
<p>ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ತೂಗುದೀಪ ಅವರೀಗ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈಗಾಗಲೇ ಜಾಮೀನಿನ ಮೇಲೆ ಒಮ್ಮೆ ಹೊರಗಡೆ ಬಂದು, ಆಮೇಲೆ ಜಾಮೀನು ರದ್ದಾಗಿದ್ದಕ್ಕೆ ಮತ್ತೆ ಈಗ ಅವರು ಜೈಲಿನೊಳಗಡೆ ಹೋಗಿದ್ದಾರೆ.</p><p> </p><img><p>ಇನ್ನುಮುಂದೆ ಕೇಸ್ ಟ್ರಯಲ್ ನಡೆದು, ಯಾವಾಗ ತೀರ್ಪು ಹೊರಬೀಳಲಿದೆಯೋ ಏನೋ! ಈ ಪ್ರಕರಣ ಕೊನೆಯ ಹಂತ ತಲುಪಲು ಒಟ್ಟಿನಲ್ಲಿ ಇನ್ನು ಆರು ತಿಂಗಳುಗಳ ಕಾಲ ಬೇಕು ಎಂದು ಹೇಳಲಾಗುತ್ತಿದೆ.</p><img><p>ದರ್ಶನ್ ಅನುಪಸ್ಥಿತಿಯಲ್ಲಿ ‘ದಿ ಡೆವಿಲ್’ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಜಾಸ್ತಿ ಇದೆ. ಹೀಗಾಗಿ ಈ ಬಗ್ಗೆ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಕೊಡುತ್ತಿರುತ್ತಾರೆ. ಹೀಗಿರುವಾಗ ‘ದಿ ಡೆವಿಲ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇರುವ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.</p><img><p>ಸಭೆ, ಸಮಾರಂಭ ಎಂದು ಅವರು ಸಾರ್ವಜನಿಕವಾಗಿ ಕಾಣಿಸೋದು ಬಹಳ ಅಪರೂಪ. ಇತ್ತೀಚೆಗೆ ಅವರು ದೇವಸ್ಥಾನಗಳಿಗೆ ಭೇಟಿ ಕೊಡುತ್ತಿರುತ್ತಾರೆ.</p><img><p>ಈ ಬಾರಿ ಅವರು ದಸರಾ ಆನೆಗಳ ಮಾವುತರಿಗೆ ಕುಕ್ಕರ್ ಗಿಫ್ಟ್ ಕೊಟ್ಟಿದ್ದಾರೆ. ದರ್ಶನ್ ಜೈಲು ಪಾಲಾದರೂ ಕೂಡ ದರ್ಶನ್ ಪತ್ನಿ ಮೈಸೂರು ನಂಟು ಮರೆತಿಲ್ಲ.</p><img><p>ಆನೆ ಮಾವುತರಿಗೆ ಊಟ ಹಾಕಿಸಿ ಕುಕ್ಕರ್ ಉಡುಗೊರೆ ನೀಡಿದ್ದಾರೆ, ಅಷ್ಟೇ ಅಲ್ಲದೆ ಮೈಸೂರಿನಲ್ಲಿ ದಸರಾ ಆನೆಯ ನೋಡಿ ಸಂಭ್ರಮಿಸಿದ್ದಾರೆ. ವಿಜಯಲಕ್ಷ್ಮ ಅವರ ಸಮಾಜಮುಖಿ ಕೆಲಸದಲ್ಲಿ ಧನ್ವೀರ್ ಜೊತೆ ನಿಂತಿದ್ದಾರೆ.</p>
Source link
PHOTOS: ಜೈಲಿನಲ್ಲಿ ಕಾಲ ಕಳೆಯುತ್ತಿರೋ ದರ್ಶನ್; ಅತ್ತ ಸಮಾಜಮುಖಿ ಕೆಲಸ ಶುರು ಮಾಡಿದ ಪತ್ನಿ ವಿಜಯಲಕ್ಷ್ಮೀ