ಸದನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಡಿ.ಕೆ.ಶಿವಕುಮಾರ್; ಏನಿದು 4 ಸಾಲಿನ ಬಂಡೆ ತಂತ್ರ? | Dk Shivakumar Rss Song Mention In Assembly Karnataka Soft Hindutva Politics Sat

ಸದನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ ಡಿ.ಕೆ.ಶಿವಕುಮಾರ್; ಏನಿದು 4 ಸಾಲಿನ ಬಂಡೆ ತಂತ್ರ? | Dk Shivakumar Rss Song Mention In Assembly Karnataka Soft Hindutva Politics Sat


ಬೆಂಗಳೂರು (ಆ.23): ರಾಜ್ಯ ರಾಜಕಾರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರ ನಡೆಗಳು ತೀವ್ರ ಕುತೂಹಲ ಮೂಡಿಸಿವೆ. ಅದರಲ್ಲೂ ಸದನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಾರ್ಥನಾ ಗೀತೆಯಾದ ‘ನಮಸ್ತೇ ಸದಾ ವತ್ಸಲೇ…’ ಹಾಡಿನ ನಾಲ್ಕು ಸಾಲುಗಳನ್ನು ಉಲ್ಲೇಖಿಸಿ, ಡಿ.ಕೆ.ಶಿವಕುಮಾರ್ ವಿರೋಧ ಪಕ್ಷಗಳಿಗೆ ಕೌಂಟರ್ ನೀಡಿದ್ದು, ಇದು ಅವರ ಹೊಸ ರಾಜಕೀಯ ತಂತ್ರದ ಭಾಗವೆಂಬ ಚರ್ಚೆಗೆ ಕಾರಣವಾಗಿದೆ. ಇದು ಡಿ.ಕೆ.ಶಿವಕುಮಾರ್ ‘ಸಾಫ್ಟ್ ಹಿಂದುತ್ವ’ದ ಹೊಸ ಅಧ್ಯಾಯದ ಆರಂಭವೇ ಎಂಬ ಪ್ರಶ್ನೆ ಮೂಡಿದೆ.

ಧರ್ಮಸ್ಥಳ ಪ್ರಕರಣದಲ್ಲಿ ಹಿಂದುತ್ವದ ಹೋರಾಟ
ಪ್ರಸ್ತುತ ನಡೆಯುತ್ತಿರುವ ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಿಂದುತ್ವದ ಅಸ್ತ್ರವನ್ನು ಬಳಸುತ್ತಿದೆ. ಈ ಸವಾಲನ್ನು ಎದುರಿಸಲು ಕಾಂಗ್ರೆಸ್‌ನಿಂದ ಸ್ವತಃ ಡಿ.ಕೆ.ಶಿವಕುಮಾರ್ ಅವರೇ ಹಿಂದುತ್ವದ ಅಸ್ತ್ರವನ್ನು ಹಿಡಿದಿದ್ದಾರೆ. ವಿರೋಧ ಪಕ್ಷಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವಾಗ, ಶಿವಕುಮಾರ್ ‘ನಾನು ಹಿಂದೂ, ನಾನು ಕಾಂಗ್ರೆಸ್ಸಿಗ’ ಎಂಬ ಹೇಳಿಕೆಯ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸಾಫ್ಟ್ ಹಿಂದುತ್ವ’ದ ರಣತಂತ್ರ ಮತ್ತು ಗುರಿ

ಡಿ.ಕೆ.ಶಿವಕುಮಾರ್ ಅವರ ‘ಸಾಫ್ಟ್ ಹಿಂದುತ್ವ’ದ ಹಾದಿ ಹೊಸದೇನಲ್ಲ. ಈ ಹಿಂದೆ ಕನಕಪುರದಲ್ಲೂ ಇಂತಹ ಹೆಜ್ಜೆ ಇಟ್ಟಿದ್ದ ಅವರು, ಹಿಂದುತ್ವದ ಪ್ರಮುಖ ಕಾರ್ಯಕ್ರಮಗಳು ಮತ್ತು ದೇವಾಲಯಗಳ ಭೇಟಿ ಮೂಲಕ ತಮ್ಮ ನಾಯಕತ್ವದ ಮೇಲೆ ಹಿಂದುತ್ವದ ಮುದ್ರೆಯೊತ್ತಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತದಿಂದ ಭಿನ್ನವಾದ ಈ ದಾರಿಯನ್ನು ಅವರು ಆಯ್ದುಕೊಂಡಿರುವುದು ಒಂದು ದೊಡ್ಡ ಗುರಿಯನ್ನು ಸೂಚಿಸುತ್ತದೆ.

ಈ ನಡೆಯು ಕಾಂಗ್ರೆಸ್‌ಗೆ ಹಿಂದುತ್ವದ ವಿಚಾರದಲ್ಲಿ ಹೊಸ ಶಕ್ತಿ ತುಂಬಲಿದೆ ಎಂಬುದು ಡಿ.ಕೆ.ಶಿ. ಅವರ ಆಶಯವಾಗಿದೆ. ಸಾಂಪ್ರದಾಯಿಕ ಕಾಂಗ್ರೆಸ್ ಮತಗಳ ಜೊತೆಗೆ ಹಿಂದೂ ಸಮುದಾಯದ ಒಂದು ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಇದರ ಹಿಂದಿದೆ ಎಂದು ವಿಶ್ಲೇಷಿಸಲಾಗಿದೆ. ವಿರೋಧ ಪಕ್ಷದ ನಾಯಕರು ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಮಾತನಾಡಿದಾಗ, ‘ಸಂಘ ಮಂತ್ರ’ದ ಮೂಲಕ ಡಿ.ಕೆ.ಶಿ. ಅವರು ನೀಡಿದ ಪ್ರತಿಕ್ರಿಯೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *