Headlines

ಆರ್ಟ್ ಆಫ್ ಲಿವಿಂಗ್ ಇನ್ಟ್ಯೂಷನ್ ಕಾರ್ಯಕ್ರಮದಲ್ಲಿ ಮಕ್ಕಳಿಂದ ಪ್ರೇರಿತರಾದ ವಿಕ್ರಾಂತ್ ಮಸ್ಸಿ

ಆರ್ಟ್ ಆಫ್ ಲಿವಿಂಗ್ ಇನ್ಟ್ಯೂಷನ್ ಕಾರ್ಯಕ್ರಮದಲ್ಲಿ ಮಕ್ಕಳಿಂದ ಪ್ರೇರಿತರಾದ ವಿಕ್ರಾಂತ್ ಮಸ್ಸಿ




<p><strong>ಬೆಂಗಳೂರು (ಜು.04): </strong>ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಲ್ಪಟ್ಟ ಹೃದಯಸ್ಪರ್ಶಿ ಕ್ಷಣದಲ್ಲಿ, ನಟ ವಿಕ್ರಾಂತ್ ಮಸ್ಸಿ ಅವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಮಕ್ಕಳೊಂದಿಗೆ ಆತ್ಮೀಯ ಸಂವಾದ ನಡೆಸಿರುವುದು ಕಂಡುಬರುತ್ತದೆ. ಆದರೆ ಇದು ಸಾಮಾನ್ಯ ಸೆಲೆಬ್ರಿಟಿ ಭೇಟಿಯಾಗಿರಲಿಲ್ಲ. ವಿಕ್ರಾಂತ್ ಅವರು ಸಂಸ್ಥೆಯ ಶಕ್ತಿಯುತ ಇನ್ಟ್ಯೂಷನ್ ಕಾರ್ಯಕ್ರಮದ (ಪ್ರಜ್ಞಾ ಯೋಗ) ಆಳವಾದ ಅನುಭವ ಪಡೆಯುತ್ತಿದ್ದರು. ಈ ಧ್ಯಾನಾಧಾರಿತ ಅಭ್ಯಾಸವು ಮಕ್ಕಳಲ್ಲಿ ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ಶಾಂತವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ.</p><p>5 ರಿಂದ 18 ವರ್ಷದ ಮಕ್ಕಳಿಗಾಗಿ ರೂಪುಗೊಂಡ ಈ ವಿಶೇಷ ಕಾರ್ಯಕ್ರಮದಲ್ಲಿ ಶ್ವಾಸದ ನಿಯಂತ್ರಣ ಹಾಗೂ ಸೂಕ್ಷ್ಮ ಅರಿವಿನ ಯೋಗಾಭ್ಯಾಸಗಳು ಅಡಕವಾಗಿವೆ. ಗುರುದೇವ ಶ್ರೀ ಶ್ರೀ ರವಿ ಶಂಕರ್ ರವರು ಈ ಅಭ್ಯಾಸವನ್ನು ‘ಬುದ್ಧಿಮತ್ತೆಯ ಮೊದಲ ಹೆಜ್ಜೆ’ ಎಂದು ವಿವರಿಸುತ್ತಾರೆ. ‘ಈ ಮಕ್ಕಳು ಅದ್ಭುತ. ಅವರಲ್ಲಿರುವ ಸ್ಪಷ್ಟತೆ… ಅದು ಬೇರೆಯೇ ಮಟ್ಟದ್ದು!’ ಎಂದು ವಿಕ್ರಾಂತ್ ತಮ್ಮ ಅನುಭವವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದು, ಮಕ್ಕಳ ಸಾಮರ್ಥ್ಯ ಅವರ ಮನಮುಟ್ಟಿದ್ದನ್ನು ಸಾರಿ ಹೇಳುವಂತಿತ್ತು.