
‘ಕಣ್ಣಪ್ಪ’ ಚಿತ್ರದ ಕಥೆ ಹೀಗಿದೆ: ಶ್ರೀಕಾಲಹಸ್ತಿಯಲ್ಲಿ ಜನಿಸಿದ ತೀನ್ನಡಿಗೆ ದೇವರಲ್ಲಿ ನಂಬಿಕೆ ಇಲ್ಲ. ಶಿವಲಿಂಗವನ್ನು ಕಲ್ಲು ಎಂದು ಭಾವಿಸುತ್ತಾನೆ. ಆದರೆ ಅವನ ಹೆಂಡತಿ ಕಾಣೆಯಾದಾಗ ಅವನಲ್ಲಿ ಬದಲಾವಣೆ ಆಗುತ್ತದೆ.
ರುದ್ರ ಅವನಲ್ಲಿ ಬದಲಾವಣೆ ತರುತ್ತಾನೆ. ಶಿವನ ಮಹಿಮೆ ತಿಳಿಸುತ್ತಾನೆ. ನಂತರ ಶಿವಭಕ್ತನಾಗುವುದೇ ಈ ಚಿತ್ರದ ಕಥೆ. ಕಣ್ಣಪ್ಪನಾಗಿ ಮಂಚು ವಿಷ್ಣು ನಟಿಸಿದ್ದಾರೆ. ತೀನ್ನಡಿಯಲ್ಲಿ ದೈವಭಕ್ತಿ ಮೂಡಿಸುವ ರುದ್ರನಾಗಿ ಪ್ರಭಾಸ್ ನಟಿಸಿದ್ದಾರೆ.
ಕೀರಾತ(ಶಿವ) ಪಾತ್ರದಲ್ಲಿ ಮೋಹನ್ಲಾಲ್, ಶಿವನಾಗಿ ಅಕ್ಷಯ್ ಕುಮಾರ್, ಪಾರ್ವತಿಯಾಗಿ ಕಾಜಲ್ ನಟಿಸಿದ್ದಾರೆ. ಪೂಜಾರಿ ಮಹದೇವ ಶಾಸ್ತ್ರಿಯಾಗಿ ಮೋಹನ್ ಬಾಬು ನಟಿಸಿದ್ದಾರೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ‘ಕನ್ನಪ್ಪ’ ಚಿತ್ರವನ್ನು ಮೋಹನ್ ಬಾಬು ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ.