ಸಂಘಟನಾ ಶಕ್ತಿ ಬಲಪಡಿಸಲು ಬ್ರಾಹ್ಮಣ ಮಹಾಸಂಘದಿಂದ ಹೊಸ ಹುದ್ದೆಗಳಿಗೆ ನೇಮಕ | Brahmin Mahasangh Appoints New Posts To Strengthen Organizational Strength Blr

ಸಂಘಟನಾ ಶಕ್ತಿ ಬಲಪಡಿಸಲು ಬ್ರಾಹ್ಮಣ ಮಹಾಸಂಘದಿಂದ ಹೊಸ ಹುದ್ದೆಗಳಿಗೆ ನೇಮಕ | Brahmin Mahasangh Appoints New Posts To Strengthen Organizational Strength Blr



ಸಂಘಟನಾ ಶಕ್ತಿ ಬಲಪಡಿಸಲು ಬ್ರಾಹ್ಮಣ ಮಹಾಸಂಘದಿಂದ ಹೊಸ ಹುದ್ದೆಗಳಿಗೆ ನೇಮಕ | Brahmin Mahasangh Appoints New Posts To Strengthen Organizational Strength Blr

ಬೆಂಗಳೂರು ಉತ್ತರ ಜಿಲ್ಲಾ ಘಟಕದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಹೊಸ ಹುದ್ದೆಗಳ ನೇಮಕಾತಿ ಮಾಡಿದೆ. ಶ್ರೀನಿವಾಸ್ ಕುಲಕರ್ಣಿ, ಶ್ವೇತಾ ಶ್ರೀವತ್ಸ ಮತ್ತು ಅಶಾಕುಮಾರಿ ಎ.ಜಿ. ಅವರು ಕ್ರಮವಾಗಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಮಹಿಳಾ ಘಟಕದ ಅಧ್ಯಕ್ಷ ಸ್ಥಾನಗಳನ್ನು ನೇಮಕವಾಗಿದ್ದಾರೆ.

ಬೆಂಗಳೂರು (ಸೆ.6): ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (ರಿ) ತನ್ನ ಸಂಘಟನಾ ಶಕ್ತಿಯನ್ನು ವಿಸ್ತರಿಸುವುದರೊಂದಿಗೆ ಸಮಾಜಮುಖಿ ಚಟುವಟಿಕೆಗಳನ್ನು ಬಲಪಡಿಸಲು, ಬೆಂಗಳೂರು ಉತ್ತರ ಜಿಲ್ಲಾ ಘಟಕದಲ್ಲಿ ಹೊಸ ಹುದ್ದೆಗಳ ನೇಮಕಾತಿ ಮಾಡಿ, ಅದನ್ನು ಸ್ಮರಣೀಯಗೊಳಿಸುವ ಉದ್ದೇಶದಿಂದ ಭವ್ಯವಾದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತು.

ಈ ಸಂದರ್ಭದಲ್ಲಿ, ಶ್ರೀನಿವಾಸ್ ಕುಲಕರ್ಣಿ ಅವರನ್ನು ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಶ್ವೇತಾ ಶ್ರೀವತ್ಸ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅಶಾಕುಮಾರಿ ಎ.ಜಿ. ಅವರನ್ನು ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾದ ಪ್ರದೀಪ್ ಜಿ. ಆರ್. ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಜೋಶಿ ಅವರು ಅಧಿಕೃತವಾಗಿ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು.

ರಾಜ್ಯ ಮಾಧ್ಯಮ ಪ್ರಭಾರಿ ಶಶಿ ದೇಶಪಾಂಡೆ ಅವರು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಹಾಜರಿದ್ದು, ನೂತನ ಹುದ್ದೆದಾರರಿಗೆ ಹಾರೈಸಿ ಅಭಿನಂದಿಸಿದರು.

ತಮ್ಮ ಪ್ರತಿಕ್ರಿಯೆಯಲ್ಲಿ ನೂತನ ಹುದ್ದೆದಾರರು, ಸಂಘಟನೆಯ ಧ್ಯೇಯ–ಲಕ್ಷ್ಯಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸಮುದಾಯದ ಒಗ್ಗಟ್ಟು, ಯುವಜನರ ಶಕ್ತಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ತಾವು ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು.

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ಈ ನೇಮಕಾತಿ ಮತ್ತು ಸನ್ಮಾನ ಕಾರ್ಯಕ್ರಮವು ಸಂಘಟನೆಯ ಬಲವರ್ಧನೆಗೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಉತ್ತೇಜನಕ್ಕೆ ಮಹತ್ವದ ಹೆಜ್ಜೆಯಾಗಲಿದೆ ಎಂದು ತಿಳಿಸಿದೆ.



Source link

Leave a Reply

Your email address will not be published. Required fields are marked *