Headlines

ಶ್ರೀಕೃಷ್ಣದೇವರಾಯ ವಿವಿ ಅಂಕಪಟ್ಟಿಯಲ್ಲಿ ಸ್ವಾಮೀಜಿ ಫೋಟೋ: ಸಿಬ್ಬಂದಿ ಎಡವಟ್ಟಿಗೆ ವಿದ್ಯಾರ್ಥಿ ಭವಿಷ್ಯ ಅತಂತ್ರ! | Ballari Vsk University Marks Card Error Swamiji Photo Student Devaraj Place Sat

ಶ್ರೀಕೃಷ್ಣದೇವರಾಯ ವಿವಿ ಅಂಕಪಟ್ಟಿಯಲ್ಲಿ ಸ್ವಾಮೀಜಿ ಫೋಟೋ: ಸಿಬ್ಬಂದಿ ಎಡವಟ್ಟಿಗೆ ವಿದ್ಯಾರ್ಥಿ ಭವಿಷ್ಯ ಅತಂತ್ರ! | Ballari Vsk University Marks Card Error Swamiji Photo Student Devaraj Place Sat



ಶ್ರೀಕೃಷ್ಣದೇವರಾಯ ವಿವಿ ಅಂಕಪಟ್ಟಿಯಲ್ಲಿ ಸ್ವಾಮೀಜಿ ಫೋಟೋ: ಸಿಬ್ಬಂದಿ ಎಡವಟ್ಟಿಗೆ ವಿದ್ಯಾರ್ಥಿ ಭವಿಷ್ಯ ಅತಂತ್ರ! | Ballari Vsk University Marks Card Error Swamiji Photo Student Devaraj Place Sat

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು (ವಿಎಸ್‌ಕೆವಿವಿ) ವಿದ್ಯಾರ್ಥಿಯೊಬ್ಬನ ಅಂಕಪಟ್ಟಿಯಲ್ಲಿ ಆತನ ಫೋಟೋ ಬದಲು ಗವಿಸಿದ್ದೇಶ್ವರ ಸ್ವಾಮೀಜಿ ಫೋಟೋ ಮುದ್ರಿಸಿ, ಫಲಿತಾಂಶವನ್ನೂ ತಪ್ಪಾಗಿ ನಮೂದಿಸಿದೆ. ವರ್ಷ ಕಳೆದರೂ ದೋಷ ಸರಿಪಡಿಸದ ಕಾರಣ, ವಿದ್ಯಾರ್ಥಿಯ ಭವಿಷ್ಯ ಅತಂತ್ರವಾಗಿದೆ.

ಬಳ್ಳಾರಿ (ಅ.06): ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿಎಸ್‌ಕೆವಿವಿ) ಸಿಬ್ಬಂದಿಯ ಘೋರ ನಿರ್ಲಕ್ಷ್ಯ ಮತ್ತು ಎಡವಟ್ಟಿನಿಂದಾಗಿ ವಿದ್ಯಾರ್ಥಿಯೊಬ್ಬನ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ. ವಿದ್ಯಾರ್ಥಿಯ ಮಾರ್ಕ್ಸ್ ಕಾರ್ಡ್‌ನಲ್ಲಿ ಆತನ ಫೋಟೋ ಬದಲು ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಸ್ವಾಮೀಜಿಯ ಫೋಟೋ ಮುದ್ರಣವಾಗಿದೆ. ಇದನ್ನ ಸರಿಪಡಿಸುವಂತೆ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ತಪ್ಪನ್ನು ಸರಿಪಡಿಸದೇ ನಿರ್ಲಕ್ಷ್ಯ ವಹಿಸಿದೆ.

ಅಂಕಪಟ್ಟಿಯಲ್ಲಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಫೋಟೋ:

ಈ ಎಡವಟ್ಟಿಗೆ ಒಳಗಾದ ವಿದ್ಯಾರ್ಥಿ ದೇವರಾಜ್ ಬಸವರಾಜ್ ಮೂಲಿಮನಿ. ಈತ ಕೊಪ್ಪಳ ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ಮುಗಿಸಿದ್ದಾನೆ. ಈ ಕಾಲೇಜು ಬಳ್ಳಾರಿಯ ವಿಎಸ್‌ಕೆವಿವಿ ವ್ಯಾಪ್ತಿಗೆ ಬರುತ್ತದೆ. ವಿಶ್ವವಿದ್ಯಾಲಯವು ಕಳೆದ ತಿಂಗಳು ದೇವರಾಜ್‌ಗೆ 1 ರಿಂದ 4ನೇ ಸೆಮಿಸ್ಟರ್‌ಗಳ ಮೂಲ ಅಂಕಪಟ್ಟಿಗಳನ್ನು ವಿತರಿಸಿತ್ತು. ಆದರೆ, ಈ ಅಂಕಪಟ್ಟಿಗಳಲ್ಲಿ ಎರಡು ದೊಡ್ಡ ತಪ್ಪುಗಳನ್ನು ಮಾಡಲಾಗಿದೆ.

