ಮಡಿಕೇರಿ, ಅಕ್ಟೋಬರ್ 17: ಕೊಡಗಿನ ತಲಕಾವೇರಿ ಕ್ಷೇತ್ರದ ಕಾವೇರಿ ತೀರ್ಥೋದ್ಭವಕ್ಕೆ ವಿಶಿಷ್ಟ ಇತಿಹಾಸವಿದೆ. ಈ ಬಗ್ಗೆ ದೇಗುಲದ ಅರ್ಚಕ ಗುರುರಾಜ್ ಆಚಾರ್ ವಿವರಣೆ ನೀಡಿದ್ದಾರೆ. ಕಾವೇರಿ ಪುರಾಣದಲ್ಲಿ ಈ ಸ್ಥಳಕ್ಕೆ ವಿಶಿಷ್ಟ ಸ್ಥಾನವಿದೆ.ಕಾವೇರಿ ದೇವಿಯು ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವುದಾಗಿ ಭರವಸೆ ನೀಡಿದ್ದಾಳೆ. ತೀರ್ಥೋದ್ಭವದ ದಿನದಂದು ವಿಶೇಷ ಪೂಜಾ ವಿಧಿವಿಧಾನಗಳು ನಡೆಯುತ್ತವೆ. ತಲಕಾವೇರಿಯ ಬ್ರಹ್ಮ ಕುಂಡಿಕೆಯಿಂದ ಮಕರ ಲಗ್ನದಲ್ಲಿ ತೀರ್ಥೋದ್ಭವವಾಗಿದೆ. ಸಹಸ್ರಾರು ಭಕ್ತರು ನೆರೆದು ತೀರ್ಥಸ್ವರೂಪಿಣಿ ಕಾವೇರಿಯ ದರ್ಶನ ಪಡೆದರು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.