ಶಿವಮೊಗ್ಗ, ಜೂನ್ 23: ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆಗೊಂಡು ತಮ್ಮದೇ ಆದ ರಾಷ್ಟ್ರಭಕ್ತರ ಬಳಗ ಸ್ಥಾಪಿಸಿಕೊಂಡಿದ್ದರೂ ಬಿಜೆಪಿಯ ಗುಂಗಿನಿಂದ ಹೊರಬಂದಿಲ್ಲ. ಈಗಲೂ ಅವರು ಬಿಜೆಪಿ ಪರವೇ ಮಾತಾಡುತ್ತಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಅವರು ವಸತಿ ಯೋಜನೆಯಲ್ಲಿ ಮುಸಲ್ಮಾನರಿಗೆ ಮೀಸಲಾತಿ ಕಲ್ಪಿಸಿರುವ ರಾಜ್ಯ ಸರ್ಕಾರದ (state government) ಕ್ರಮವನ್ನು ಪ್ರಶ್ನಿಸಿ, ಮುಸಲ್ಮಾನರು ಕಾಂಗ್ರೆಸ್ ನಿಂದ ವಿಮುಖರಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಮುಸಲ್ಮಾನರು ಗೆದ್ದಿತ್ತಿನ ಬಾಲ ಹಿಡಿಯುವರರು, ಅವರಿಗೆ ಬದ್ಧತೆ ಅನ್ನೋದಿಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ನರೇಂದ್ರ ಮೋದಿ ಜಿಂದಾಬಾದ್ ಅಂತ ಹೇಳಿ ಬಿಜೆಪಿ ವೋಟು ಹಾಕಿದರು ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ರಾಜಕೀಯ ಮತ್ತು ಸ್ನೇಹ ಬೇರೆ ಬೇರೆ, ನಾನು ಮತ್ತು ಯಡಿಯೂರಪ್ಪ ಅಣ್ಣತಮ್ಮಂದಿರಂತೆ: ಕೆಎಸ್ ಈಶ್ವರಪ್ಪ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