</p><p>ಈ ಕಾರ್ಯಕ್ರಮದ ಹಿಂದೆ ಇರುವ ಪ್ರೇರಕ ಶಕ್ತಿ ಗುರುದೇವರು, ‘ಅಂತಃಪ್ರಜ್ಞೆಯು ಬುದ್ಧಿವಂತಿಕೆಯ ಮೊದಲ ಹೆಜ್ಜೆ. ನಾವು ಮಕ್ಕಳಿಗೆ ಇದನ್ನು ನೈಸರ್ಗಿಕವಾಗಿ, ಒತ್ತಡ ಅಥವಾ ಶ್ರಮವಿಲ್ಲದೆ ಅರಿಯಲು ಸಹಾಯ ಮಾಡುತ್ತೇವೆ’ ಎಂದು ಹೇಳುತ್ತಾರೆ. ವಿಕ್ರಾಂತ್ ಅವರ ಈ ಆಶ್ರಮದ ಭೇಟಿಯು, ಅವರು ಅಭಿನಯಿಸುತ್ತಿರುವ ‘ವೈಟ್’ ಎಂಬ ಹೊಸ ಅಂತಾರಾಷ್ಟ್ರೀಯ ಥ್ರಿಲ್ಲರ್ ಚಿತ್ರಕ್ಕಾಗಿ ನಡೆಸುತ್ತಿರುವ ತಯಾರಿಯ ಭಾಗವೂ ಆಗಿತ್ತು. ಈ ಸಿನಿಮಾದಲ್ಲಿ ಅವರು ಸ್ವತಃ ಗುರುದೇವರ ಪಾತ್ರ ವಹಿಸುತ್ತಿದ್ದಾರೆ. ಕೊಲಂಬಿಯಾ ಸರ್ಕಾರ ಮತ್ತು ಎಫ್‌ಎಆರ್‌ಸಿ (FARC) ಬಂಡುಕೋರರ ನಡುವೆ ಶಾಂತಿ ಸ್ಥಾಪಿಸಲು ನಿಜಜೀವನದಲ್ಲಿ, ಧ್ಯಾನ ಮತ್ತು ಸಂವಾದಗಳ ಮೂಲಕ ಗುರುದೇವರು ಮಾಡಿದ ಯತ್ನದ ಆಧಾರದ ಮೇಲೆ ಕಥಾನಕ ಸಾಗುತ್ತದೆ. 50 ವರ್ಷಗಳ ನಾಗರಿಕ ಸಂಘರ್ಷದ ಅಂತ್ಯಕ್ಕೆ ದಾರಿ ಮಾಡಿಕೊಟ್ಟ ಈ ಶಾಂತಿ ಪ್ರಯತ್ನವು ಐತಿಹಾಸಿಕವಾದುದು.&nbsp;</p>&nbsp;&nbsp;&nbsp;&nbsp;View this post on Instagram&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;<p>A post shared by Art of Living (@artofliving)</p><p>&nbsp;</p><p></p><p>ಕಾಕತಾಳೀಯವೆಂಬಂತೆ, ಇದೇ ಸಮಯದಲ್ಲಿ ಗುರುದೇವರು ಪುನಃ ಕೊಲಂಬಿಯಾದಲ್ಲಿ ಶಾಂತಿಯ ಪ್ರವಾಸವನ್ನು ಮಾಡಿಬಂದಿದ್ದಾರೆ. ಅವರ ಹಸ್ತಕ್ಷೇಪದಿಂದಾಗಿ ಸಶಸ್ತ್ರ ಸಂಘರ್ಷ ಪರಿಹಾರವಾಗಿ ನಿಖರವಾಗಿ 10 ವರ್ಷಗಳ ನಂತರ. ‘ವೈಟ್’ ಚಿತ್ರವು ಧ್ಯಾನದ ರಾಜತಾಂತ್ರಿಕ ಹಾಗೂ ರಾಜಕೀಯ ಪರಿಣಾಮವನ್ನು ತೋರಿಸುತ್ತಿದ್ದರೆ, ವಿಕ್ರಾಂತ್ ಅವರ ಈ ಆಶ್ರಮ ಅನುಭವವು, ಗುರುದೇವರ ಮತ್ತೊಂದು ಶಕ್ತಿಯನ್ನೂ ಅವರಿಗೆ ಪರಿಚಯಿಸಿತು. ಅದುವೇ, ಅಂತರಂಗದ ಮೌನದ ಮೂಲಕ ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವುದು.</p>



Source link

Leave a Reply

Your email address will not be published. Required fields are marked *