ಮೌನ ಗುಡ್ಡೆಮನೆ ಬಿಗ್ ಮನೆಗೆ ಎಂಟ್ರಿ ಕೊಡೋದು ಫಿಕ್ಸ್…. ರಾಮಾಚಾರಿಯ ಕಥೆ ಏನು?

ಮೌನ ಗುಡ್ಡೆಮನೆ ಬಿಗ್ ಮನೆಗೆ ಎಂಟ್ರಿ ಕೊಡೋದು ಫಿಕ್ಸ್…. ರಾಮಾಚಾರಿಯ ಕಥೆ ಏನು?



ಮೌನ ಗುಡ್ಡೆಮನೆ ಬಿಗ್ ಮನೆಗೆ ಎಂಟ್ರಿ ಕೊಡೋದು ಫಿಕ್ಸ್…. ರಾಮಾಚಾರಿಯ ಕಥೆ ಏನು?
<p>ರಾಮಾಚಾರಿ ಧಾರಾವಾಹಿ ಮೂಲಕ ಕಳೆದ ನಾಲ್ಕು ವರ್ಷಗಳಿಂದ ನಟಿಸುತ್ತಾ, ಜನ ಮನ ಸೆಳೆದ ನಟಿ ಮೌನ ಗುಡ್ಡೆಮನೆ, ಇದೀಗ ಸದ್ಯದಲ್ಲೇ ಆರಂಭವಾಗಲಿರುವ ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೆ.</p><p>&nbsp;</p><img><p>ಕಲರ್ಸ್ ಕನ್ನಡ &nbsp;(Colors Kannada)ವಾಹಿನಿಯ ಜನಪ್ರಿಯ ಧಾರಾವಾಹಿಯಲ್ಲಿ ಒಂದಾದ ರಾಮಾಚಾರಿ ಕಳೆದ ನಾಲ್ಕು ವರ್ಷಗಳಿಂದ ತನ್ನ ವಿಭಿನ್ನ ಕಥೆಯ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ರಾಮಾಚಾರಿ ಮತ್ತು ಚಾರು ಜೋಡಿಯನ್ನು ಜನ ಇಷ್ಟಪಟ್ಟಿದ್ದಾರೆ.</p><img><p>ಚಾರು ಪಾತ್ರವನ್ನು ವಿವಿಧ ಶೇಡ್ ಗಳಲ್ಲಿ ತೋರಿಸಲಾಗಿದ್ದು, ಹಾಗಾಗಿ ಆ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ತಮಗೆ ಸಿಕ್ಕಿದಂತಹ ಪಾತ್ರವನ್ನು ತುಂಬಾನೆ ಅದ್ಭುತವಾಗಿ ನಿರ್ವಹಿಸಿದವರು ಮೌನ ಗುಡ್ಡೆಮನೆ (Mouna Guddemane).</p><img><p>ಆರಂಭದಲ್ಲಿ ಬಾಸ್ ಲೇಡಿಯಂತೆ ಖಡಕ್ ಅವತಾರದಲ್ಲಿ ಕಾಣಿಸಿಕೊಂಡ ಚಾರು, ಬಳಿಕ ರಾಮಾಚಾರಿಯ (Ramachari) ಪ್ರೀತಿಯಲ್ಲಿ ಸಾಫ್ಟ್ ಆದಳು, ನಂತರ ನಾರಾಯಣಾಚಾರ್ ಸೊಸೆಯಾಗಿ ಆ ಮನೆಗೆ ತಕ್ಕ ಸೊಸೆಯಾಗಿಯೂ ಒಗ್ಗಿಕೊಳ್ಳುವಂತಹ ಪಾತ್ರ ಮಾಡಿದ್ದರು ಮೌನ.</p><img><p>ಸೀರಿಯಲ್ ನಲ್ಲಿ ಇರುವಾಗಲೇ ನಟಿಗೆ ಚಂದನವನಕ್ಕೆ ಎಂಟ್ರಿ ಕೊಡುವ ಚಾನ್ಸ್ ಕೂಡ ಸಿಕ್ಕಿತು. ಮಡೆಯೂರು ಮನು ಜೊತೆ ಕುಲದಲ್ಲಿ ಕೀಳ್ಯಾವುದೋ (Kuladalli Kilyavudo)ಸಿನಿಮಾದಲ್ಲಿ ಮೌನ ನಟಿಸಿದ್ದರು.</p><img><p>ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿಯಂತೆ ಮೌನ ಗುಡ್ಡೆಮನೆ ಶೀಘ್ರದಲ್ಲೇ ಬಿಗ್ ಬಾಸ್ ಸೀಸನ್ 12ರಲ್ಲಿ &nbsp;(Bigg Boss Season 12)ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.</p><img><p>ಶೀಘ್ರದಲ್ಲೇ ಶುರುವಾಗಲಿರುವ ಬಿಗ್ ಬಾಸ್ ಮನೆಗೆ ಮೌನ ಗುಡ್ಡೆಮನೆ ಎಂಟ್ರಿ ಕೊಡೋದು ಕನ್ಫರ್ಮ್ ಎನ್ನಲಾಗುತ್ತಿದೆ. ಆದರೆ ಈ ವಿಚಾರವಾಗಿ ಎಲ್ಲೂ ಅಧಿಕೃತ ಮಾಹಿತಿ ದೊರೆತಿಲ್ಲ. ಬಿಗ್ ಬಾಸ್ ಆರಂಭಕ್ಕೆ ಕಾದು ನೋಡಬೇಕು.</p><img><p>ಇನ್ನು ಮೌನ ದೊಡ್ಮನೆಗೆ ಎಂಟ್ರಿ ಕೊಡೋದೆ ನಿಜವಾದರೆ ರಾಮಾಚಾರಿ ಸೀರಿಯಲ್ ಕೊನೆಯಾಗೋದು ಖಚಿತಾ. ಸದ್ಯ ಕಥೆ ಸುತ್ತಿ ಬಳಸಿ ಕೃಷ್ಣ ಸಾವಿನ ಹಿಂದೆ ಸುತ್ತಾಡುತ್ತಿದೆ. ಆ ಕೊಲೆಯ ಸತ್ಯ ತಿಳಿಯಲು ರಾಮಾಚಾರಿ ಚಾರು ಒದ್ದಾಡುತ್ತಿದ್ದಾರೆ. ಕೊನೆಗೆ ಕೃಷ್ಣನ ಸಾವಿಗೆ ನ್ಯಾಯ ಕೊಡಿಸಿ, ಸೀರಿಯಲ್ ಕೊನೆಯಾಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.</p>



Source link

Leave a Reply

Your email address will not be published. Required fields are marked *