
<p>ಬರ್ಮಿಂಗ್ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಆಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೂರ್ನಿಯ ಎರಡನೇ ಪಂದ್ಯವು ರೋಚk ಹಂತದತ್ತ ದಾಪುಗಾಲಿಡುತ್ತಿದೆ. ಇದರ ನಡುವೆ ಆಲ್ರೌಂಡರ್ ರವೀಂದ್ರ ಜಡೇಜಾ, ತಂಡದ ಹಿತಕ್ಕಾಗಿ ಬಿಸಿಸಿಐ ನಿಯಮ ಉಲ್ಲಂಘಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.</p><p> </p><img><p>ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎಜ್ಬಾಸ್ಟನ್ ಟೆಸ್ಟ್ನಲ್ಲಿ ಶುಭ್ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ ಮೇಲುಗೂ ಸಾಧಿಸುವಲ್ಲಿ ಯಶಸ್ವಿಯಾಗಿದೆ.</p><img><p>ಸ್ವತಃ ನಾಯಕ ಶುಭ್ಮನ್ ಗಿಲ್ ಬಾರಿಸಿದ ಆಕರ್ಷಕ ಶತಕ(261) ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಬಾರಿಸಿದ ಅಮೂಲ್ಯ 81 ಇನ್ನಿಂಗ್ಸ್ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 587 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.</p><img><p>ಇನ್ನು ಎರಡನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 20 ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿದ್ದು, ಇನ್ನೂ 510 ರನ್ಗಳ ಹಿನ್ನೆಡೆಯಲ್ಲಿದೆ.</p><img><p>ಇದೆಲ್ಲದರ ನಡುವೆ ಎರಡನೇ ದಿನದಾಟದ ಆರಂಭಕ್ಕೂ ಮುನ್ನ ರವೀಂದ್ರ ಜಡೇಜಾ ಬಿಸಿಸಿಐ ರೂಲ್ಸ್ ಉಲ್ಲಂಘಿಸಿ ಸುದ್ದಿಯಾಗಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ</p><img><p>ಹೌದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮೊದಲೇ ಬಿಸಿಸಿಐ ಕೆಲವೊಂದು ಮಹತ್ವದ ನಿಯಮಗಳನ್ನು ಆಟಗಾರರಿಗೆ ಹಾಗೂ ಅವರ ಕುಟುಂಬದವರನ್ನು ಗಮನದಲ್ಲಿಟ್ಟುಕೊಂಡು ಪ್ರಕಟಿಸಿತ್ತು.</p><img><p>ಹೌದು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮೊದಲೇ ಬಿಸಿಸಿಐ ಕೆಲವೊಂದು ಮಹತ್ವದ ನಿಯಮಗಳನ್ನು ಆಟಗಾರರಿಗೆ ಹಾಗೂ ಅವರ ಕುಟುಂಬದವರನ್ನು ಗಮನದಲ್ಲಿಟ್ಟುಕೊಂಡು ಪ್ರಕಟಿಸಿತ್ತು.</p><img><p>ಈ ನಿಯಮಗಳ ಪೈಕಿ ಎಲ್ಲಾ ಕ್ರಿಕೆಟಿಗರು ಹೋಟೆಲ್ನಿಂದ ಸ್ಟೇಡಿಯಂಗೆ ತಂಡದ ಬಸ್ನಲ್ಲಿಯೇ ಬರಬೇಕು ಎನ್ನುವ ನಿಯಮವನ್ನು ಕಡ್ಡಾಯಗೊಳಿಸಿತ್ತು. ಆದರೆ ಜಡೇಜಾ ಬಿಸಿಸಿಐ ರೂಲ್ಸ್ ಬ್ರೇಕ್ ಮಾಡಿ, ಪ್ರತ್ಯೇಕವಾಗಿ ಸ್ಟೇಡಿಯಂಗೆ ಬಂದಿದ್ದರು.</p><img><p>ಭಾರತ ತಂಡದ ಆಟಗಾರರು ಮೈದಾನಕ್ಕೆ ಬರುವ ಮೊದಲೇ ಜಡ್ಡು ಬೇರೆ ವಾಹನದಲ್ಲಿ ಮೊದಲೇ ಬಂದು ನೆಟ್ಸ್ನಲ್ಲಿ ಪ್ರಾಕ್ಟೀಸ್ ಮಾಡಿದ್ದರು. ಮೊದಲ ದಿನದಾಟದಂತ್ತಕ್ಕೆ 41 ರನ್ ಗಳಿಸಿದ್ದ ಜಡ್ಡು, ಎರಡನೇ ದಿನ ಗಿಲ್ ಜತೆ ದ್ವಿಶತಕದ ಜತೆಯಾಟವಾಡಿ ತಂಡಕ್ಕೆ ಆಸರೆಯಾದರು.</p><img><p>ಇದೀಗ ಬಿಸಿಸಿಐ ನೀತಿ ಉಲ್ಲಂಘಿಸಿದ ಜಡ್ಡುಗೆ ಶಿಕ್ಷೆಯಾಗುತ್ತಾ ಅಥವಾ ಅವರ ತಂಡದ ಒಳಿತಿಗಾಗಿ ತೆಗೆದುಕೊಂಡ ತೀರ್ಮಾನಕ್ಕೆ ಬಿಸಿಸಿಐ ಶಬ್ಬಾಶ್ ಹೇಳುತ್ತಾ ಕಾದು ನೋಡಬೇಕಿದೆ.</p>
Source link
ತಂಡದ ಒಳಿತಿಗಾಗಿ BCCI Rules ಬ್ರೇಕ್ ಮಾಡಿದ ಜಡೇಜಾ, ಆಲ್ರೌಂಡರ್ಗೆ ಶಿಕ್ಷೆ ಆಗುತ್ತಾ?