ಜ್ಯೋತಿಷ್ಯ ಪ್ರಕಾರ ಸಂಘಕ್ಕಿದೆಯಂತೆ ಮಹಾಗಜಕೇಸರಿ ಯೋಗ!
ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬ ಕೂಗು ಈಗ ಕರ್ನಾಟಕದಲ್ಲಿ ಜೋರಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಬೆನ್ನಲ್ಲೇ ಅತ್ತ ಸಿಎಂ ಸಿದ್ದರಾಮಯ್ಯ, ಆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇದೀಗ ಆರ್ಎಸ್ಎಸ್ ಜನ್ಮ ತಾಳಿದ ದಿನಾಂಕ, ಸಮಯದ ಆಧಾರದಲ್ಲಿ ಖ್ಯಾತ ವಾಸ್ತು ತಜ್ಞ, ಜ್ಯೋತಿಷಿ ಡಾ. ಬಸವರಾಜ ಗುರೂಜಿ ಆ ಬಗ್ಗೆ ತೋರಿಸಿದ್ದಾರೆ.
ಆರ್ ಎಸ್ ಎಸ್ ಜನ್ಮ ಜಾತಕವನ್ನು ಪರಿಶೀಲಿಸಿದಾಗ, ಜಾತಕದಲ್ಲಿ ಮಹಾಗಜಕೇಸರಿ ಯೋಗವಿದೆ. ದಿನಾಂಕ 27-09-1925 ರ ಭಾನುವಾರ ಸ್ಥಾಪನೆಯಾಗಿರುವ ಮಾಹಿತಿ ಇದೆ. ಅದು ಶುಕ್ಲದಶಮಿ, ಧನಿಷ್ಟ ನಕ್ಷತ್ರ ಧನುರ್ ಲಗ್ನ, ಮಕರ ರಾಶಿ. ಶುಕ್ರ ಮಹಾದೇಶ ಇದ್ದು, 2042 ರ ತನಕ ಪೂರ್ಣಾಯುಷ್ಯ ಜಾತಕ ಆರ್ ಎಸ್ ಎಸ್ ನದ್ದಾಗಿದೆ. ಹೀಗಾಗಿ ಇದು ಗೋಚಾರದಲ್ಲಿ ಬರುತ್ತಿರುವ ವದಂತಿಗಳಿಗೆ ಪೂರಕವಾಗಿಲ್ಲ. ಶುಭ ದಿನ ಶುಭ ಲಗ್ನ ಶುಭ ಮಹೂರ್ತದಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಗೆ ಯಾವುದೇ ಹಾನಿ ಇಲ್ಲ.
ಇದನ್ನೂ ಓದಿ: ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ನೌಕರರಿಗೆ ಕಡಿವಾಣ ಹಾಕಿ: ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ
ಆರ್ಎಸ್ಎಸ್ ಸಂಬಂಧಿಸಿ ಈಗಿರುವ ಗ್ರಹ ಗೋಚಾರ ಇನ್ನೂ ಬಲಿಷ್ಟ ಮಟ್ಟದಲ್ಲಿ ವೃದ್ಧಿಯಾಗಲಿದೆ, ಇನ್ನೂ ವಿಸ್ತರಣೆಯಾಗುವ ಸಾಧ್ಯತೆಯಿದೆ. ನಿಷೇಧ ಎನ್ನುವ ಪದ ಇದಕ್ಕೆ ವರ್ತಿಸುವುದಿಲ್ಲ. ಕಲಿಯುಗ ಪರ್ಯಂತ ಆರ್ ಇದರಿಂದ ಮಹಾ ದೇಶ ರಕ್ಷಣೆಯ ಕಾರ್ಯ. ಜಾತಕ ರೀತ್ಯಾ ಮಹಾ ನಾಯಕರ ಉದ್ಭವ ಸಾಧ್ಯತೆ ಇದೆ. ಹಾಗೆಂದು 10 ರ ಮನೆ ಬಲಿಷ್ಠವಾಗಿದೆ. ಬುಧ ಉಚ್ಚನಾಗಿದ್ದರೆ, ಕುಜನ ಜೊತೆ ಬದ್ಧ ಶತ್ರುಗಳ ಸಮಾಗಮವನ್ನೂ ಕಾಣಬಹುದು.
ಜ್ಯೋತಿಷ್ಯ ವಿಶ್ಲೇಷಣೆ: ಡಾ. ಬಸವರಾಜ ಗುರೂಜಿ
ಜ್ಯೋತಿಷ್ಯ ಸಂಬಂಧಿತ ಇನ್ನಷ್ಟು ಲೇಖನಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