'Naa Ninna Bidalaare' ಪುಟಾಣಿ ಹಿತಾ ಅಪಘಾತದಲ್ಲಿ ಸಾವು? ಅಪ್ಪನ ಮದ್ವೆಗೆ ನೊಂದು ಮನೆಬಿಟ್ಟ ಬಾಲಕಿ- ಏನಿದು ಟ್ವಿಸ್ಟ್​?

'Naa Ninna Bidalaare' ಪುಟಾಣಿ ಹಿತಾ ಅಪಘಾತದಲ್ಲಿ ಸಾವು? ಅಪ್ಪನ ಮದ್ವೆಗೆ ನೊಂದು ಮನೆಬಿಟ್ಟ  ಬಾಲಕಿ- ಏನಿದು ಟ್ವಿಸ್ಟ್​?



'Naa Ninna Bidalaare' ಪುಟಾಣಿ ಹಿತಾ ಅಪಘಾತದಲ್ಲಿ ಸಾವು? ಅಪ್ಪನ ಮದ್ವೆಗೆ ನೊಂದು ಮನೆಬಿಟ್ಟ  ಬಾಲಕಿ- ಏನಿದು ಟ್ವಿಸ್ಟ್​?
<p>ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ದುರ್ಗಾ ಮತ್ತು ಶರತ್ ಮದುವೆಯಾಗಿ, ಹಿತಾ ಅಪಘಾತದಲ್ಲಿ ಸಾವನ್ನಪ್ಪಿದಂತೆ ತೋರಿಸಲಾಗಿದೆ. ಹಿತಾಳ ಹುಟ್ಟಿನ ರಹಸ್ಯ ಬೇರೆಯದ್ದೇ ಇದ್ದು, ಅವಳು ಕೂಡ ಆತ್ಮವಾಗಿ ಬರುವ ಸೂಚನೆ ಇದೆ. ಏನಿದು ಟ್ವಿಸ್ಟ್​?&nbsp;</p><img><p>ಸದ್ಯ ನಾನಿನ್ನ ಬಿಡಲಾರೆ ಸೀರಿಯಲ್ ಸಕತ್​ ಕುತೂಹಲ ಘಟ್ಟ ತಲುಪಿದೆ. ಶರತ್​ ಮತ್ತು ಮಾಯಾ ಮದುವೆ ತಯಾರಿ ನಡೆಯುತ್ತಿದ್ದರೆ, ದುರ್ಗಾ ಮತ್ತು ಶರತ್​ ಒಂದಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದರು. ದುರ್ಗಾ ಮತ್ತು ಶರತ್​ ಒಬ್ಬರನ್ನೊಬ್ಬರು ಲವ್​ ಮಾಡದೇ ಹೋದರೂ ಅವರು ಒಂದಾಗಲಿ ಎಂದು ವೀಕ್ಷಕರು ಹಾರೈಸ್ತಿರೋದು ಈ ಸೀರಿಯಲ್​ನ ಕುತೂಹಲವಾಗಿತ್ತು. ಹಿತಾ ಮತ್ತು ದುರ್ಗಾ ಜೋಡಿಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಆದರೆ ವೀಕ್ಷಕರು ಅಂದುಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು.</p><img><p>ಅಷ್ಟಕ್ಕೂ ಮೃತಪಟ್ಟ ಅಂಬಿಕಾ ಶಕ್ತಿ ಹೆಚ್ಚಾಗಿ, ದುಷ್ಟರ ನಾಶ ಆಗಬೇಕು ಎಂದರೆ ಆಕೆಗೆ ಮರು ಮಾಂಗಲ್ಯಧಾರಣೆ ಆಗಬೇಕು ಎಂದು ಭವಿಷ್ಯ ನುಡಿಯಲಾಗಿತ್ತು. ಅದರಂತೆಯೇ ಅಂಬಿಕಾ ತನ್ನ ತಂಗಿ ದುರ್ಗಾಳ ಮೈಯೊಳಗೆ ಹೊಕ್ಕು, ಶರತ್​ನನ್ನು ಮದುವೆಯಾಗಿದ್ದಾಳೆ. ಹೇಗಾದ್ರೂ ಸರಿ ಶರತ್​ ಮತ್ತು ದುರ್ಗಾ ಮದ್ವೆಯಾಯ್ತಲ್ಲ, ಇನ್ನು ಸೀರಿಯಲ್​ ಮುಗಿಯತ್ತೆ ಎನ್ನೋಷ್ಟ್ರಲ್ಲಿ ಬೇರೆಯದ್ದೇ ಟ್ವಿಸ್ಟ್​ ಆಗೋಯ್ತು.</p><img><p>ದುರ್ಗಾ ಮತ್ತು ಶರತ್​ ಇಬ್ಬರೂ ಮದುವೆಯ ಸಮಯದಲ್ಲಿ ಸಮ್ಮೋಹನಕ್ಕೆ ಒಳಗಾಗಿದ್ದರಿಂದ ಈ ಮದುವೆ ಹೇಗೆ ಆಯ್ತು ಎನ್ನೋದಿ ತಿಳಿಯುತ್ತಿಲ್ಲ. ದುರ್ಗಾನೇ ಷಡ್ಯಂತ್ರ ಮಾಡಿರುವುದಾಗಿ ಅವಳ ಮೇಲೆ ಆರೋಪ ಬಂದಿದೆ. ಮದುವೆಯಾಗದ ಕಾರಣ, ಮಾಯಾ ಸಿಟ್ಟಿನಿಂದ ಬೆಂಕಿ ಹಚ್ಚಿಕೊಳ್ಳಲು ಹೋಗಿ ಆಸ್ಪತ್ರೆ ದಾಖಲಾಗಿದ್ದಾಳೆ.</p><img><p>ಅವಳು ಸತ್ತರೆ ಸಾಯಲಿ ಬಿಡಿ ಎಂದು ವೀಕ್ಷಕರು ಅಂದುಕೊಳ್ಳುತ್ತಿರುವಾಗಲೇ ಸೀರಿಯಲ್​ ಮತ್ತೆ ಬೇರೆಯದ್ದೇ ಟರ್ನ್​ ತೆಗೆದುಕೊಂಡಿದೆ. ದುರ್ಗಾಳನ್ನು ಅಮ್ಮನ ರೂಪದಲ್ಲಿ ನೋಡಲು ಹಿತಾ ಇಷ್ಟಪಟ್ಟಿರಲಿಲ್ಲ. ಅವಳು ದುರ್ಗಾಳನ್ನು ತುಂಬಾ ಪ್ರೀತಿಸುತ್ತಿದ್ದರೂ ಅಮ್ಮನಾಗುವುದು ಇಷ್ಟವಿರಲಿಲ್ಲ. ಅದಕ್ಕಾಗಿ ನೊಂದು ಮನೆ ಬಿಟ್ಟಿದ್ದಾಳೆ.</p><img><p>ಆಗ ಅವಳಿಗೆ ಆ್ಯಕ್ಸಿಡೆಂಟ್​ ಆಗಿ ಸಾವನ್ನಪ್ಪಿರುವಂತೆ ತೋರಿಸಲಾಗಿದೆ. ಆದರೆ, ಆಕೆಯ ಹುಟ್ಟಿನ ರಹಸ್ಯ ಬೇರೆಯದ್ದೇ ಇರುವ ರೀತಿ ತೋರಿಸಲಾಗಿದ್ದು, ಆಕೆ ಕೂಡ ಅಮ್ಮನಂತೆಯೇ ಆತ್ಮ ಆಗಲಿದ್ದಾಳೆಯೇ ಎನ್ನುವುದು ಈಗಿರುವ ಪ್ರಶ್ನೆ. ಅಮ್ಮನ ಆತ್ಮನ ಜೊತೆ ಮಗಳ ಆತ್ಮವೂ ಸೇರಿ ಸೀರಿಯಲ್​ಗೆ ಇನ್ನಷ್ಟು ರೋಚಕತೆ ಬರುವಲ್ಲಿ ಸಂದೇಹವಿಲ್ಲ.</p><img><p>ಆದರೆ, ಇದಕ್ಕೆಲ್ಲಾ ಕಾರಣ ದುರ್ಗಾ ಎಂದು ಎಲ್ಲರೂ ಬೈದುಕೊಂಡರೆ ಎನ್ನುವುದು ವೀಕ್ಷಕರ ನೋವು. ಒಟ್ಟಿನಲ್ಲಿ ಆತ್ಮದ ಕಥೆಗೆ ಟಿಆರ್​ಪಿ ಹೆಚ್ಚಿರೋ ಕಾರಣದಿಂದ, ಅಷ್ಟಕ್ಕೂ ಅಂಬಿಕಾಳ ಆತ್ಮವನ್ನು ವೀಕ್ಷಕರೆಲ್ಲರೂ ತುಂಬಾ ಪ್ರೀತಿಸುತ್ತಿರೋ ಕಾರಣದಿಂದ ಮತ್ತೊಂದು ಆತ್ಮದ ಕಥೆ ಶುರುವಾಗುವ ಸಾಧ್ಯತೆ ಇದೆ.</p>&nbsp;&nbsp;&nbsp;&nbsp;View this post on Instagram&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;<p>A post shared by Zee Kannada (@zeekannada)</p><p></p>



Source link

Leave a Reply

Your email address will not be published. Required fields are marked *