Headlines

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕ್ಷಮೆ ಹೇಳಲು ಕಾರಣವಾದ ಆರೆಸ್ಸೆಸ್‌ ಗೀತೆ ‘ನಮಸ್ತೆ ಸದಾ ವತ್ಸಲೆ..’ ಹಾಡಿನ ಅರ್ಥವೇನು? | Dks Sings Rss Prayer Song Namaste Sada Vatsale Meaning San

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕ್ಷಮೆ ಹೇಳಲು ಕಾರಣವಾದ ಆರೆಸ್ಸೆಸ್‌ ಗೀತೆ ‘ನಮಸ್ತೆ ಸದಾ ವತ್ಸಲೆ..’ ಹಾಡಿನ ಅರ್ಥವೇನು? | Dks Sings Rss Prayer Song Namaste Sada Vatsale Meaning San


ವಿಧಾನಸಭೆಯಲ್ಲಿ ಆರೆಸ್ಸೆಸ್ ಗೀತೆ ಹಾಡಿ ಡಿಕೆ ಶಿವಕುಮಾರ್ ವಿವಾದಕ್ಕೆ ಸಿಲುಕಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಕ್ಷಮೆ ಯಾಚಿಸಿದ್ದಾರೆ. ಈ ಗೀತೆಯ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಬೆಂಗಳೂರು (ಆ.26): ‘ನಮಸ್ತೆ ಸದಾ ವತ್ಸಲೇ ಮಾತೃಭೂಮೇ..’ ಗೀತೆಯನ್ನು ವಿಧಾನಸಭೆಯಲ್ಲಿ ಹಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಕಾಂಗ್ರೆಸ್‌ ಪಕ್ಷದಲ್ಲಿಯೇ ವಿರೋಧಿಗಳನ್ನು ಕಟ್ಟಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಇದು ಸುದ್ದಿಯಾದ ಬೆನ್ನಲ್ಲಿಯೇ ಮಂಗಳವಾರ ತುರ್ತು ಸುದ್ದಿಗೋಷ್ಠಿ ಕರೆದ ಡಿಕೆ ಶಿವಕುಮಾರ್‌ ಈ ವಿಚಾರವಾಗಿ ಕ್ಷಮೆ ಕೇಳಲು ಸಿದ್ದ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್‌ ಪಕ್ಷಕ್ಕೆ ಇದು ಇರುಸುಮುರುಸು ತಂದಿದ್ದರೆ, ಬಿಜೆಪಿಗರು ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕನ ಬಾಯಿಂದಲೇ ಆರೆಸ್ಸೆಸ್‌ ಗೀತೆ ಕೇಳಿ ಖುಷಿಪಟ್ಟಿದ್ದಾರೆ.

ಇದರ ನಡುವೆ ಆರೆಸ್ಸೆಸ್‌ನ ಪ್ರಾರ್ಥನಾ ಗೀತೆ ನಮಸ್ತೆ ಸದಾ ವತ್ಸಲೆ..ಕುರಿತಾಗಿ ಕುತೂಹಲ ಆರಂಭವಾಗಿದೆ. ಸಂಸ್ಕೃತ ಭಾಷೆಯಲ್ಲಿರುವ ಈ ಗೀತೆಯನ್ನು ಮೊದಲು ಹಾಡಿದವರು ಪ್ರಚಾರಕ್‌ ಯಾದವ್‌ ರಾವ್‌ ಜೋಶಿ. 1940ರಂದು ನಾಗ್ಪುರದಲ್ಲಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ ಮೊದಲ ಬಾರಿಗೆ ಈ ಗೀತೆ ಹಾಡಿದ್ದರು. ಇದೇ ಅವಧಿಯಲ್ಲಿ ಪುಣೆಯಲ್ಲಿ ನಡೆದ ಇನ್ನೊಂದು ಸಂಘ ಶಿಕ್ಷಾ ವರ್ಗದಲ್ಲಿ ಆರೆಸ್ಸೆಸ್ ಪ್ರಚಾರಕ ಅನಂತ್ ರಾವ್ ಕಾಳೆ ಅವರಿಂದ ಸಂಘದ ಪ್ರಾರ್ಥನೆಯನ್ನು ಹಾಡಲಾಯಿತು. ಸಂಪೂರ್ಣ ಸಂಸ್ಕೃತದಲ್ಲಿರುವ ಈ ಹಾಡಿನ ಕೊನೆಯ ಸಾಲಿನಲ್ಲಿರುವ ಭಾರತ್‌ ಮಾತಾ ಕೀ ಜಯ್‌ ಅನ್ನೋದು ಮಾತ್ರವೇ ಹಿಂದಿ ಭಾಷೆಯಲ್ಲಿದೆ.

ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಈ ಪ್ರಾರ್ಥನೆ ಹಾಡುವುದು ಕಡ್ಡಾಯ. 1940ರಲ್ಲಿ ಡಾ. ಕೆ.ಬಿ.ಹೆಡ್ಗೆವಾರ್ ಮತ್ತು ಮಾಧವ್ ಸದಾಶಿವ ಗೋಲ್ವಾಲ್ಕರ್ ಮತ್ತು ಇತರ ಆರೆಸ್ಸೆಸ್‌ ನಾಯಕರ ಮಾರ್ಗದರ್ಶನದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾದ ನರಹರಿ ನಾರಾಯಣ ಭಿಡೆ ಅವರು ಈ ಗೀತೆ ಬರೆದಿದ್ದಾರೆ. ಸಾಮಾನ್ಯವಾಗಿ ಪ್ರತಿ ಆರೆಸ್ಸೆಸ್‌ ಶಾಖೆಯ ಕೊನೆಯಲ್ಲಿ ಈ ಪ್ರಾರ್ಥನೆ ಹಾಡಿ ಮುಗಿಸಲಾಗುತ್ತದೆ.

ನಮಸ್ತೆ ಸದಾ ವತ್ಸಲೇ ಮಾತೃಭೂಮಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸದಸ್ಯರಿಗೆ ಬರೀ ಪ್ರಾರ್ಥನೆ ಗೀತೆಯಲ್ಲ, ಬದಲಾಗಿ ಭಾರತ, ಮಾತೃಭೂಮಿಯ ಬಗ್ಗೆ ಆಳವಾದ ಬೇರೂರಿರುವ ಭಾವನೆಗಳು, ಮೌಲ್ಯಗಳು ಮತ್ತು ಬದ್ಧತೆಯ ಸಾಕಾರ. ಈ ಗೀತೆಯು ಭಾರತ ಮಾತೆಯ ಬಗ್ಗೆ ಭಕ್ತಿ ಮತ್ತು ಅಚಲ ಪ್ರೀತಿಯನ್ನು ಹೊರಹಾಕುತ್ತದೆ, ಇದು RSS ನಿಂತಿರುವ ಮೂಲ ತತ್ವಗಳನ್ನು ಪ್ರತಿಬಿಂಬಿಸುತ್ತದೆ.

 

 

ಮೂಲ ಸಂಸ್ಕೃತ ಗೀತೆ

ನಮಸ್ತೇ ಸದಾ ವತ್ಸಲೇ ಮಾತೃಭೂಮೇ

ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್

ಮಹಾಮಂಗಲೇ ಪುಣ್ಯ ಭೂಮೇ ತ್ವದರ್ಥೇ

ಪತತ್ವೇಷ ಕಾಯೋ ನಮಸ್ತೇ ನಮಸ್ತೇ || 1 ||

 

ಪ್ರಭೋ ಶಕ್ತಿಮನ್ ಹಿಂದುರಾಷ್ಟ್ರಾಂಗಭೂತಾ

ಇಮೇ ಸಾದರಂ ತ್ವಾಂ ನಮಾಮೋವಯಮ್

ತ್ವದೀಯಾಯ ಕಾರ್ಯಾಯ ಬದ್ಧಾ ಕಟೀಯಮ್‌

ಶುಭಾಮಾಶಿಷಂದೇಹಿ ತತ್ಪೂರ್ತಯೇ

ಅಜಯ್ಯಾಂ ಚ ವಿಶ್ವಸ್ಯ ದೇಹೀಶ ಶಕ್ತಿಮ್‌

ಸುಶೀಲಂ ಜಗದ್ಯೇನ ನಮ್ರಂ ಭವೇತ್

ಶ್ರುತಂ ಚೈವ ಯತ್‌ ಕಂಟಕಾಕೀರ್ಣ ಮಾರ್ಗಮ್‌

ಸ್ವಯಂ ಸ್ವೀಕೃತಂ ನಃ ಸುಗಂ ಕಾರಯೇತ್ || 2 ||

 

ಸಮುತ್ಕರ್ಷನಿಃಶ್ರೇಯಸಸ್ಯೈಕಮುಗ್ರಂ

ಪರಂ ಸಾಧನಂ ನಾಮ ವೀರವ್ರತಮ್

ತದತಃ ಸ್ಫುರತ್ವಕ್ಷಯಾ ಧ್ಯೇಯನಿಷ್ಠಾ

ಹೃದತಃ ಪ್ರಜಾಗರ್ತು ತೀವ್ರಾನಿಶಮ್

ವಿಜೇತ್ರೀ ಚ ನಃ ಸಂಹತಾ ಕಾರ್ಯಶಕ್ತಿರ್

ವಿಧಾಯಾಸ್ಯ ಧರ್ಮಸ್ಯ ಸಂರಕ್ಷಣಮ್

ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಂ

ಸಮರ್ಥಾ ಭವತ್ವಾಶಿಶಾ ತೇ ಭೃಶಮ್ || 3 ||

ಭಾರತ ಮಾತಾ ಕೀ ಜಯ್

Namaste Sada Vatsale Matribhume | RSS | Akshay Pandya | Sushant Trivedi
ಗೀತೆಯ ಅನುವಾದ (ಭಾವಾರ್ಥ)

ಹೇ ಪರಮ ವತ್ಸಲೆಯಾದ ಮಾತೃಭೂಮಿ, ನಿನಗೆ ನಮನಗಳು

ನೀವು ಹಿಂದೂ ಭೂಮಿಯಲ್ಲಿ ನನ್ನ ಸಂತೋಷವನ್ನು ಹೆಚ್ಚಿಸಿದ್ದೀರಿ

ಅತ್ಯಂತ ಮಂಗಳಕರ ಮತ್ತು ಪವಿತ್ರ ಭೂಮಿಯಲ್ಲಿ ನಿಮಗಾಗಿ

ಈ ದೇಹವು ಕೆಳಗೆ ಬೀಳಲಿ, ನಾನು ನಿನಗೆ ನನ್ನ ನಮನಗಳನ್ನು ಅರ್ಪಿಸುತ್ತೇನೆ

ಓ ಮಹಾ ಪ್ರಭುವೇ, ಹಿಂದೂ ರಾಷ್ಟ್ರದ ಭಾಗವಾಗಿರುವ ನಾವು ನಿನಗೆ ಭಕ್ತಿಯಿಂದ ನಮಸ್ಕರಿಸುತ್ತೇವೆ.

ನಿಮ್ಮ ಕೆಲಸಕ್ಕಾಗಿ ನಾನು ಕಟಿಬದ್ಧನಾಗಿದ್ದೇನೆ,ಆ ಕಾರ್ಯವನ್ನು ಪೂರ್ಣಗೊಳಿಸಲು ಶುಭ ಆಶೀರ್ವಾದವನ್ನು ನೀಡು.

ಬ್ರಹ್ಮಾಂಡದ ಅಜೇಯ ಶಕ್ತಿ, ಓ ದೇಹದ ಪ್ರಭು, ಸದ್ಗುಣಶೀಲ, ಯಾರಿಂದ ಜಗತ್ತು ವಿನಮ್ರವಾಗಬಹುದೋ

ನಾವು ಸ್ವತಃ ಕೇಳಿ ಸ್ವೀಕರಿಸಿದ ಮುಳ್ಳುಗಳಿಂದ ತುಂಬಿದ ಹಾದಿಯು ನಮಗೆ ಸುಲಭವಾಗಲಿ.

ಅತ್ಯುನ್ನತ ಒಳಿತನ್ನು ಪಡೆಯುವ ಅತ್ಯಂತ ಶ್ರೇಷ್ಠ ಮತ್ತು ಸರ್ವೋಚ್ಚ ಸಾಧನಗಳಲ್ಲಿ ಒಂದನ್ನು ವೀರ ಪ್ರತಿಜ್ಞೆ ಎಂದು ಕರೆಯಲಾಗುತ್ತದೆ.

ಅದರ ಸ್ಪೂರ್ತಿ ನಮ್ಮೆಲ್ಲರ ಅಂತಃಕರಣದಲ್ಲಿದೆ. ನಮ್ಮ ಹೃದಯದಲ್ಲಿ ಅಕ್ಷಯವಾದ ತೀವ್ರ ಧ್ಯೇಯನಿಷ್ಠೆ ಸದಾ ಜಾಗೃತವಾಗಿರಲಿ….

ನಿನ್ನ ಆಶೀರ್ವಾದಿಂದ ನಮ್ಮ ವಿಜಯಶಾಲಿ ಸಂಘಟಿತ ಶಕ್ತಿ…

ಸ್ವಧರ್ಮದ ರಕ್ಷಣೆಗಾಗಿ..ನಮ್ಮ ಈ ರಾಷ್ಟ್ರದ ಪರಮ ವೈಭವದ ಸ್ಥಿತಿಯಲ್ಲಿ ಕರೆದುಕೊಂಡು ಹೋಗಲು ನಾವು ಅಧಿಕವಾಗಿ ಸಮರ್ಥರಾಗಿದ್ದೇವೆ.. || 3 ||

” ಜೈ ಭಾರತಮಾತೆ….”

 



Source link

Leave a Reply

Your email address will not be published. Required fields are marked *