! | India Asia Cup 2025 Squad Selection Final Two Spots Under Debate Kvn

ಏಷ್ಯಾಕಪ್‌ಗೆ ಭಾರತ ತಂಡದ ಆಯ್ಕೆ ಬಹುತೇಕ ಅಂತಿಮ ಹಂತದಲ್ಲಿದೆ. ಗಿಲ್‌ಗೆ ಚಾನ್ಸ್ ಇಲ್ಲ, ಸಂಜು ಮತ್ತು ಅಭಿಷೇಕ್ ಆರಂಭಿಕರಾಗಿ ಮುಂದುವರಿಯಲಿದ್ದಾರೆ. ಬ್ಯಾಕ್‌ಅಪ್ ಆರಂಭಿಕರಾಗಿ ಜೈಸ್ವಾಲ್ ಬರುವುದು ಬಹುತೇಕ ಖಚಿತ.

ಮುಂಬೈ: ಏಷ್ಯಾಕಪ್‌ಗೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ತಂಡದ ಆಯ್ಕೆ ಕುರಿತು ಸೆಲೆಕ್ಷನ್ ಕಮಿಟಿ ಬಹುತೇಕ ಒಮ್ಮತಕ್ಕೆ ಬಂದಿದೆ ಎಂದು ವರದಿಯಾಗಿದೆ. ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಶುಭ್‌ಮನ್ ಗಿಲ್‌ರನ್ನು ಟಿ20 ತಂಡಕ್ಕೆ ಪರಿಗಣಿಸಬಾರದು ಮತ್ತು ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಮುಂದುವರಿಯಲಿ ಎಂಬುದು ಆಯ್ಕೆ ಸಮಿತಿಯ ನಿರ್ಧಾರ ಎಂದು ಸೂಚನೆ ನೀಡಲಾಗಿದೆ. ಬ್ಯಾಕ್‌ಅಪ್ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಕೂಡ ತಂಡಕ್ಕೆ ಬರುವುದು ಬಹುತೇಕ ಖಚಿತ ಎನ್ನಲಾಗಿದೆ

ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಲ್ಲಿ ಮುಂದುವರೆಯಲಿದ್ದಾರೆ. ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಬೌಲರ್‌ಗಳ ವಿಷಯದಲ್ಲೂ ಆಯ್ಕೆ ಸಮಿತಿ ಒಮ್ಮತಕ್ಕೆ ಬಂದಿದೆ ಎಂದು ಸೂಚನೆ ಹೊರಬಿದ್ದಿದೆ. ಜಸ್ಪ್ರೀತ್ ಬುಮ್ರಾ ಏಷ್ಯಾಕಪ್‌ನಲ್ಲಿ ಆಡಲು ಸಿದ್ಧರಿರುವುದರಿಂದ, ಬುಮ್ರಾ ಜೊತೆಗೆ ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಸೇರಿದಂತೆ 13 ಆಟಗಾರರು ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ.

