Headlines

Krish Hari Hara Veera Mallu: ಈ ಕಾರಣಕ್ಕೆ ಪವನ್ ಕಲ್ಯಾಣ್ ‘ಹರಿಹರ ವೀರಮಲ್ಲು’ ಸಿನಿಮಾದಿಂದ ಹೊರಬಂದೆ: ನಿರ್ದೇಶಕ ಕ್ರಿಷ್ | Director Krish Explains Hari Hara Veera Mallu Exit During Ghaati Promotions Gvd

Krish Hari Hara Veera Mallu: ಈ ಕಾರಣಕ್ಕೆ ಪವನ್ ಕಲ್ಯಾಣ್ ‘ಹರಿಹರ ವೀರಮಲ್ಲು’ ಸಿನಿಮಾದಿಂದ ಹೊರಬಂದೆ: ನಿರ್ದೇಶಕ ಕ್ರಿಷ್ | Director Krish Explains Hari Hara Veera Mallu Exit During Ghaati Promotions Gvd



Krish Hari Hara Veera Mallu: ಈ ಕಾರಣಕ್ಕೆ ಪವನ್ ಕಲ್ಯಾಣ್ ‘ಹರಿಹರ ವೀರಮಲ್ಲು’ ಸಿನಿಮಾದಿಂದ ಹೊರಬಂದೆ: ನಿರ್ದೇಶಕ ಕ್ರಿಷ್ | Director Krish Explains Hari Hara Veera Mallu Exit During Ghaati Promotions Gvd

‘ಹರಿಹರ ವೀರಮಲ್ಲು’ ಚಿತ್ರದಿಂದ ಹೊರಬರಲು ಕಾರಣಗಳನ್ನು ನಿರ್ದೇಶಕ ಕೃಷ್ ತಿಳಿಸಿದ್ದಾರೆ. ‘ಘಾಟಿ’ ಸಿನಿಮಾ ಪ್ರಚಾರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಬಗ್ಗೆ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದರು.

ನಿರ್ದೇಶಕ ಕ್ರಿಷ್ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ತೆಲುಗು ಪ್ರೇಕ್ಷಕರಿಗೆ ಹಲವು ಸಂದೇಶಪೂರ್ಣ, ಐತಿಹಾಸಿಕ ಚಿತ್ರಗಳನ್ನು ನೀಡಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ‘ಹರಿಹರ ವೀರಮಲ್ಲು’ ಚಿತ್ರದ ಒಂದು ಭಾಗವನ್ನು ನಿರ್ದೇಶಿಸಿದ್ದ ಅವರು ನಂತರ ನಿರ್ದೇಶನದಿಂದ ಹಿಂದೆ ಸರಿದಿದ್ದು ಎಲ್ಲರಿಗೂ ತಿಳಿದಿದೆ. ನಂತರ ‘ಹರಿಹರ ವೀರಮಲ್ಲು’ ಚಿತ್ರವನ್ನು ನಿರ್ಮಾಪಕ ಎ.ಎಂ. ರತ್ನಂ ಅವರ ಪುತ್ರ ಜ್ಯೋತಿಕೃಷ್ಣ ನಿರ್ದೇಶಿಸಿದರು. ಇದೀಗ ನಿರ್ದೇಶನದಿಂದ ಹಿಂದೆ ಸರಿದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಕ್ರಿಷ್. ಏನಂದ್ರು ಗೊತ್ತಾ..?

ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ನಟಿಸಿರುವ ಆಕ್ಷನ್ ಡ್ರಾಮಾ ‘ಘಾಟಿ’. ಈ ಚಿತ್ರದಲ್ಲಿ ವಿಕ್ರಮ್ ಪ್ರಭು ನಾಯಕನಾಗಿ ನಟಿಸಿದ್ದಾರೆ. ದಿಗ್ಗಜ ನಿರ್ದೇಶಕ ಕ್ರಿಷ್ ಜಗರ್ಲಮೂಡಿ ನಿರ್ದೇಶನದ ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಸಮರ್ಪಣೆಯಲ್ಲಿ ಫಸ್ಟ್ ಫ್ರೇಮ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ರಾಜೀವ್ ರೆಡ್ಡಿ, ಸಾಯಿ ಬಾಬು ಜಗರ್ಲಮೂಡಿ ನಿರ್ಮಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಕ್ರಿಷ್ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಚಿತ್ರ ‘ಹರಿಹರ ವೀರಮಲ್ಲು’ ಚಿತ್ರದಿಂದ ಹೊರಬರಲು ಕಾರಣಗಳನ್ನು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ರಿಷ್ ಮಾತನಾಡಿ, ಪವನ್ ಕಲ್ಯಾಣ್ ಅಂದ್ರೆ ತುಂಬಾ ಇಷ್ಟ, ಹಾಗೆಯೇ ಎ.ಎಂ. ರತ್ನಂ ಅಂದ್ರೆ ಅಪಾರ ಗೌರವ ಎಂದರು. ಪ್ರತಿಯೊಂದು ಸಿನಿಮಾ ತನಗೆ ಒಂದು ಪ್ರಯಾಣದಂತೆ, ಹರಿಹರ ವೀರಮಲ್ಲು ಒಂದು ಭಾಗವನ್ನು ಚಿತ್ರೀಕರಿಸಿದ್ದೇನೆ ಎಂದರು. ಪವನ್ ಕಲ್ಯಾಣ್ ಅಂದ್ರೆ ಪ್ರೀತಿ, ಗೌರವ ಇದೆ ಎಂದರು. ಚಿಕ್ಕಂದಿನಿಂದಲೂ ಸೂರ್ಯ ಮೂವೀಸ್ ಪೋಸ್ಟರ್‌ಗಳನ್ನು ನೋಡಿ ಯಾವತ್ತಾದರೂ ಎ.ಎಂ. ರತ್ನಂ ಜೊತೆ ಕೆಲಸ ಮಾಡಬೇಕೆಂದು ಕನಸು ಕಂಡಿದ್ದೆ ಎಂದು ಹೇಳಿದರು. ಆದರೆ ಕೆಲವು ಶೆಡ್ಯೂಲ್‌ಗಳ ಕಾರಣದಿಂದ ‘ಹರಿಹರ ವೀರಮಲ್ಲು’ ಚಿತ್ರದಿಂದ ಹೊರಬರಬೇಕಾಯಿತು, ಆ ಚಿತ್ರ ಮಾಡಿದ ನಂತರ ಕೋವಿಡ್ ಆರಂಭ, ಇತರೆ ಕಾರಣಗಳಿಂದ ವಿಳಂಬವಾಯಿತು ಎಂದರು.

ಆ ಚಿತ್ರದಲ್ಲಿ ತಮ್ಮ ಪಯಣ ಮುಗಿದಿದ್ದರಿಂದ ನಿರ್ದೇಶಕ ಜ್ಯೋತಿಕೃಷ್ಣ ಮುಂದುವರಿಸಿದರು ಎಂದರು. ‘ಹರಿಹರ ವೀರಮಲ್ಲು’ ಚಿತ್ರದಿಂದ ಬಂದ ನಂತರ ಸಂಪೂರ್ಣವಾಗಿ ‘ಘಾಟಿ’ ಚಿತ್ರದ ಮೇಲೆ ಗಮನ ಹರಿಸಿ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾಗಿ ತಿಳಿಸಿದರು. ಅನುಷ್ಕಾ ಶೆಟ್ಟಿ ನಟಿಸಿರುವ, ಕ್ರಿಷ್ ನಿರ್ದೇಶನದ ಆಕ್ಷನ್-ಕ್ರೈಮ್ ಥ್ರಿಲ್ಲರ್ ‘ಘಾಟಿ’ ಚಿತ್ರ ಸೆಪ್ಟೆಂಬರ್ 5 ರಂದು ತೆರೆಗೆ ಬರಲಿದೆ.



Source link

Leave a Reply

Your email address will not be published. Required fields are marked *