
ಕ್ವಾಟ್ಲೆ ಕಿಚನ್ ಶೋನಲ್ಲಿ ನೋಡಿದ ವೀಕ್ಷಕರರು, ರಘು ಅವರಿಂದ ಅಗ್ರೆಸ್ಸಿವ್ ಆಟವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಅದೇ ರೀತಿ ಘರ್ಜಿಸುತ್ತಲೇ ಬಂದಿರುವ ರಘು, ಎಡವಟ್ಟು ಮಾಡಿಕೊಂಡಿದ್ದಾರೆ. ಸ್ಪರ್ಧಿಗಳ ಮೇಲೆ ನೀರು ಹಾಕಿ ಅದಕ್ಕೆ ಸೂಕ್ತ ಕಾರಣವನ್ನು ನೀಡಬೇಕಾಗುತ್ತದೆ. ಕಾಕ್ರೋಚ್ ಸುಧಿ ಮತ್ತು ಧ್ರುವಂತ್ ಮೇಲೆ ನೀರು ಹಾಕಿದ್ದಾರೆ. ನಂತರ ಅಶ್ವಿನಿ ಗೌಡ ಮೇಲೆಯೂ ನೀರು ಸುರಿದಿದ್ದಾರೆ. ಈ ವೇಳೆ ರಘು ಮಾತಿನಭರದಲ್ಲಿ ಸಣ್ಣದಾದ ತಪ್ಪು ಮಾಡಿದರು. ಈ ಬೆನ್ನಲ್ಲೆ ರಘು ವಿರುದ್ಧ ಅಶ್ವಿನಿ ಗೌಡ ಮತ್ತು ಜಾನ್ವಿ ರಣಕಹಳೆ ಮೊಳಗಿಸಿದ್ದಾರೆ.