ಕೃಷ್ಣಾ ಮೇಲ್ದಂಡೆ ಯೋಜನೆ ಪರಿಹಾರ ಕೊಡಲು ಕೋರ್ಟ್ ಆದೇಶಕ್ಕೂ ಬಗ್ಗದ ಸರ್ಕಾರ; ಒಬ್ಬ ರೈತನಿಗೆ ₹13.76 ಕೋಟಿ ಬಾಕಿ | Bagalkote Farmer Krishna Upper Project Land Compensation Sat

ಕೃಷ್ಣಾ ಮೇಲ್ದಂಡೆ ಯೋಜನೆ ಪರಿಹಾರ ಕೊಡಲು ಕೋರ್ಟ್ ಆದೇಶಕ್ಕೂ ಬಗ್ಗದ ಸರ್ಕಾರ; ಒಬ್ಬ ರೈತನಿಗೆ ₹13.76 ಕೋಟಿ ಬಾಕಿ | Bagalkote Farmer Krishna Upper Project Land Compensation Sat



ಕೃಷ್ಣಾ ಮೇಲ್ದಂಡೆ ಯೋಜನೆ ಪರಿಹಾರ ಕೊಡಲು ಕೋರ್ಟ್ ಆದೇಶಕ್ಕೂ ಬಗ್ಗದ ಸರ್ಕಾರ; ಒಬ್ಬ ರೈತನಿಗೆ ₹13.76 ಕೋಟಿ ಬಾಕಿ | Bagalkote Farmer Krishna Upper Project Land Compensation Sat

ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಬಾಗಲಕೋಟೆಯ ರೈತರೊಬ್ಬರಿಗೆ, ಜಿಲ್ಲಾ ನ್ಯಾಯಾಲಯವು ಪ್ರತಿ ಎಕರೆಗೆ ₹3.44 ಕೋಟಿಯಂತೆ, ಒಟ್ಟು ₹13.76 ಕೋಟಿ ಪರಿಹಾರ ನೀಡಲು ಐತಿಹಾಸಿಕ ಆದೇಶ ನೀಡಿದೆ. ಆದೇಶ ಬಂದು ವರ್ಷ ಕಳೆದರೂ, ರೈತನಿಗೆ ಇನ್ನೂ ಹಣ ಸಂದಾಯವಾಗಿಲ್ಲ.

ಬಾಗಲಕೋಟೆ (ಸೆ.16): ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಬಾಗಲಕೋಟೆಯ ರೈತನೊಬ್ಬನಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದ್ದು, ಒಂದು ಎಕರೆ ಜಮೀನಿಗೆ ಬರೋಬ್ಬರಿ ₹3 ಕೋಟಿ 44 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.

ಡಿ.ಬಿ. ಪೂಜಾರ ಎಂಬ ರೈತನಿಗೆ ಸೇರಿದ ಒಟ್ಟು 4 ಎಕರೆ ಜಮೀನನ್ನು ಯೋಜನೆಯ ಪುನರ್ವಸತಿಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದಕ್ಕೆ ಒಟ್ಟು ₹13.76 ಕೋಟಿ ಪರಿಹಾರ ನೀಡುವಂತೆ ನ್ಯಾಯಾಲಯ ಘೋಷಿಸಿದೆ. ಈ ತೀರ್ಪು ಏಪ್ರಿಲ್ 20, 2024 ರಂದು ಪ್ರಕಟಗೊಂಡಿದ್ದರೂ, ಇಲ್ಲಿಯವರೆಗೆ ರೈತನಿಗೆ ಪರಿಹಾರದ ಹಣ ತಲುಪಿಲ್ಲ.

ದಶಕಗಳ ಹೋರಾಟ:

ರೈತ ಡಿ.ಬಿ. ಪೂಜಾರ ಅವರ ಜಮೀನನ್ನು ಡಿಸೆಂಬರ್ 2013ರಲ್ಲಿ ಅಧಿಸೂಚನೆ ಹೊರಡಿಸಿ, 2014ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿತ್ತು. 2016-17ರಲ್ಲಿ ಪರಿಹಾರ ಮೊತ್ತದ ಬಗ್ಗೆ ಆರಂಭಿಕ ತೀರ್ಪು ಬಂದ ನಂತರ, ರೈತ ಹೆಚ್ಚಿನ ಪರಿಹಾರ ಕೋರಿ 2018-19ರಲ್ಲಿ ನ್ಯಾಯಾಲಯದ ಮೊರೆ ಹೋದರು. ಸುದೀರ್ಘ ವಿಚಾರಣೆಯ ನಂತರ, ಬಾಗಲಕೋಟೆ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ನಗರ ವ್ಯಾಪ್ತಿಯಲ್ಲಿರುವ ಜಮೀನಿಗೆ ಪ್ರತಿ ಚದರ ಅಡಿಗೆ ₹790 ದರ ನಿಗದಿಪಡಿಸಿತು. ಈ ಲೆಕ್ಕಾಚಾರದಲ್ಲಿ, ಒಂದು ಎಕರೆಗೆ ₹3.44 ಕೋಟಿ ಪರಿಹಾರ ನಿಗದಿಪಡಿಸಲಾಗಿದೆ.

ಕಚೇರಿ ಜಪ್ತಿ ಮಾಡಿಸಿದ್ದ ರೈತ:

ಪರಿಹಾರದ ಹಣ ಬಿಡುಗಡೆಯಾಗದಿದ್ದರಿಂದ ಬೇಸತ್ತ ರೈತ ಪೂಜಾರ, ಕಳೆದ ತಿಂಗಳು ಕಾನೂನು ಕ್ರಮದ ಮೂಲಕ ಬಾಗಲಕೋಟೆ ಟೌನ್ ಡೆವಲಪ್ಮೆಂಟ್ ಅಥಾರಿಟಿ (BTDA) ಕಚೇರಿಯನ್ನು ಜಪ್ತಿ ಮಾಡಿಸಿದ್ದರು. ಇದು ರಾಜ್ಯ ಸರ್ಕಾರಕ್ಕೆ ರೈತರ ಪರವಾಗಿ ಸೂಕ್ತ ಪರಿಹಾರ ನೀಡಬೇಕಾದ ಅನಿವಾರ್ಯತೆಯನ್ನು ಎತ್ತಿ ತೋರಿಸಿದೆ.

ಪ್ರಸ್ತುತ, ಸರ್ಕಾರ ಗ್ರಾಮೀಣ ಭಾಗದ ರೈತರ ಜಮೀನುಗಳಿಗೆ ದರ ನಿಗದಿ ಮಾಡಲು ಮುಂದಾಗಿದ್ದು, ನಗರ ಪ್ರದೇಶದಂತೆ ಗ್ರಾಮೀಣ ರೈತರಿಗೂ ಉತ್ತಮ ಪರಿಹಾರ ನೀಡಬೇಕೆಂದು ರೈತ ಸಮುದಾಯ ಆಗ್ರಹಿಸಿದೆ. ಇದು ಕೇವಲ ಒಂದು ವೈಯಕ್ತಿಕ ಪ್ರಕರಣವಾಗಿರದೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನ್ಯಾಯಯುತ ಪರಿಹಾರದ ಬೇಡಿಕೆಗೆ ಒಂದು ಪ್ರಬಲ ನಿದರ್ಶನವಾಗಿದೆ.



Source link

Leave a Reply

Your email address will not be published. Required fields are marked *