ಅಂಕಪಟ್ಟಿಯಲ್ಲಿರುವ ದೋಷಗಳು:

ವಿದ್ಯಾರ್ಥಿಯ ಫೋಟೋ ಬದಲು: ದೇವರಾಜ್‌ನ ಫೋಟೋ ಇರಬೇಕಾಗಿದ್ದ ಜಾಗದಲ್ಲಿ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಫೋಟೋವನ್ನು ಮುದ್ರಿಸಲಾಗಿದೆ.

ತಪ್ಪಾದ ಫಲಿತಾಂಶ ನಮೂದು: ಅಂಕಪಟ್ಟಿಯಲ್ಲಿ ದೇವರಾಜ್ ಎರಡನೇ ಸೆಮಿಸ್ಟರ್‌ನಲ್ಲಿ ಫೇಲ್ ಎಂದು ತಪ್ಪಾಗಿ ನಮೂದಿಸಲಾಗಿದೆ.

ಒಂದೇ ಅಂಕಪಟ್ಟಿಯಲ್ಲಿ ಫೋಟೋ ಮತ್ತು ಫಲಿತಾಂಶದ ಕುರಿತು ಇಂತಹ ಗಂಭೀರ ಎಡವಟ್ಟುಗಳು ನಡೆದಿರುವುದು ವಿಎಸ್‌ಕೆವಿವಿ ಸಿಬ್ಬಂದಿಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಒಂದು ತಿಂಗಳಾದರೂ ಸರಿಪಡಿಸದ ವಿವಿ ಆಡಳಿತ ಮಂಡಳಿ:

ಈ ಎಡವಟ್ಟು ಗೊತ್ತಾದ ತಕ್ಷಣವೇ ವಿದ್ಯಾರ್ಥಿ ದೇವರಾಜ್ ಮತ್ತು ಆತನ ಪೋಷಕರು ಬಳ್ಳಾರಿಯ ವಿಎಸ್‌ಕೆವಿವಿಗೆ ತೆರಳಿ ದೂರು ನೀಡಿದ್ದಾರೆ. ಆದರೆ, ಒಂದು ತಿಂಗಳು ಕಳೆದರೂ ವಿವಿ ಆಡಳಿತ ಮಂಡಳಿ ಈ ತಪ್ಪನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಸರಿಯಾದ ಅಂಕಪಟ್ಟಿ ಸಿಗದೆ ಇರುವುದರಿಂದ ಉನ್ನತ ವ್ಯಾಸಂಗಕ್ಕಾಗಿ ಅರ್ಜಿ ಸಲ್ಲಿಸಲು ಅಥವಾ ಉದ್ಯೋಗಕ್ಕಾಗಿ ಪ್ರಯತ್ನಿಸಲು ಸಾಧ್ಯವಾಗದೆ ವಿದ್ಯಾರ್ಥಿ ದೇವರಾಜ್‌ನ ಭವಿಷ್ಯ ಅತಂತ್ರವಾಗಿದೆ. ವಿವಿಯ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿ ಮತ್ತು ಆತನ ಪೋಷಕರು ಒಂದು ತಿಂಗಳಿಂದ ಬಳ್ಳಾರಿಯ ವಿಎಸ್‌ಕೆವಿವಿ ಕಚೇರಿಗೆ ಪದೇ ಪದೇ ಅಲೆದಾಡುವ ಪರಿಸ್ಥಿತಿ ಬಂದಿದೆ.

ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ಇಂತಹ ಮಹತ್ವದ ದಾಖಲೆಗಳ ವಿತರಣೆಯಲ್ಲಿ ವಿವಿಯ ಸಿಬ್ಬಂದಿ ತೋರಿರುವ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ವಲಯ ಮತ್ತು ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ವಿಎಸ್‌ಕೆವಿವಿ ಕುಲಪತಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು, ವಿದ್ಯಾರ್ಥಿಗೆ ಸೂಕ್ತ ಅಂಕಪಟ್ಟಿ ಒದಗಿಸಬೇಕಿದೆ.



Source link

Leave a Reply

Your email address will not be published. Required fields are marked *