Headlines

PM Modi ಮೋದಿಯನ್ನು ಕಂಟ್ರೋಲ್ ಮಾಡಬಲ್ಲ ರಿಮೂಟ್ ಯಾವುದು? ಬಹಿರಂಗಪಡಿಸಿದ ಪ್ರಧಾನಿ | Pm Modi Says In Assam My Only Remote Control 140 Crore Indians

PM Modi ಮೋದಿಯನ್ನು ಕಂಟ್ರೋಲ್ ಮಾಡಬಲ್ಲ ರಿಮೂಟ್ ಯಾವುದು? ಬಹಿರಂಗಪಡಿಸಿದ ಪ್ರಧಾನಿ | Pm Modi Says In Assam My Only Remote Control 140 Crore Indians



PM Modi ಮೋದಿಯನ್ನು ಕಂಟ್ರೋಲ್ ಮಾಡಬಲ್ಲ ರಿಮೂಟ್ ಯಾವುದು? ಬಹಿರಂಗಪಡಿಸಿದ ಪ್ರಧಾನಿ | Pm Modi Says In Assam My Only Remote Control 140 Crore Indians

ಮೋದಿಯನ್ನು ಕಂಟ್ರೋಲ್ ಮಾಡಬಲ್ಲ ರಿಮೂಟ್ ಯಾವುದು? ಬಹಿರಂಗಪಡಿಸಿದ ಪ್ರಧಾನಿ,  ಟ್ರಂಪ್ ಟಾರಿಫ್ ಬೆದರಿಕೆ, ಉಗ್ರರ ಎಚ್ಚರಿಕೆ ಯಾವುದಕ್ಕೂ ಮೋದಿ ಬಗ್ಗುವುದಿಲ್ಲ. ಆದರೆ ಮೋದಿಯನ್ನು ಕಂಟ್ರೋಲ್ ಮಾಡಬಲ್ಲ ರಿಮೂಟ್ಇದೆ. ಅದು ಯಾವ ರಿಮೂಟ್ ಎಂದು ಸ್ವತಃ ಮೋದಿ ಹೇಳಿದ್ದಾರೆ.

ಗುವ್ಹಾಟಿ (ಸೆ.14) ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆರ್ಟಿಕಲ್ 370 ರದ್ದು ಸೇರಿದಂತೆ ಹಲವು ಐತಿಹಾಸಿಕ ಹಾಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪ್ರಧಾನಿ ಮೋದಿ ಯಾರ ಮಾತಿಗೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ. ಉಗ್ರರ ಬೆದರಿಕೆ ಇರಲಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತೆರಿಗೆ ಎಚ್ಚರಿಕೆಯೇ ಇರಲಿ ಮೋದಿ ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ. ಮೋದಿ ಯಾರ ಮಾತಿಗೂ ಬಗ್ಗಲ್ಲ, ಆದರೆ ಮೋದಿಯನ್ನೇ ಕಂಟ್ರೋಲ್ ಮಾಡಬಲ್ಲ ರಿಮೂಟ್ ಇದೆ. ಈ ಕುರಿತು ಸ್ಪತಃ ಮೋದಿಯೇ ಬಹಿರಂಗಪಡಿಸಿದ್ದಾರೆ.

ನನ್ನ ರಿಮೂಟ್ ಕಂಟ್ರೋಲ್.. ಮೋದಿ ಹೇಳಿದ್ದೇನು?

ಮಣಿಪುರ ಬೇಟಿ ಬಳಿಕ ಇಂದು ಅಸ್ಸಾಂಗೆ ಬಂದಿಳಿದ ಪ್ರಧಾನಿ ಮೋದಿ, 18,530 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನನ್ನನ್ನು ಕಂಟ್ರೋಲ್ ಮಾಡಬಲ್ಲ ಏಕೈಕ ರಿಮೂಟ್ ಅಂದರೆ ಅದು 140 ಕೋಟಿ ಭಾರತೀಯರು. ಈ ರಿಮೂಟ್ ಕಂಟ್ರೋಲ್ ಬಿಟ್ಟು ಇನ್ಯಾವುದೇ ರಿಮೂಟ್ ನನ್ನನ್ನು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಭಾರತೀಯರೇ ಪ್ರಧಾನಿಯನ್ನು ಕಂಟ್ರೋಲ್ ಮಾಡುತ್ತಾರೆ. ಭಾರತೀಯ ಆಶೀರ್ವಾದವಿದ್ದರೆ ಮಾತ್ರ ಪ್ರಧಾನಿಯಾಗಲು, ಮುಂದುವರಿಯಲು ಸಾಧ್ಯ ಎಂದು ಮೋದಿ ಪರೋಕ್ಷವಾಗಿ ಹೇಳಿದ್ದಾರೆ.