ತಂಡದಲ್ಲಿ ಉಳಿದಿರುವ ಎರಡು ಸ್ಥಾನಗಳಿಗೆ ಐದು ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ಅಕ್ಷರ್ ಪಟೇಲ್ ಜೊತೆಗೆ ವಾಷಿಂಗ್ಟನ್ ಸುಂದರ್‌ರನ್ನೂ ಸ್ಪಿನ್ ಆಲ್‌ರೌಂಡರ್ ಆಗಿ ತಂಡಕ್ಕೆ ಸೇರಿಸಬೇಕೋ ಅಥವಾ ಯುಎಇಯ ಸ್ಪಿನ್ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳನ್ನು ಚೆನ್ನಾಗಿ ಆಡುವ ಶ್ರೇಯಸ್ ಅಯ್ಯರ್‌ರನ್ನು ತಂಡಕ್ಕೆ ಸೇರಿಸಬೇಕೋ ಎಂಬುದು ಆಯ್ಕೆಗಾರರನ್ನು ಕಾಡುತ್ತಿರುವ ಮೊದಲ ಪ್ರಶ್ನೆಯಾಗಿದೆ. ಅಕ್ಷರ್ ಜೊತೆಗೆ ಕುಲ್ದೀಪ್ ಮತ್ತು ವರುಣ್ ಚಕ್ರವರ್ತಿ ಕೂಡ ತಂಡದಲ್ಲಿದ್ದಾರೆ. ಹಾಗಾಗಿ ಶ್ರೇಯಸ್‌ ಅಯ್ಯರ್‌ರನ್ನು ತಂಡಕ್ಕೆ ಸೇರಿಸಬೇಕೆಂಬ ಬೇಡಿಕೆಗೆ ಹೆಚ್ಚಿನ ಬೆಂಬಲವಿದೆ. ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ಮಿಂಚಿದ್ದರು. ಆದರೆ ವಾಷಿಂಗ್ಟನ್ ಸುಂದರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಬಾರಿಸಿದ್ದಲ್ಲದೆ, ಬೌಲಿಂಗ್‌ನಲ್ಲೂ ಮಿಂಚಿದ್ದರು. ಇವರಿಬ್ಬರಲ್ಲಿ ಒಬ್ಬರು ಏಷ್ಯಾಕಪ್ ತಂಡಕ್ಕೆ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಫಿನಿಷರ್ ಆಟಗಾರನ ವಿಷಯದಲ್ಲಿ ಆಯ್ಕೆಗಾರರನ್ನು ಕಾಡುತ್ತಿರುವ ಮತ್ತೊಂದು ಪ್ರಮುಖ ನಿರ್ಧಾರ. ಹಾರ್ದಿಕ್ ಪಾಂಡ್ಯ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರೆ, ಫಿನಿಷರ್ ಆಗಿ ಯಾರನ್ನು ಆಡಿಸಬೇಕು ಎಂಬುದು ಪ್ರಶ್ನೆ. ರಿಂಕು ಸಿಂಗ್, ಶಿವಂ ದುಬೆ, ರಿಯಾನ್ ಪರಾಗ್ ಹೆಸರುಗಳು ಆಯ್ಕೆ ಸಮಿತಿಯ ಮುಂದಿವೆ. ಇವರಲ್ಲಿ ರಿಯಾನ್ ಪರಾಗ್ ಅರೆಕಾಲಿಕ ಸ್ಪಿನ್ನರ್ ಎಂಬುದು ಮತ್ತು ಯುಎಇಯ ಸ್ಪಿನ್ ಪಿಚ್‌ನಲ್ಲಿ ಬಳಸಬಹುದು ಎನ್ನುವುದು ಆಯ್ಕೆ ಸಮಿತಿ ಲೆಕ್ಕಾಚಾರವಾಗಿದೆ. ಆದರೆ ಐಪಿಎಲ್‌ನಲ್ಲಿ ರಿಯಾನ್ ಪರಾಗ್ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಶಿವಂ ದುಬೆ ಕಳೆದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು. ಸ್ಪಿನ್ನರ್‌ಗಳ ವಿರುದ್ಧ ಚೆನ್ನಾಗಿ ಆಡಬಲ್ಲರಾದರೂ, ದುಬೆ ಮಧ್ಯಮ ವೇಗದ ಬೌಲರ್. ಮತ್ತೊಂದು ಆಯ್ಕೆ ರಿಂಕು ಸಿಂಗ್. ಐಪಿಎಲ್‌ನಲ್ಲಿ ಹೆಚ್ಚು ಮಿಂಚಲು ಸಾಧ್ಯವಾಗದ ರಿಂಕು ಸಿಂಗ್ ಈಗ ಯುಪಿ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಅರೆಕಾಲಿಕ ಸ್ಪಿನ್ನರ್ ಆಗಿರುವ ರಿಂಕು ಈಗ ಯುಪಿ ಟಿ20 ಲೀಗ್‌ನಲ್ಲಿ ನಿಯಮಿತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ತಂಡದಲ್ಲಿ ಉಳಿದಿರುವ ಎರಡು ಸ್ಥಾನಗಳ ಕುರಿತು ಗಂಭೀರ್ ಅವರ ನಿರ್ಧಾರ ನಿರ್ಣಾಯಕವಾಗಲಿದೆ ಎಂದು ಭಾವಿಸಲಾಗಿದೆ.

ಇನ್ನೇನು ಕೆಲವೇ ಹೊತ್ತಿನಲ್ಲಿ ಏಷ್ಯಾಕಪ್‌ನ ಭಾರತೀಯ ತಂಡವನ್ನು ಆಯ್ಕೆಗಾರರು ಪ್ರಕಟಿಸಲಿದ್ದಾರೆ. ಆಯ್ಕೆ ಸಮಿತಿ ಸಭೆಯ ನಂತರ, ಸಾಮಾನ್ಯ ಪತ್ರಿಕಾಗೋಷ್ಠಿಯ ಬದಲು, ಪತ್ರಿಕಾ ಪ್ರಕಟಣೆಯ ಮೂಲಕ ತಂಡವನ್ನು ಪ್ರಕಟಿಸಲಾಗುವುದು ಎಂದು ವರದಿಯಾಗಿದೆ.

 



Source link

Leave a Reply

Your email address will not be published. Required fields are marked *