ಪುತ್ತೂರು ಲವ್ ಕೇಸ್‌ಗೆ ಮಹತ್ವದ ತಿರುವು, ಡಿಎನ್‌ಎ ವರದಿಯಿಂದ ಮಗು ಕೃಷ್ಣ ರಾವ್ ನದ್ದೇ ಎಂಬುದು ದೃಢ | Putturu Love Case Dna Test Confirms Bjp Leader Son Krishna Rao As Father Gow

ಪುತ್ತೂರು ಲವ್ ಕೇಸ್‌ಗೆ ಮಹತ್ವದ ತಿರುವು, ಡಿಎನ್‌ಎ ವರದಿಯಿಂದ ಮಗು ಕೃಷ್ಣ ರಾವ್ ನದ್ದೇ ಎಂಬುದು ದೃಢ | Putturu Love Case Dna Test Confirms Bjp Leader Son Krishna Rao As Father Gow



ಪುತ್ತೂರು ಲವ್ ಕೇಸ್‌ಗೆ ಮಹತ್ವದ ತಿರುವು, ಡಿಎನ್‌ಎ ವರದಿಯಿಂದ ಮಗು ಕೃಷ್ಣ ರಾವ್ ನದ್ದೇ ಎಂಬುದು ದೃಢ | Putturu Love Case Dna Test Confirms Bjp Leader Son Krishna Rao As Father Gow

ಪುತ್ತೂರಿನ ‘ಲವ್, ಸೆಕ್ಸ್, ದೋಖಾ’ ಪ್ರಕರಣದಲ್ಲಿ, ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಡಿಎನ್‌ಎ ವರದಿ ಬಂದಿದ್ದು, ಮಗು ಆತನದ್ದೇ ಎಂದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಸಂತ್ರಸ್ತೆಯ ಕುಟುಂಬ   ಮದುವೆ ಮಾಡಿಸಬೇಕೆಂದು ಆಗ್ರಹಿಸುತ್ತಿವೆ.

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ ಎಂದು ಆರೋಪಿಸಲ್ಪಟ್ಟಿರುವ ಲವ್, ಸೆಕ್ಸ್, ದೋಖಾ ಪ್ರಕರಣ ಇದೀಗ ಮಹತ್ವದ ಹಂತ ತಲುಪಿದೆ. ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ, ಡಿಎನ್‌ಎ ಪರೀಕ್ಷೆಯ ವರದಿ ಬಂದಿದ್ದು ಮಗು ಆತನದ್ದೇ ಎಂಬುದು ಸ್ಪಷ್ಟವಾಗಿದೆ. ಪುತ್ತೂರು ನ್ಯಾಯಾಧೀಶರ ಸಮ್ಮುಖದಲ್ಲಿ ಆರೋಪಿ ಕೃಷ್ಣ ಜೆ.ರಾವ್, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆರೋಪಿಯ ಕುಟುಂಬವೇ ಡಿಎನ್‌ಎ ಪರೀಕ್ಷೆ ನಡೆಸುವಂತೆ ಆಗ್ರಹಿಸಿತ್ತು. ಇದೀಗ ಬಂದಿರುವ ವರದಿ ಪಾಸಿಟಿವ್ ಆಗಿದ್ದು, ಕೃಷ್ಣ ಜೆ.ರಾವ್‌ನಿಂದಲೇ ಸಂತ್ರಸ್ತೆ ಗರ್ಭವತಿಯಾಗಿರುವುದು ದೃಢವಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಹಾಗೂ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದ್ದಾರೆ.

ಸಂತ್ರಸ್ತೆ ಕುಟುಂಬದ ಹೋರಾಟ

ಮೂರು ತಿಂಗಳಿನಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಸಂತ್ರಸ್ತೆಯ ಕುಟುಂಬ ಮಾಧ್ಯಮದ ಮುಂದೆ ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸಿತು. ಆರೋಪಿಯನ್ನು ಕೂಡಲೇ ಸಂತ್ರಸ್ತೆಯೊಂದಿಗೆ ಮದುವೆ ಮಾಡಿಸಬೇಕು. ನಮಗೆ ಕಾನೂನು ಹೋರಾಟ ಬೇಡ, ಇಬ್ಬರು ಒಂದಾಗಿ ಬಾಳಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ. ಈ ಹೋರಾಟದಲ್ಲಿ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಬೆಂಬಲ ಸೂಚಿಸಿ, ಹಿಂದೂ ಮುಖಂಡರು ಮುಂದೆ ಬಂದು ಮದುವೆ ನೆರವೇರಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಕೃಷ್ಣ ಜೆ.ರಾವ್ ಮತ್ತು ಸಂತ್ರಸ್ತೆಯ ಪರಿಚಯ ಶಾಲಾ ದಿನಗಳಿಂದಲೂ ಇತ್ತು ಎನ್ನಲಾಗಿದೆ. ಮದುವೆಯಾಗುವುದಾಗಿ ಭರವಸೆ ನೀಡಿ, ಆರೋಪಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮವಾಗಿ ಆಕೆ ಗರ್ಭವತಿಯಾಗಿದ್ದಳು. ನಂತರ ಕುಟುಂಬಗಳ ನಡುವೆ ಮಾತುಕತೆ ನಡೆದು ಮದುವೆಗೆ ಒಪ್ಪಿಗೆ ದೊರೆತಿದ್ದರೂ, ಬಳಿಕ ಆರೋಪಿ ಕುಟುಂಬ ಹಿಂತೆಗೆದುಕೊಂಡಿತ್ತು. ಇದರಿಂದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿತ್ತು.

2024ರ ಅಕ್ಟೋಬರ್ 11ರಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲೇ ಆರೋಪಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಲು ಯತ್ನಿಸಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾಳೆ. ವಿರೋಧಿಸಿದಾಗ ಮದುವೆಯ ಭರವಸೆ ನೀಡಿ ಮೋಸ ಮಾಡಿದ್ದಾನೆಂದು ಆಕೆ ಹೇಳಿಕೊಂಡಿದ್ದಾಳೆ. ಬಳಿಕ ಜನವರಿಯಲ್ಲಿ ಮತ್ತೆ ಇದೇ ರೀತಿ ನಡೆದಿದ್ದು, ಇದರಿಂದ ಗರ್ಭಧಾರಣೆ ಸಂಭವಿಸಿತು. ಕುಟುಂಬಗಳ ಮಧ್ಯೆ ನಡೆದ ಮಾತುಕತೆಯಲ್ಲಿ ಮೊದಲಿಗೆ ಒಪ್ಪಿಗೆ ನೀಡಿದರೂ, ನಂತರ ಕೃಷ್ಣ ಜೆ.ರಾವ್ ಮದುವೆಗೆ ನಿರಾಕರಿಸಿದ್ದರಿಂದ ಪ್ರಕರಣ ಕಾನೂನು ಹೋರಾಟಕ್ಕೆ ತಿರುಗಿತು.

ರಾಜಕೀಯ ಮತ್ತು ಸಾಮಾಜಿಕ ಅಲೆಮಾರಿ

ಬಿಜೆಪಿ ಮುಖಂಡನ ಪುತ್ರನ ವಿರುದ್ಧದ ಈ ಪ್ರಕರಣ ಈಗ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಸಂತ್ರಸ್ತೆ ಕುಟುಂಬದ ನ್ಯಾಯ ಹೋರಾಟಕ್ಕೆ ಹಿಂದೂ ಸಂಘಟನೆಗಳು ಸಹ ಬೆಂಬಲ ನೀಡುತ್ತಿದ್ದು, “ಹಿಂದೂತ್ವದ ಭದ್ರಕೋಟೆ ಪುತ್ತೂರಿನ ಮುಖಂಡರು ಮುಂದಾಗಿ ಈ ಮದುವೆಯನ್ನು ನೆರವೇರಿಸಬೇಕು” ಎಂಬ ಒತ್ತಾಯ ಹೆಚ್ಚುತ್ತಿದೆ.

ಮುಂದಿನ ಬೆಳವಣಿಗೆ

ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64(1) ಹಾಗೂ 69ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈಗ ಡಿಎನ್‌ಎ ವರದಿ ಪಾಸಿಟಿವ್ ಬಂದಿರುವುದರಿಂದ ಆರೋಪಿಯ ವಿರುದ್ಧ ಕಾನೂನು ಕ್ರಮ ಗಟ್ಟಿಯಾಗುವ ಸಾಧ್ಯತೆ ಇದೆ. ಆದರೆ, ಕುಟುಂಬ ಮತ್ತು ಸಂಘಟನೆಗಳು “ಮದುವೆಯೇ ಪರಿಹಾರ” ಎಂದು ಒತ್ತಾಯಿಸುತ್ತಿರುವ ಹಿನ್ನಲೆಯಲ್ಲಿ, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.



Source link

Leave a Reply

Your email address will not be published. Required fields are marked *