ಕ್ರೌರ್ಯದ ಪರಮಾವಧಿ ಇದು..ಅಳೋ ಶಬ್ದ ಕೇಳುತ್ತಿತ್ತು, ಕೈ ಚಾಚಿದ್ದವು, ಮಣ್ಣಿನ ರಾಶಿ ತೆಗೆದು ನೋಡಿದ್ರೆ! | Up Police Rescue Newborn Baby Girl Buried Alive In Shahjahanpur

ಕ್ರೌರ್ಯದ ಪರಮಾವಧಿ ಇದು..ಅಳೋ ಶಬ್ದ ಕೇಳುತ್ತಿತ್ತು, ಕೈ ಚಾಚಿದ್ದವು, ಮಣ್ಣಿನ ರಾಶಿ ತೆಗೆದು ನೋಡಿದ್ರೆ! | Up Police Rescue Newborn Baby Girl Buried Alive In Shahjahanpur



ಕ್ರೌರ್ಯದ ಪರಮಾವಧಿ ಇದು..ಅಳೋ ಶಬ್ದ ಕೇಳುತ್ತಿತ್ತು, ಕೈ ಚಾಚಿದ್ದವು, ಮಣ್ಣಿನ ರಾಶಿ ತೆಗೆದು ನೋಡಿದ್ರೆ! | Up Police Rescue Newborn Baby Girl Buried Alive In Shahjahanpur

UP crime against baby: ಒಂದು ಕೈ ಮಣ್ಣಿನಿಂದ ಹೊರಬಂದು ಇರುವೆಗಳು ಕಚ್ಚುತ್ತಿದ್ದವು. ರಕ್ತವೂ ಹರಿಯುತ್ತಿತ್ತು. ದೇಹದ ಉಳಿದ ಭಾಗವು ಮಣ್ಣಿನಲ್ಲಿ ಹೂತುಹೋಗಿತ್ತು. ದಬ್ಲೂ ಕೂಗಿದಾಗ, ಹತ್ತಿರದಲ್ಲಿದ್ದ ಜನರು ಓಡಿ ಬಂದರು. 

ಹೃದಯ ವಿದ್ರಾವಕ ಘಟನೆಯೊಂದು ಕೆಲವು ದಿನಗಳ ಹಿಂದೆಯಷ್ಟೇ ಬೆಳಕಿಗೆ ಬಂದಿದೆ. ಭಾನುವಾರ ಬೆಳಗ್ಗೆ ಸುಮಾರು 15 ದಿನಗಳ ಮುಗ್ಧ ಹೆಣ್ಣು ಮಗು ಮಣ್ಣಿನಲ್ಲಿ ಹೂತುಹೋಗಿರುವುದು ಪತ್ತೆಯಾಗಿದೆ. ಮಗುವಿನ ಅಳುವ ಧ್ವನಿಯನ್ನು ಕೇಳಿ ಮೇಕೆ ಮೇಯಿಸಲು ಹೋಗಿದ್ದ ಹುಡುಗನೊಬ್ಬ ಕೂಗಾಡಿದ್ದಾನೆ. ನಂತರ ಜನರು ಜಮಾಯಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಮಗುವನ್ನು ಪೊಲೀಸರು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ.

ಘಟನೆಯ ವಿವರ

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ. ಇಲ್ಲಿಗೆ ಸಮೀಪದ ಗ್ರಾಮದ ನಿವಾಸಿ ದಬ್ಲೂ, ಜೈತಿಪುರದಿಂದ ಗೌಹರ್‌ಪುರಕ್ಕೆ ಹೋಗುವ ದಾರಿಯಲ್ಲಿ ಬಹ್ಗುಲ್ ನದಿಯ ಸೇತುವೆಯ ಬಳಿ ಮೇಕೆಗಳನ್ನು ಮೇಯಿಸುತ್ತಿದ್ದನು. ನಂತರ ಮಣ್ಣಿನ ರಾಶಿಯ ಬಳಿ ಅಳುವ ಶಬ್ದ ಕೇಳಿಸಿತು. ಹತ್ತಿರ ಹೋಗಿ ನೋಡಿದಾಗ ಮಗುವಿನ ಒಂದು ಕೈ ಮಣ್ಣಿನಿಂದ ಹೊರಬಂದು ಇರುವೆಗಳು ಕಚ್ಚುತ್ತಿದ್ದವು. ರಕ್ತವೂ ಹರಿಯುತ್ತಿತ್ತು. ದೇಹದ ಉಳಿದ ಭಾಗವು ಮಣ್ಣಿನಲ್ಲಿ ಹೂತುಹೋಗಿತ್ತು. ದಬ್ಲೂ ಕೂಗಿದಾಗ, ಹತ್ತಿರದಲ್ಲಿದ್ದ ಜನರು ಓಡಿ ಬಂದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಜೈತಿಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಮಗುವನ್ನ ಹೊರತೆಗೆಯಲಾಯಿತು. ಪವಾಡಸದೃಶವೆಂಬಂತೆ ಮಗು ಇನ್ನೂ ಉಸಿರಾಡುತ್ತಿತ್ತು. ಅಮಾಯಕ ಮಗು ಸಂಪೂರ್ಣವಾಗಿ ಮಣ್ಣಿನಿಂದ ಮಚ್ಚಿತ್ತು. ಮಗುವನ್ನು ಪ್ರಥಮ ಚಿಕಿತ್ಸೆಗಾಗಿ ಸಿಎಚ್‌ಸಿಗೆ ಕರೆದೊಯ್ಯಲಾಯಿತು. ಅಲ್ಲಿಂದ ಆಕೆಯ ಸ್ಥಿತಿ ಗಂಭೀರವಾದಾಗ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಮಗುವಿನ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ.

ಉದ್ದೇಶಪೂರ್ವಕವಾಗಿ ಮಾಡಿರುವ ಶಂಕೆ 

ಪೊಲೀಸ್ ತನಿಖೆಯಲ್ಲಿ, ಯಾರೋ ಉದ್ದೇಶಪೂರ್ವಕವಾಗಿ ಮುಗ್ಧ ಮಗುವನ್ನು ಒಂದು ಅಡಿ ಆಳದ ಗುಂಡಿಯಲ್ಲಿ ಹೂತು ಹಾಕಿದ್ದಾರೆ ಎಂದು ಶಂಕಿಸಲಾಗಿದೆ. ಉಸಿರಾಡಲು ಸ್ವಲ್ಪ ಜಾಗ ಬಿಡಲಾಗಿತ್ತು. ಸಿಎಚ್‌ಸಿ ಉಸ್ತುವಾರಿ ಡಾ. ನಿತಿನ್ ಸಿಂಗ್ ಅವರ ಪ್ರಕಾರ, ಬಾಲಕಿಗೆ ಸುಮಾರು 10 ರಿಂದ 15 ದಿನಗಳ ವಯಸ್ಸು ಮತ್ತು ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಬಾಲಕಿಯನ್ನು ಜೀವಂತವಾಗಿ ಹೂತುಹಾಕಿದ ಆರೋಪಿಯನ್ನು ಹುಡುಕಲಾಗುತ್ತಿದೆ ಎಂದು ಪೊಲೀಸ್ ಠಾಣೆ ಉಸ್ತುವಾರಿ ಗೌರವ್ ತ್ಯಾಗಿ ತಿಳಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಬಹ್ಗುಲ್ ನದಿಗೆ ಹೋಗುವ ರಸ್ತೆಯಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ.



Source link

Leave a Reply

Your email address will not be published. Required fields are marked *