ಹೆಲಿಕಾಪ್ಟರ್ ಪ್ರಯಾಣ ಅಸಾಧ್ಯ ಎಂದ ತಂಡ, ರಸ್ತೆ ಮೂಲಕ ಮಣಿಪುರದ ಚುರಚಂದಾಪುರಕ್ಕೆ ಮೋದಿ

ಶಿವ ಅವಮಾನ ಸಹಿಸಿಕೊಳ್ಳುತ್ತಾನೆ, ಆದರೆ ಕಾಂಗ್ರೆಸ್ ತಿವಿದ ಮೋದಿ

ಶಿವನ ವಿರುದ್ಧ ಏನೇ ಹೇಳಿದರೂ ಆತ ಸಹಿಸಿಕೊಳ್ಳುತ್ತಾನೆ. ನಾನು ಶಿವನ ಭಕ್ತ. ನನ್ನ ವಿರುದ್ಧ ಮಾಡುವ ಟೀಕೆ, ಅಪಮಾನವನ್ನು ನಾನು ಸಹಿಸಿಕೊಳ್ಳುತ್ತೇನೆ. ಆದರೆ ಇತರರ ಮೇಲೆ ಮಾಡಿದರೆ ಜೋಕೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಅಸ್ಸಾಂ ಮಣ್ಣಿನ ಹೀರೋ, ಅಸ್ಸಾಂ ಹೆಮ್ಮೆ, ಗಾಯಕ, ಮಾಜಿ ಶಾಸಕ ಭುಪೇಂದ್ರ ಹಜಾರಿಕಾಗೆ ನಮ್ಮ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿತ್ತು. ಆದರೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಕಾಂಗ್ರೆಸ್ ಅಧ್ಯಕ್ಷರು ಹಜರಿಕಾಗೆ ನೀಡಿದ ಪ್ರಶಸ್ತಿಗೆ, ಮೋದಿ ಕುಣಿಯುವ ಹಾಗೂ ಹಾಡುವ ಮಂದಿಗೆ ಭಾರತ ರತ್ನ ಕೊಡುತ್ತಿದೆ ಎಂದು ವ್ಯಂಗ್ಯವಾಡಿತ್ತು. ಈ ದೇಶದ ಕಲಾಭಿಮಾನಿಗಳು ಕಾಂಗ್ರೆಸ್ ಪ್ರಶ್ನೆ ಮಾಡಬೇಕಿದೆ. ಹಜರಿಕಾಗೆ ಭಾರತ ರತ್ನ ನೀಡಿದ್ದನ್ನು ಕಾಂಗ್ರೆಸ್ ವಿರೋಧಿಸಿದ್ದು ಯಾಕೆ ಎಂದು ಕೇಳಬೇಕು ಎಂದಿದ್ದಾರೆ.

ಕಾಂಗ್ರೆಸ್ ಎಲ್ಲರನ್ನೂ ಹೀಳಿಯಾಸುತ್ತೆ. ಅವರ ರಾಜಕೀಯಕ್ಕೆ ಎಲ್ಲರನ್ನೂ ಬಳಸಿಕೊಳ್ಳುತ್ತೆ, ಟೀಕೆ ಮಾಡುತ್ತೆ. ಇದಕ್ಕೆ ನನ್ನ ತಾಯಿ ಕೂಡ ಹೊರತಾಗಿರಲಿಲ್ಲ ಎಂದು ಮೋದಿ ಹೇಳಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ ನನ್ನ ತಾಯಿ ವಿರುದ್ದ ಟೀಕೆ ಮಾಡಿದೆ. ತಾಯಿ ವಿಡಿಯೋಗಳನ್ನು ಎಐ ಮೂಲಕ ಸೃಷ್ಟಿಸಿ ಪೋಸ್ಟ್ ಮಾಡಿದೆ ಎಂದು ಮೋದಿ ಹೇಳಿದ್ದಾರೆ.

ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಈಶಾನ್ಯ ಭಾರತವನ್ನು ಕಡೆಗಣಿಸಿತ್ತು. ಬಿಜೆಪಿ ಸರ್ಕಾರ ಈಶಾನ್ಯ ಭಾರತದ ಅಭಿೃವದ್ಧಿ ಮಾಡುತ್ತಿದೆ ಎಂದಿದ್ದಾರೆ.

ಮಣಿಪುರದಲ್ಲಿ ಶಾಂತಿ ಪುನಃಸ್ಥಾಪಿಸುವ ಭರವಸೆ ನೀಡಿದ ಮೋದಿ

 



Source link

Leave a Reply

Your email address will not be published. Required fields are marked *